ಸಾರಾಂಶ
ವಿದ್ಯುತ್ ಲೈನ್ ಸ್ಪರ್ಶಿಸಿ ಸೆಂಟ್ರಿಂಗ್ ಕೆಲಸಗಾರ ಭರತವಳ್ಳಿ ಗ್ರಾಮದ ನಾಸಿರ್ ಪಾಷ (ಲಾಲು) ಎಂಬುವವರು ಭಾಗಶಃ ಸುಟ್ಟಿರುವ ಘಟನೆ ಬೈರಾಪುರ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ. ನಾಸಿರ್ ಪಾಷ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕಟ್ಟಡದ ಮೊದಲನೇ ಹಂತದ ಸೆಂಟ್ರಿಂಗ್ ಕೆಲಸ ಮಾಡುವ ವೇಳೆ ಕಟ್ಟಡಕ್ಕೆ ಅತೀ ಸಮೀಪದಲ್ಲಿರುವ ವಿದ್ಯುತ್ ತಂತಿ ತಗುಲಿ ದೇಹ ಅರ್ಧ ಭಾಗ ಸುಟ್ಟು ಹೋಗಿದೆ.
ಆಲೂರು: 11 ಕೆ ವಿ ವಿದ್ಯುತ್ ಲೈನ್ ಸ್ಪರ್ಶಿಸಿ ಸೆಂಟ್ರಿಂಗ್ ಕೆಲಸಗಾರ ಭರತವಳ್ಳಿ ಗ್ರಾಮದ ನಾಸಿರ್ ಪಾಷ (ಲಾಲು) ಎಂಬುವವರು ಭಾಗಶಃ ಸುಟ್ಟಿರುವ ಘಟನೆ ಬೈರಾಪುರ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.
ತಾಲೂಕಿನ ಬೈರಾಪುರದಲ್ಲಿ ನಾಗರಾಜು ಬಿನ್ ಬಸಪ್ಪ ಶೆಟ್ಟಿ ಎಂಬುವರಿಗೆ ಸೇರಿದ ನಿರ್ಮಾಣ ಹಂತದ ಮನೆಯಲ್ಲಿ ಭರತವಳ್ಳಿ ಗ್ರಾಮದ ನಾಸಿರ್ ಪಾಷ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕಟ್ಟಡದ ಮೊದಲನೇ ಹಂತದ ಸೆಂಟ್ರಿಂಗ್ ಕೆಲಸ ಮಾಡುವ ವೇಳೆ ಕಟ್ಟಡಕ್ಕೆ ಅತೀ ಸಮೀಪದಲ್ಲಿರುವ ವಿದ್ಯುತ್ ತಂತಿ ತಗುಲಿ ದೇಹ ಅರ್ಧ ಭಾಗ ಸುಟ್ಟು ಹೋಗಿದೆ. ಆಲೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗೆ ಹಾಸನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಆಲೂರು ಪೊಲೀಸ್ ಇಲಾಖೆಯ ಸಿಬ್ಬಂದಿ ಹಾಗು ಸೆಸ್ಕಾಂ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.