ಯುವ ಜನತೆ ಸಾಮಾಜಿಕ ಕಳಕಳಿ ಮರೆತಂತಿದೆ

| Published : May 28 2025, 12:26 AM IST

ಸಾರಾಂಶ

ಯುವ ಜನತೆ ಸಮಾಜದ ಬಗ್ಗೆ, ಸಾಮಾಜಿಕ ಕಳಕಳಿಯನ್ನು ಮರೆತಂತಿದೆ ಎಂದು ಹಿರಿಯ ಪತ್ರಕರ್ತ ಹಾಗೂ ಹಸಿರುಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಆರ್‌.ಪಿ. ವೆಂಕಟೇಶ್ ಮೂರ್ತಿ ತಿಳಿಸಿದರು. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ ಸಮಾಜವನ್ನು ಕಟ್ಟುವ ಕೆಲಸ ಸರ್ಕಾರ ಮಾಡಬೇಕು. ಇಲ್ಲವಾದರೆ ಮುಂದೆ ದೊಡ್ಡ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ ಎಂದರು. ಹಾಗೆಯೇ ಸರ್ಕಾರ ಕೆಲಸ ಮಾಡಿದೆ ಇದ್ದರೆ ನಾವು ಸುಮ್ಮನೆ ಕೂರದೇ ಸಾಮಾಜಿಕ ಕಳಕಳಿ ಉಳ್ಳ ಎಲ್ಲರೂ ಒಗ್ಗಟ್ಟಾಗಿ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಕೆಲಸಗಳನ್ನು ಮಾಡಬೇಕು ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಸಮಾಜ ಎತ್ತ ಸಾಗುತ್ತಿದೆ ತಿಳಿಯುತ್ತಿಲ್ಲ, ಯುವ ಜನತೆ ಸಮಾಜದ ಬಗ್ಗೆ, ಸಾಮಾಜಿಕ ಕಳಕಳಿಯನ್ನು ಮರೆತಂತಿದೆ ಎಂದು ಹಿರಿಯ ಪತ್ರಕರ್ತ ಹಾಗೂ ಹಸಿರುಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಆರ್‌.ಪಿ. ವೆಂಕಟೇಶ್ ಮೂರ್ತಿ ತಿಳಿಸಿದರು.

