ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಯೋಗವು ಮನುಷ್ಯನ ಜೀವನದ ಅಭ್ಯಾಸಕ್ರಮ. ಅದು ವ್ಯಕ್ತಿಯ ದೇಹ, ಉಸಿರಾಟ, ಮನಸ್ಸುಗಳನ್ನು ಕೇಂದ್ರೀಕರಿಸುವ ಸಾಧನ. ಯೋಗವು ದೈಹಿಕ, ಮಾನಸಿಕ, ಬೌದ್ಧಿಕ ಮತ್ತು ಅಧ್ಯಾತ್ಮಿಕ ಆರೋಗ್ಯವನ್ನು ಸುಧಾರಿಸಲು ಸಹಕಾರಿ. ಅವನಲ್ಲಿರುವ ಅರಿಷಡ್ವರ್ಗಗಳನ್ನು ನಿಗ್ರಹಿಸುವದರೊಂದಿಗೆ ಅಂತರ್ಮುಖ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಎಂದು ಯೋಗ ಶಿಕ್ಷಕಿ ಕಲ್ಪನಾ ರಜಪೂರ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಯೋಗವು ಮನುಷ್ಯನ ಜೀವನದ ಅಭ್ಯಾಸಕ್ರಮ. ಅದು ವ್ಯಕ್ತಿಯ ದೇಹ, ಉಸಿರಾಟ, ಮನಸ್ಸುಗಳನ್ನು ಕೇಂದ್ರೀಕರಿಸುವ ಸಾಧನ. ಯೋಗವು ದೈಹಿಕ, ಮಾನಸಿಕ, ಬೌದ್ಧಿಕ ಮತ್ತು ಅಧ್ಯಾತ್ಮಿಕ ಆರೋಗ್ಯವನ್ನು ಸುಧಾರಿಸಲು ಸಹಕಾರಿ. ಅವನಲ್ಲಿರುವ ಅರಿಷಡ್ವರ್ಗಗಳನ್ನು ನಿಗ್ರಹಿಸುವದರೊಂದಿಗೆ ಅಂತರ್ಮುಖ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಎಂದು ಯೋಗ ಶಿಕ್ಷಕಿ ಕಲ್ಪನಾ ರಜಪೂರ ಹೇಳಿದರು.ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆಯ ಎದುರಿಗೆ ಇರುವ ಟೀಚರ್ಸ್ ಕಾಲೋನಿಯಲ್ಲಿ ಅಕ್ಕನ ಬಳಗದ ವತಿಯಿಂದ ಏಳು ದಿನಗಳ ಯೋಗ ಶಿಬಿರದಲ್ಲಿ ಅವರು ಮಾತನಾಡಿದರು. ನಿತ್ಯ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯಕರ ಜೀವನಶೈಲಿ ಬೆಳೆಸಲು ಇದೊಂದು ಶಕ್ತಿಯುತವಾದ ಸಾಧನ. ಒಟ್ಟಾರೆ ದೈಹಿಕ ಕಸರತ್ತು, ವ್ಯಾಯಾಮ, ಧ್ಯಾನ, ಯೋಗ, ಇವೆಲ್ಲವೂ ವ್ಯಕ್ತಿಯ ಸುಸ್ಥಿರ ಆರೋಗ್ಯ ಮತ್ತು ಯೋಗಕ್ಷೇಮದೊಂದಿಗೆ ಬದುಕಲು ಸಹಾಯಕವಾಗಿವೆ. ನಮ್ಮ ಋಷಿ ಮುನಿಗಳ ಪ್ರಕಾರ, ಅಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ-ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನದ ಶಿಕ್ಷಣವೇ ಯೋಗ. ಇಂದಿನ ಒತ್ತಡಮಯ ಮತ್ತು ಸಂಘರ್ಷಮಯವಾದ ಜೀವನದಲ್ಲಿ ನಾವೆಲ್ಲರೂ ಯೋಗ, ವ್ಯಾಯಾಮ ಮಾಡುವುದರ ಮೂಲಕ ಮಾನಸಿಕ ದೈಹಿಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಹೇಳಿದರು.
ಮಹಿಳಾ ಯೋಗ ಕ್ಷಬ್ನ ಸದಸ್ಯರಾದ ಭಾರತಿ ಸಾಲಿಮಠ, ಶಶಿಕಲಾ ಬಿರಾದಾರ, ಮಂಜುಳಾ ಜೋಶಿ, ರಾಜೇಶ್ವರಿ ಬುದ್ನಿ, ಮಹಾದೇವಿ ಪಾಟೀಲ, ವಿಜಯಲಕ್ಷ್ಮೀ ತಳವಾರ, ಸವಿತಾ ಪಾಟೀಲ, ಸಿದ್ದಮ್ಮಾ ಪಾಟೀಲ, ಸರೋಜಾ ಬಿರಾದಾರ, ಪ್ರೇಮಾ ಕನ್ನೂರ ಮುಂತಾದವರು ಇದ್ದರು.