ಸಾರಾಂಶ
ಯರೇಹಂಚಿನಾಳದಿಂದ ಕೊಟುಮಚಗಿ ಗ್ರಾಮಕ್ಕೆ ಹೋಗುವ 4 ಕಿಲೋ ಮೀಟರ್ ರಸ್ತೆಯಲ್ಲಿ ದಾರಿ ಕಾಣದಂತೆ ಜಾಲಿಗಿಡಗಳು ಬೆಳೆದು ನಿಂತಿದ್ದವು. ಇದನ್ನು ಜೆಸಿಬಿ ಬಾಡಿಗೆ ಪಡೆದು ಸವಿತಾ ಸ್ವಚ್ಛಗೊಳಿಸಿದ್ದಾರೆ.
ಕುಕನೂರು:
ಗೃಹಲಕ್ಷ್ಮೀ ಯೋಜನೆಯಡಿ ಬಂದ ಹಣದಲ್ಲಿ ತಾಲೂಕಿನ ಯರೇಹಂಚಿನಾಳ ಗ್ರಾಮದ ರೈತ ಮಹಿಳೆ ಸವಿತಾ ಉಮೇಶ ನಾಗರೆಡ್ಡಿ ಜಮೀನಿಗೆ ತೆರಳುವ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದ ನಿಂತು ಮುಳ್ಳಿನ ಕಂಠಿ ತೆರವುಗೊಳಿಸಲು ಬಳಸಿದ್ದಾರೆ. ಇವರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.ಜಮೀನಿಗೆ ತೆರಳುವ ರಸ್ತೆ ಪಕ್ಕದಲ್ಲಿ ದಾರಿ ಕಾಣದಂತೆ ಜಾಲಿ ಗಿಡಗಳು ಬೆಳೆದಿದ್ದವು. ರಸ್ತೆ ಸ್ವಚ್ಛತೆಗೆ ಹಲವು ಬಾರಿ ಗ್ರಾಪಂ ಅಧಿಕಾರಿಗಳಿಗೆ ಬೇಡಿಕೆ ಸಹ ಇಟ್ಟಿದ್ದರು. ಅವರು ಸ್ವಚ್ಛತೆಗೆ ಮುಂದಾಗದ ಕಾರಣ ತಾವೇ ಗೃಹಲಕ್ಷ್ಮೀ ಯೋಜನೆಯಡಿ ಬಂದ ₹ 22000 ದಲ್ಲಿ ಮುಳ್ಳು ಕಂಠಿ ಸ್ವಚ್ಛಗೊಳಿಸಿದ್ದಾರೆ.
ಯರೇಹಂಚಿನಾಳದಿಂದ ಕೊಟುಮಚಗಿ ಗ್ರಾಮಕ್ಕೆ ಹೋಗುವ 4 ಕಿಲೋ ಮೀಟರ್ ರಸ್ತೆಯಲ್ಲಿ ದಾರಿ ಕಾಣದಂತೆ ಜಾಲಿಗಿಡಗಳು ಬೆಳೆದು ನಿಂತಿದ್ದವು. ಇದನ್ನು ಜೆಸಿಬಿ ಬಾಡಿಗೆ ಪಡೆದು ಸವಿತಾ ಸ್ವಚ್ಛಗೊಳಿಸಿದ್ದಾರೆ.ರಸ್ತೆ ಸ್ವಚ್ಛತೆ ಬಗ್ಗೆ ಹಲವು ಬಾರಿ ಅಧಿಕಾರಿಗಳು ಹೇಳಿದರೂ ಸ್ಪಂದಿಸಲಿಲ್ಲ. ಹೀಗಾಗಿ ಗೃಹಲಕ್ಷ್ಮೀ ಹಣದಲ್ಲಿ ಕೂಡಿಟ್ಟ ₹ 22000 ದಲ್ಲಿ ರಸ್ತೆ ಸ್ವಚ್ಛತೆ ಮಾಡಿಸಿದ್ದೇನೆ. ಇದರಿಂದ ರೈತರು ತಮ್ಮ ಜಮೀನಿಗೆ ತೆರಳಲು ಅನುಕೂಲವಾಗಿದೆ ಎಂದು ರೈತ ಮಹಿಳೆ ಸವಿತಾ ನಾಗರಡ್ಡಿ ಹೇಳಿದರು.