ಪುತ್ರನ ಟಿಕೆಟ್‌ಗಾಗಿ ಯತ್ನ: ಬೊಮ್ಮಾಯಿ ಇಂದು ದಿಲ್ಲಿ ಯಾನ - ಶಿಗ್ಗಾವಿಯಲ್ಲಿ ಸ್ಪರ್ಧೆಗೆ ಲಾಬಿ

| Published : Oct 19 2024, 09:20 AM IST / Updated: Oct 19 2024, 09:21 AM IST

Basavaraj Bommai
ಪುತ್ರನ ಟಿಕೆಟ್‌ಗಾಗಿ ಯತ್ನ: ಬೊಮ್ಮಾಯಿ ಇಂದು ದಿಲ್ಲಿ ಯಾನ - ಶಿಗ್ಗಾವಿಯಲ್ಲಿ ಸ್ಪರ್ಧೆಗೆ ಲಾಬಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿಗ್ಗಾವಿ ಕ್ಷೇತ್ರದ ಉಪಚುನಾವಣೆಯಲ್ಲಿ ತಮ್ಮ ಪುತ್ರ ಭರತ್ ಅವರಿಗೆ ಟಿಕೆಟ್ ಪಡೆಯಲು ವರಿಷ್ಠರ ಮನವೊಲಿಸುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ದೆಹಲಿಗೆ ತೆರಳಲಿದ್ದಾರೆ

ಬೆಂಗಳೂರು: ಶಿಗ್ಗಾವಿ ಕ್ಷೇತ್ರದ ಉಪಚುನಾವಣೆಯಲ್ಲಿ ತಮ್ಮ ಪುತ್ರ ಭರತ್ ಅವರಿಗೆ ಟಿಕೆಟ್ ಪಡೆಯಲು ವರಿಷ್ಠರ ಮನವೊಲಿಸುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ದೆಹಲಿಗೆ ತೆರಳಲಿದ್ದಾರೆ.

ಭರತ್ ಅವರ ಸ್ಪರ್ಧೆಗೆ ಸ್ಥಳೀಯ ಹಲವು ಪ್ರಬಲ ಆಕಾಂಕ್ಷಿಗಳು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ವರಿಷ್ಠರಿಂದಲೇ ಸೂಚನೆ ಪಡೆದು ಪುತ್ರನನ್ನು ಕಣಕ್ಕಿಳಿಸುವ ಚಿಂತನೆಯನ್ನು ಬೊಮ್ಮಾಯಿ ಅವರು ಮಾಡುತ್ತಿದ್ದಾರೆ. ಹೀಗಾಗಿಯೇ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಚರ್ಚಿಸಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ.