ಸಾರಾಂಶ
ಕನಕಗಿರಿ: ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷ ಸಾಕಷ್ಟು ಶ್ರಮಿಸಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಹೇಳಿದರು.ಅವರು ಪಟ್ಟಣದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಗೃಹ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ೧೩೯ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಗುರುವಾರ ಮಾತನಾಡಿದರು.ಕಾಂಗ್ರೆಸ್ ಕೇವಲ ಅಧಿಕಾರ ಅನುಭವಿಸಿಲ್ಲ. ಅಂದು ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಕಾಂಗ್ರೆಸ್ನಲ್ಲಿದ್ದ ಹಲವು ಧುರೀಣರು ಸಕ್ರಿಯವಾಗಿ ಭಾಗವಹಿಸುವ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಸಫಲರಾಗಿದ್ದಾರೆ ಎಂದರು.೧೯೮೫ರಲ್ಲಿ ಕಾಂಗ್ರೆಸ್ ಸ್ಥಾಪನೆಯಾಗಿದ್ದು, ಅಂದಿನಿಂದ ಇಂದಿನವರೆಗೆ ಹಲವು ಗಣ್ಯರು ಪಕ್ಷ ಮುನ್ನಡೆಸಿದ್ದಾರೆ ಎಂದು ತಿಳಿಸಿದರು.ಈ ವೇಳೆ ತಾಲೂಕು ವಕ್ತಾರ ಶರಣಬಸಪ್ಪ ಭತ್ತದ, ಶರಣಬಸಪ್ಪ ಭತ್ತದ, ರವಿ ಪಾಟೀಲ್, ಪಪಂ ಸದಸ್ಯರಾದ ಶರಣೇಗೌಡ, ರಾಜಸಾಬ ನಂದಾಪುರ, ಸಿದ್ದೇಶ ಕಲುಬಾಗಿಲಮಠ, ಮಂಜುನಾಥ ಯಾದವ, ನೀಲಕಂಠ ಬಡಿಗೇರ, ಮುಕ್ತುಂಸಾಬ ಚಳಮರದ, ಸಣ್ಣ ರಾಮಣ್ಣ ಬ್ಯಾಳಿ, ನಾಗೇಶ ಬಡಿಗೇರ, ಟಿ.ಜೆ. ರಾಮಚಂದ್ರ, ಹೊನ್ನೂರಸಾಬ ಉಪ್ಪು, ನಿರುಪಾದಿ ಗೊಲ್ಲರ, ಹುಲುಗಪ್ಪ ವಾಲಿಕಾರ, ಗೋವರ್ಧನಮ್ಮ ಗೆಜ್ಜಲ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.