ಸಚಿವರಿಗೆ ಸಂಸತ್‌ ಕ್ಷೇತ್ರಗಳ ಜವಾಬ್ದಾರಿ ಹಂಚಿದ ಎಐಸಿಸಿ

| Published : Jan 08 2024, 01:45 AM IST / Updated: Jan 08 2024, 11:53 AM IST

ಸಾರಾಂಶ

ಈ ವರ್ಷ ನಡೆಯುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ಭರ್ಜರಿಯಾಗಿ ತಯಾರಿ ನಡೆಸಿದ್ದು, ರಾಜ್ಯದ 8 ಲೋಕಸಭೆ ಕ್ಷೇತ್ರಗಳಿಗೆ ಚುನಾವಣಾ ಉಸ್ತುವಾರಿಯನ್ನು ನೇಮಕ ಮಾಡಿದೆ.

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿಯನ್ನು ಆರಂಭಿಸಿರುವ ಕಾಂಗ್ರೆಸ್ ಪಕ್ಷ ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೂ ಸಂಯೋಜಕರನ್ನು (ಉಸ್ತುವಾರಿಗಳನ್ನು) ನೇಮಕ ಮಾಡಿದೆ,

ಕರ್ನಾಟಕದಲ್ಲಿ 28 ಲೋಕಸಭೆ ಕ್ಷೇತ್ರಗಳಿದ್ದು, ಕಾಂಗ್ರೆಸ್‌ ಈಗ ಕೇವಲ 1 ಸ್ಥಾನ ಹೊಂದಿದೆ. ಇದನ್ನು ಕನಿಷ್ಠ 20-25ಕ್ಕಾದರೂ ಹೆಚ್ಚಿಸಿಕೊಳ್ಳಬೇಕು ಎಂಬುದು ಆ ಪಕ್ಷದ ಪಣ. ಹೀಗಾಗಿ ಚುನಾವಣೆಗೆ ಇನ್ನು 4-5 ತಿಂಗಳು ಇದ್ದರೂ ಈಗಿಂದಲೇ ತಯಾರಿ ಆರಂಭಿಸಿ ಕ್ಷೇತ್ರವಾರು ಉಸ್ತುವಾರಿಗಳನ್ನು ನೇಮಿಸಿದೆ. ಎಲ್ಲರೂ ಸಿದ್ದರಾಮಯ್ಯ ಮಂತ್ರಿಮಂಡಲದ ಸಚಿವರಾಗಿದ್ದು, ಅನೇಕರು ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರೇ ಆಗಿದ್ದಾರೆ ಎಂಬುದು ಗಮನಾರ್ಹ.

ಈ ಉಸ್ತುವಾರಿಗಳು ಅಭ್ಯರ್ಥಿ ಆಯ್ಕೆಯಿಂದ ಹಿಡಿದು ಈಗಿನಿಂದಲೇ ಚುನಾವಣೆ ಪೂರ್ವಸಿದ್ಧತೆ ಆರಂಭಿಸಲಿದ್ದಾರೆ.

28 ಕ್ಷೇತ್ರಗಳ ಉಸ್ತುವಾರಿಗಳ ಪಟ್ಟಿ:

ಚಿಕ್ಕೋಡಿ- ಎಚ್‌.ಕೆ.ಪಾಟೀಲ್‌,

ಬೆಳಗಾವಿ- ಸತೀಶ್‌ ಜಾರಕಿಹೊಳಿ, 

ಬಾಗಲಕೋಟೆ- ಆರ್‌.ಬಿ. ತಿಮ್ಮಾಪುರ, 

ವಿಜಯಪುರ (ಎಸ್‌ಸಿ)- ಎಂ.ಬಿ.ಪಾಟೀಲ್‌, 

ಕಲಬುರಗಿ (ಎಸ್‌ಸಿ)- ಪ್ರಿಯಾಂಕ್‌ ಖರ್ಗೆ, 

ರಾಯಚೂರು (ಎಸ್‌ಟಿ)- ಎನ್‌.ಎಸ್‌.ಬೋಸರಾಜು, 

ಬೀದರ್‌- ಈಶ್ವರ್‌ ಖಂಡ್ರೆ, 

ಕೊಪ್ಪಳ- ಶಿವರಾಜ ತಂಗಡಗಿ, 

ಬಳ್ಳಾರಿ (ಎಸ್‌ಟಿ) - ಬಿ.ನಾಗೇಂದ್ರ, 

ಹಾವೇರಿ - ಶಿವಾನಂದ ಪಾಟೀಲ್‌, 

ಧಾರವಾಡ - ಸಂತೋಷ್‌ ಲಾಡ್‌, 

ಉತ್ತರ ಕನ್ನಡ - ಮಾಂಕಾಳ ವೈದ್ಯ, 

ದಾವಣಗೆರೆ- ಎಸ್‌.ಎಸ್‌.ಮಲ್ಲಿಕಾರ್ಜುನ, 

ಶಿವಮೊಗ್ಗ- ಮಧು ಬಂಗಾರಪ್ಪ, 

ಉಡುಪಿ, ಚಿಕ್ಕಮಗಳೂರು - ಕೆ.ಜೆ.ಜಾರ್ಜ್‌, 

ಹಾಸನ- ಕೆ.ಎನ್‌.ರಾಜಣ್ಣ, 

ದಕ್ಷಿಣ ಕನ್ನಡ- ದಿನೇಶ್‌ ಗುಂಡೂರಾವ್‌,

 ಚಿತ್ರದುರ್ಗ (ಎಸ್‌ಸಿ) - ಡಿ.ಸುಧಾರಕ್‌, 

ತುಮಕೂರು- ಜಿ.ಪರಮೇಶ್ವರ, 

ಮಂಡ್ಯ- ಚೆಲುವರಾಯಸ್ವಾಮಿ,

ಮೈಸೂರು- ಕೆ.ವೆಂಕಟೇಶ್‌, 

ಚಾಮರಾಜನಗರ (ಎಸ್‌ಸಿ) - ಎಚ್‌.ಸಿ.ಮಹದೇವಪ್ಪ, 

ಬೆಂಗಳೂರು ಗ್ರಾಮಾಂತರ - ಬಿ.ಎಸ್‌.ಸುರೇಶ್‌, 

ಬೆಂಗಳೂರು ಉತ್ತರ - ಕೃಷ್ಣ ಭೈರೇಗೌಡ, 

ಬೆಂಗಳೂರು ಕೇಂದ್ರ - ಜಮೀರ್‌ ಅಹ್ಮದ್‌ ಖಾನ್‌, 

ಬೆಂಗಳೂರು ದಕ್ಷಿಣ - ರಾಮಲಿಂಗಾ ರೆಡ್ಡಿ, 

ಚಿಕ್ಕಬಳ್ಳಾಪುರ- ಕೆ.ಎಚ್‌.ಮುನಿಯಪ್ಪ, 

ಕೋಲಾರ(ಎಸ್‌ಸಿ) - ಎಂ.ಸಿ.ಸುಧಾಕರ್‌.