ಸಾರಾಂಶ
9 ಪಕ್ಷಗಳು 4200 ಅಭ್ಯರ್ಥಿಗಳು 90 ಬಂಡಾಯ ಸ್ಪರ್ಧಿಗಳು ಪರಸ್ಪರ ,ತ ವರ್ವಾಣೆ ಯಾರ ಮತ ಯಾರಿಗೆ . ಆಳಕ್ಕೆ ಹೋದಷ್ಟು ತಲೆ ಹೋಗುತ್ತದೆ. ಹಿಂದಿನ ಲೋಕಸಭಾ ಚುನಾವಣಾ ಫಲಿತಾಂಶ ಗಣನೆಗೆ ತೆಗೆದುಕೊಂಡರೆ ಮಹಾವಿಕಾಸ ಅಘಾಡಿ ತುಂಬಾ ಸುಲಭವಾಗಿ ಮಹಾರಾಷ್ಟ್ರ ಗೆದ್ದುಕೊಳ್ಳಬೇಕು
ಪ್ರಶಾಂತ್ ನಾತು - ಏಷ್ಯಾನೆಟ್ ಸುವರ್ಣನ್ಯೂಸ್
ಅರ್ಥವಾಗದ ಮರಾಥಿ ಮತದಾರ
ಭಾರತೀಯರ ಪ್ರಕಾರ ತೀರಿಕೊಂಡವರು ಮೇಲೆ ಹೋಗಿ ಸ್ವರ್ಗ ದಿಂದ ತಾನು ಬಿಟ್ಟು ಹೋದವರು ಹೇಗೆ ಬದುಕುತ್ತಿದ್ದಾರೆ ಎಂದು ನೋಡುತ್ತಾ ಇರುತ್ತಾರೆ ಎಂದು ನಂಬಿಕೆ ಇದೆ. ನನಗಿರುವ ಕುತೂಹಲ ಮೇಲೆ ಕುಳಿತು ಬಾಳಾಸಾಹೇಬ ಥಾಕ್ರೆ ಯಶವಂತ ರಾವ್ ಚವಾಣ ಪ್ರಮೋದ ಮಹಾಜನ್ ವಿಲಾಸ ರಾವ್ ದೇಶಮುಖ್ ಗೋಪಿನಾಥ ಮುಂದೆ ಅವರಿಗೆ ಅರೇ ಇದೇನಿದು ಯಾರು ಯಾರ ಜೊತೆಗಿದ್ದಾರೆ ಎಂದು ಅರ್ಥವೇ ಆಗುತ್ತಿಲ್ಲ ಎಂದು ತಲೆ ಚಚ್ಚಿಕೊಂಡು ಕುಳಿತಿರಬಹುದು ಅನ್ನಿಸುತ್ತಿದೆ. ಯಾವ ಬಾಳ ಥಾಕ್ರೆ ಹಿಂದೂ ಹೃದಯ ಸಾಮ್ರಾಟ್ ಎಂದು ಕರೆಸಿ ಕೊಳ್ಳುತ್ತಿದ್ದರೋ ಅವರ ಮಗ ಉದ್ಧವ ಮತ್ತು ಮೊಮ್ಮಗ ಆದಿತ್ಯ ಇವತ್ತು ಮುಂಬೈ ದಂಗೆ ನಮ್ಮಿಂದಾದ ಪ್ರಮಾಡ ಎಂದು ಹೇಳುತ್ತಾ ಕ್ಷಮೆ ಕೋರುತ್ತಿದ್ದಾರೆ. ಯಾವ ಅಜಿತ್ ದಾದಾ ಪವಾರ ವಿರುದ್ಧ ಟ್ರಾಕ್ಟರ್ ತುಂಬಿಕೊಂಡು ಭ್ರಷ್ಟಾಚಾರದ ದಾಖಲೆ ತರ್ತೀನಿ ಎಂದು ಗೋಪಿನಾಥ ಮುಂದೆ ಅಬ್ಬರಿಸಿ ಹೇಳುತ್ತಿದ್ದರೋ ಅದೇ ಅಜಿತ್ ದಾದಾ ಪರವಾಗಿ ಇವತ್ತು ಮೋದಿ ಸಾಹೇಬರು ಬಂದು ಪುಣೆಯಲ್ಲಿ ಪ್ರಚಾರ ಮಾಡಿ ಹೋಗಿದ್ದಾರೆ. ಸಾಮಾನ್ಯ ಜನ ಬಿಡಿ ಘಟನುಘಾಟಿ ರಾಜಕೀಯ ವಿಶ್ಲೇಷಕರಿಗೂ ಮಹಾರಾಷ್ಟ್ರದ ರಾಜಕಾರಣ ಜನರ ಒಲವು ನಿಲುವು ಅರ್ಥ ಆಗೋದು ಕಷ್ಟ :ಆಗಿದೆ. 9 ಪಾರ್ಟಿಗಳು 4200 ಅಭ್ಯರ್ಥಿಗಳು 90 ಬಂಡು ಕೋರರು ಪರಸ್ಪರ ಮತ ವರ್ಗಾವಣೆ ಯಾರ ಮತ ಯಾರು ಒಡೆಯುತ್ತಾರೆ ಆಳ ಕ್ಕೆ ಹೋದಷ್ಟು ತಲೆ ಕೆಟ್ಟು ಹೋಗುತ್ತದೆ ಅಷ್ಟೇ. 2024 ರ ಲೋಕಸಭಾ ಫಲಿತಾಂಶ ಗಣನೆಗೆ ತೆಗೆದುಕೊಂಡರೆ ಮಹಾ ವಿಕಾಸ ಅಘಾಡಿ ತುಂಬಾ ಸುಲಭ ವಾಗಿ ಮಹಾರಾಷ್ಟ್ರ ಗೆದ್ಫು ಕೊಳ್ಳಬೇಕು. ಆದರೆ 6 ತಿಂಗಳಲ್ಲಿ ಸಾಕಷ್ಟು ಬದಲಾಗಿದೆ.
