ಸಾರಾಂಶ
ಗದಗ: ಶ್ರಾವಣ ಶ್ರೇಷ್ಠ ಮಾಸ. ಈ ಶ್ರಾವಣ ಮಾಸದಲ್ಲಿ ಮಹಿಳೆಯರ ಪಾತ್ರ ಮುಖ್ಯವಾದದ್ದು, ಪೂಜೆ ಪುನಸ್ಕಾರ ಹಾಗೂ ನಮ್ಮ ಹಿಂದು ಸಂಸ್ಕೃತಿ ಪಾಲಿಸಿ ಮುಂದಿನ ಪೀಳಿಗೆಗೆ ತೊರಿಸಿಕೊಡುವಲ್ಲಿ ಮಹಿಳೆಯರ ಪಾತ್ರ ದೊಡ್ಡದು ಎಂದು ಮಹಿಳಾ ಮೋರ್ಚಾ ನಗರ ಮಂಡಲ ಅಧ್ಯಕ್ಷೆ ವಿಜಯಲಕ್ಷ್ಮೀ ಮಾನ್ವಿ ಹೇಳಿದರು.
ನಗರದ ವಾರ್ಡ್ ನಂ. 15 ಶಹಪೂರ ಪೇಟೆಯಲ್ಲಿ ಬಿಜೆಪಿ ನಗರ ಮಂಡಲ ಮಹಿಳಾ ಮೋರ್ಚಾದಿಂದ ನಡೆದ ಉಡಿ ತುಂಬುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ, ನಗರಸಭೆ ಸದಸ್ಯ ಚಂದ್ರು ತಡಸದ, ಕವಿತಾ ಬಂಗಾರಿ, ಪದ್ಮಿನಿ ಮುತ್ತಲದಿನ್ನಿ, ಶೇಖವ್ವ ಮಾಸರೆಡ್ಡಿ, ಸುಮಂಗಲಾ ಕೊನೆವಾಲ, ಜಯಶ್ರೀ ಅಣ್ಣಿಗೇರಿ, ಶೋಭಾ ಗುಗ್ಗರಿ, ಸುಜಾತಾ ಕಾಡಪ್ಪನವರ, ಶೈಲಾ ಕೋಡೆಕಲ್, ಸಾಗರಿಕ ಅಕ್ಕಿ, ಅಕ್ಷತಾ ಉಮಚಗಿ, ಅಶ್ವಿನಿ ಮಾಳೆಕೊಪ್ಪಮಠ, ಶೃತಿ ಯಳಮಲಿ, ಪೂಜಾ ಬೂಮಾ, ರಾಜೇಶ್ವರಿ ಪಟ್ಟಣಶೆಟ್ಟಿ, ರೋಹಿಣಿ ಬೊಮ್ಮನಳ್ಳಿ, ಭಾಗ್ಯಶ್ರೀ ಕುರಡಗಿ, ಲಲಿತಾ ತಡಸದ, ಮಂಜುಳಾ ಡಂಬಳ, ಸುಧಾ ಕೆರೂರ, ಲಕ್ಷ್ಮೀ ಗುರಿಕಾರ, ವಿಜಯಲಕ್ಷ್ಮೀ ಕುಬಸದ, ಶೋಭಾ ಬೆಂಗಳೂರ, ಮಾನಂದಾ ಯೆಂಡಿಗೆರಿ, ರತ್ನಕ್ಕ ಕಲ್ಲೂರ, ತಿಪ್ಪವ್ವ ಖಾನಾಪೂರ, ಸುಜಾತಾ ಮಾನ್ವಿ, ತೋಟಮ್ಮ ಹಂಪಣ್ಣನವರ, ದೀಪಾ ಇಟಗಿ, ಸೀಮಾ ಶೆಟ್ಟರ್, ಜ್ಯೋತಿ ಬಾಳಿಗೇರಿ, ರೇಣುಕಾ ಬಾಗಲಿ, ಮಂಜುಳಾ ಕುಬಸದ, ಮಂಗಳಾ ಗಡಾದ, ಸುವರ್ಣ ಭೂಸನೂರಮಠ, ವಿಜಯಲಕ್ಷ್ಮೀ ಭೂಸನೂರಮಠ ಸೇರಿದಂತೆ ಇತರರು ಇದ್ದರು.