ಸಾರಾಂಶ
ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸ್ವಸ್ಥವೃತ್ತ ವಿಭಾಗವು ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಕೇಂದ್ರ ದೆಹಲಿಯ ಪ್ರಾಯೋಜಕತ್ವದಲ್ಲಿ ಶನಿವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ‘ಯೋಗಸಂಗಮ’ ಕಾರ್ಯಕ್ರಮ ಆಯೋಜಿಸಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸ್ವಸ್ಥವೃತ್ತ ವಿಭಾಗವು ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಕೇಂದ್ರ ದೆಹಲಿಯ ಪ್ರಾಯೋಜಕತ್ವದಲ್ಲಿ ಶನಿವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ‘ಯೋಗಸಂಗಮ’ ಕಾರ್ಯಕ್ರಮ ಆಯೋಜಿಸಿತು. ‘ಯೋಗಸಂಗಮ’ವನ್ನು ಉದ್ಘಾಟಿಸಿದ ಕೇಂದ್ರ ಸರ್ಕಾರ ಆಯುಷ್ ಸಚಿವಾಲಯದ ಆಯುರ್ವೇದ ಸಲಹೆಗಾರ ಡಾ.ಕೌಸ್ತುಭ ಉಪಾಧ್ಯಾಯ, ಅವರು ಯೋಗದ ಮಹತ್ವವನ್ನು ತಿಳಿಸುತ್ತಾ, ಆಯುಷ್ ಸಚಿವಾಲಯ ಹಮ್ಮಿಕೊಂಡಂತಹ ೧೦ ಯೋಜನೆಗಳನ್ನು ವಿವರಿಸಿ ಯೋಗಾಭ್ಯಾಸದ ಮೂಲಕ ನಾವೆಲ್ಲರೂ ಸ್ವಸ್ಥರಾಗಿರೋಣ ಎಂದು ತಿಳಿಸಿದರು. ಸಮಾರಂಭದ ಅತಿಥಿಗಳಾಗಿ ಆಗಮಿಸಿದ ಉಡುಪಿ ಶಾಸಕ ಯಶ್ಪಾಲ್ ಆನಂದ ಸುವರ್ಣ, ಕಾಪು ಶಾಸಕ ಸುರೇಶ್ ಶೆಟ್ಟಿ, ಮಾಜಿ ಕೊಪ್ಪಳದ ಮಾಜಿ ಸಂಸದ ಕೆ. ವಿರೂಪಾಕ್ಷ, ತಜ್ಞವೈದ್ಯ ಡಾ. ಮಹಮ್ಮದ್ ರಫೀಕ್ ಆಗಮಿಸಿದ್ದರು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಡಾ ಮಮತಾ ಕೆ.ವಿ. ಸಂಸ್ಥೆಯ ಪ್ರಾಂಶುಪಾಲರು ಯೋಗಾಭ್ಯಾಸವು ಒಂದು ದಿನದ ಕಾರ್ಯಕ್ರಮವಾಗದೇ ಪ್ರತಿನಿತ್ಯದ ಪ್ರವೃತ್ತಿಯಾಗಬೇಕೆಂದು ತಿಳಿಸಿದರು.ವೇದಿಕೆಯಲ್ಲಿ ಆಯುರ್ವೇದ ಆಸ್ಪತ್ರೆಯ ಮುಖ್ಯ ಅಧೀಕ್ಷಕರು ಡಾ. ನಾಗರಾಜ್ ಎಸ್. ಉಪಸ್ಥಿತರಿದ್ದರು. ಯೋಗ ಸಂಗಮದ ನೋಡಲ್ ಅಧಿಕಾರಿ ಡಾ. ವಿಜಯ್ ಬಿ. ನೆಗಳೂರ್ ಅವರು ಯೋಗಸಂಗಮದ ಬಗ್ಗೆ ಪ್ರಾಸ್ಥಾವಿಕ ಮಾತುಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಡಾ ಯೋಗೀಶ ಆಚಾರ್ಯ ವಂದಿಸಿದರು. ಡಾ ಸಂದೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.ಈ ಕಾರ್ಯಕ್ರಮದಲ್ಲಿ ಸುಮಾರು ೮೦೦ ಜನರು ಈ ಯೋಗ ಸಂಗಮ ಸಮಾರಂಭದಲ್ಲಿ ಭಾಗಿಯಾಗಿ ಯೋಗಾಭ್ಯಾಸವನ್ನು ಮಾಡಿದರು. ಡಾ ಶ್ರೀನಿಧಿ ಧನ್ಯ ಮತ್ತು ಡಾ ಅರ್ಪಣಾ ರಾಧೇಶ್ ಯೋಗಾಭ್ಯಾಸದ ನೇತೃತ್ವ ವಹಿಸಿದರು. ಡಾ ಸೌಮ್ಯ ಭಟ್ ಮತ್ತು ಸಂಸ್ಥೆಯ ಅಧ್ಯಾಪಕ, ಅಧ್ಯಾಪಕೇತರ ಸಿಬ್ಬಂದಿ, ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.