ನಗರದ ಸಮೀಪ ಇರುವ ಹಾಸನ ವಿಶ್ವವಿದ್ಯಾನಿಲಯ ಹೇಮಗಂಗೋತ್ರಿ ಆವರಣದಲ್ಲಿ ವಿವಿಯ ಸಮಾಜಕಾರ್ಯ ವಿಭಾಗದಿಂದ ಹಮ್ಮಿಕೊಳ್ಳಲಾಗಿದ್ದ ಸಮಾಜ ಕಾರ್ಯ ದಿನವನ್ನು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ಕಾರ್ಯ ವಿಭಾಗ ಇಡೀ ಸಮಾಜದ ಕೈಗನ್ನಡಿಯಾಗಿದೆ. ಸಮಾಜದ ಬೆಳವಣಿಗೆಗೆ ಯಾವ ಕ್ರಮದಲ್ಲಿ ಮತ್ತು ಕನ್ನಡ ಶಾಲೆಗಳು ಸರ್ಕಾರಿ ಶಾಲೆಗಳ ಪರಸ್ಥಿತಿ ಎತ್ತ ಸಾಗುತ್ತಿದೆ, ಸರ್ಕಾರಗಳು ಸಾಮಾಜಿಕ ಜವಾಬ್ದಾರಿಗಳನ್ನು ಮರೆತಂತಿದೆ. ಸರ್ಕಾರಿ ಶಾಲೆಗಳನ್ನು ಇಂದು ಸಾಮಾನ್ಯ ಜನರು ದತ್ತು ಪಡೆದು ನಡೆಸುವ ಸಂದರ್ಭ ಎದುರಾಗಿರುವುದು ಅವಮಾನಕರ ಸಂಗತಿ. ಶಿಕ್ಷಣ ಉಚಿತವಾಗಿ ಎಲ್ಲರಿಗೂ ಸಿಗಬೇಕು. ಆದರೆ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ ಸಮಾಜವನ್ನು ಕಟ್ಟುವ ಕೆಲಸ ಸರ್ಕಾರ ಮಾಡಬೇಕು. ಇಲ್ಲವಾದರೆ ಮುಂದೆ ದೊಡ್ಡ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ ಎಂದರು. ಹಾಗೆಯೇ ಸರ್ಕಾರ ಕೆಲಸ ಮಾಡಿದೆ ಇದ್ದರೆ ನಾವು ಸುಮ್ಮನೆ ಕೂರದೇ ಸಾಮಾಜಿಕ ಕಳಕಳಿ ಉಳ್ಳ ಎಲ್ಲರೂ ಒಗ್ಗಟ್ಟಾಗಿ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಕೆಲಸಗಳನ್ನು ಮಾಡಬೇಕು. ಸಮಾಜ ಕಾರ್ಯದ ಮುಖ್ಯಸ್ಥರಾದ ಡಾ. ಎಸ್.ಜೆ. ಮಹೇಶ್ ಮಾತನಾಡುತ್ತಾ, ಸಮಾಜ ಕಾರ್ಯ ವಿದ್ಯಾರ್ಥಿಗಳೆಲ್ಲ ಸೇರಿ ಸಮಾಜದ ಸಮಸ್ಯೆಗಳನ್ನು ಮಾಡಿ ಸಮಾಜದಲ್ಲಿ ಪರಿಹರಿಸುವಂತ ಕ್ರಮಗಳನ್ನ ಮಾಡಬೇಕಾಗಿದೆ. ಸೋಶಿಯಲ್ ವರ್ಕ್ ಇದೆ ಆರ್ಟ್ ಆಫ್ ಸಮಾಜ ಕಾರ್ಯ ಎಂದರೆ ಸಮಾಜ ಕಾರ್ಯ ಎಂದರೆ ಜನರಿಂದ ಜನರಿಗೋಸ್ಕರ ಜನರಿಂದ ಮಾಡಿಸುವ ಕಾರ್ಯವನ್ನ ಸಾಮಾಜಿಕ ಎಂದು ಕರೆಯುತ್ತೇವೆ. ಸಮಾಜದ ಸಮಸ್ಯೆಗಳನ್ನ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಾ ಸರಕಾರದಿಂದ ಬರುವಂತಹ ಕಾರ್ಯಕ್ರಮಗಳೇನಿದೆ ಸಮಾಜದ ಕಟ್ಟ ಕಡೆಯ ಜನರಿಗೆ ತಲುಪಿಸುವ ಕಾರ್ಯಗಳನ್ನು ಮಾಡಬೇಕಾಗಿದೆ. ಸಮಾನತೆಯನ್ನು ಸಾರುವಂತ ಒಂದು ದೇಶವನ್ನು ನಮ್ಮ ಸಮಾಜ ಕಾರ್ಯ ಹೊಂದಿದೆ. ಎಲ್ಲರನ್ನೂ ಸಮಾನವಾಗಿ ನೋಡುವಂತ ಒಂದು ಕಾರ್ಯಕ್ರಮಗಳನ್ನ ಆಯೋಜನೆಗಳನ್ನು ಮಾಡಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಡಾ. ಲೋಕೇಶ್ ಎಂ.ಯು, ಡಾ.ಪ್ರದೀಪ್, ಡಾ.ಫಟ್ವರ್ದನ್, ಡಾ.ವೇದ, ಶ್ರೀಮತಿ ಭಾನು ಇನ್ನಿತರು ಉಪಸ್ಥಿತರಿದ್ದರು.