ಪರಿಶ್ರಮದಿಂದ ಉನ್ನತ ಹುದ್ದೆ ಅಲಂಕರಿಸಬಹುದು: ಮಹೇಶ

| Published : Jun 11 2025, 11:49 AM IST

ಸಾರಾಂಶ

ಕಠಿಣ ಪರಿಶ್ರಮ ಪ್ರಾಮಾಣಿಕ ಪ್ರಯತ್ನದಿಂದ ಒಬ್ಬ ಸಾಮಾನ್ಯ ಮನುಷ್ಯ ಉನ್ನತ ಅಧಿಕಾರಿಯಾಗುವ ಸಾಧ್ಯವಿದೆ ಎಂದು ಕೊಪ್ಪಳ ಅಸಿಸ್ಟೆಂಟ್ ಕಮಿಷನರ್ ಮಹೇಶ ಮಾಲಗಿತ್ತಿ ಹೇಳಿದರು.

ಗದಗ: ಕಠಿಣ ಪರಿಶ್ರಮ ಪ್ರಾಮಾಣಿಕ ಪ್ರಯತ್ನದಿಂದ ಒಬ್ಬ ಸಾಮಾನ್ಯ ಮನುಷ್ಯ ಉನ್ನತ ಅಧಿಕಾರಿಯಾಗುವ ಸಾಧ್ಯವಿದೆ ಎಂದು ಕೊಪ್ಪಳ ಅಸಿಸ್ಟೆಂಟ್ ಕಮಿಷನರ್ ಮಹೇಶ ಮಾಲಗಿತ್ತಿ ಹೇಳಿದರು.

ನಗರದ ಕೆ.ಎಲ್.ಇ ಸಂಸ್ಥೆಯ ಜ.ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ನಡೆದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಯಾವ ವಿದ್ಯಾರ್ಥಿ ಜೀವನದಲ್ಲಿ ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತಾನೋ ಆ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಕಂಡಿರುತ್ತಾನೆ. ಅಂತವರ ಸಾಲಿನಲ್ಲಿ ನಾನು ನಿಲ್ಲುತ್ತೇನೆ ಎಂದರು.

ಅಧ್ಯಕ್ಷತೆಯನ್ನು ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಎಸ್.ಪಿ. ಸಂಶಿಮಠ ವಹಿಸಿದ್ದರು. ಅಶೋಕ ನಿಲುಗಲ್, ವೀರೇಶ ಕೂಗು, ಈಶಣ್ಣ ಮನವಳ್ಳಿ, ಬಿ.ಜಿ. ಶಳ್ಳಿಕೇರಿ, ಎಸ್.ಎಫ್. ಹಾದಿಮನಿ, ಡಾ. ಟಿ.ವಿ. ಕರಣಕುಮಾರ, ಪ್ರೊ. ಎಚ್.ಎಸ್. ಕೌಲಗಿ ಇದ್ದರು. ಸುಶ್ಮಿತಾ ಪೂಜಾರ್ ಪ್ರಾರ್ಥಿಸಿದರು. ಪ್ರಾ. ಪ್ರೊ. ಪಿ.ಜಿ. ಪಾಟೀಲ ಸ್ವಾಗತಿಸಿದರು. ಪ್ರೊ. ಜಿ. ವಿಶ್ವನಾಥ ವಾರ್ಷಿಕ ವರದಿ ವಾಚಿಸಿದರು. ಆರ್‌.ಜಿ. ಪಾಟೀಲ ನಿರೂಪಿಸಿದರು. ಸಚಿನ ಸಾಲಗುಂಡಿ ವಂದಿಸಿದರು.