ಲೋಕಸಭಾ ಫಲಿತಾಂಶ ಗಣನೆಗೆ ತೆಗೆದುಕೊಂಡರೆ ಮಹಾ ವಿಕಾಸ ಅಘಾಡಿ ಗೂ ಮತ್ತು ಮಹಾಯುತಿ ಗೂ ಇರುವ ಶೇಕಡಾ ವಾರು ಮತ ಗಳ ಅಂತರ 0.95 ಮಾತ್ರ ಅಂದರೆ 6 ಲಕ್ಷ್ಯ 35 ಸಾವಿರ ಮತ ಗಳ ಅಂತರ ಇತ್ತು.ಅಷ್ಟು ಕಡಿಮೆ ಅಂತರ ಇದ್ದಾಗಲೂ ಮಹಾ ಅಘಾಡಿ 48 ರಲ್ಲಿ 31 ಗೆದ್ದಿತ್ತು ಮಹಾಯುತಿ ಗೆಲ್ಲಲು ಸಾಧ್ಯ ಆಗಿದ್ದು 17 ಮಾತ್ರ. ಲೋಕಸಭಾ ಚುನಾವಣೆಗೆ ಹೋಲಿಸಿದರೆ ವಿಧಾನ ಸಭಾ ಚುನಾವಣೆ ಇನ್ನಷ್ಟು ಹೆಚ್ಚು ಸ್ಥಳೀಯ ವಾಗುತ್ತದೆ ಪಕ್ಷ ಮತ್ತು ವಿಷಯ ಗಳ ಜೊತೆಗೆ ಅಭ್ಯರ್ಥಿ ಗಳ ಜಾತಿ ದುಡ್ಡು ಸಾಮಿಪ್ಯ ಕೂಡ ಪ್ರಮುಖ ವಾಗುತ್ತದೆ. ಹೀಗಾಗಿಯೂ ಏನೋ ಮಹಾ ರಾಷ್ಟ್ರದಲ್ಲಿ 288 ಸಣ್ಣ ಸಣ್ಣ ಯುದ್ಧಗಳು ನಡೆಯುತ್ತಿವೆಯೇನೋ ಎಂದು ಅನ್ನಿಸುತ್ತಿದೆ. ಅಘಾಡಿ ಮತ್ತು ಯುತಿಯ ನಡುವಿನ ಕುರುಕ್ಷೇತ್ರದ ಜೊತೆಗೆ ಅಘಾಡಿ ಒಳಗೆ ಮತ್ತು ಯುತಿಯ ಒಳಗಡೆ ಕೂಡ ಪರಸ್ಪರ ಪೈಪೋಟಿಯ ಯುದ್ಧ ನಡೆಯುತ್ತಿದೆ. ಅದರ ಜೊತೆಗೆ ರಾಜ್ ಥಾಕ್ರೆ ಓವೈಸಿ ಮತ್ತು ಪ್ರಕಾಶ ಅಂಬೇಡ್ಕರ ಯಾರ ವೋಟು ತಿನ್ನುತ್ತಾರೆ ಅನ್ನೋದು ಕಂಡು ಹಿಡಿದು ಹೊರಗಡೆ ಹೇಳೋ ಸಾಹಸ ಮಾಡೋದೇ ದುಸ್ತರದ ಕೆಲಸ
ಯಾಕೆ ಈ ಪರಿಯ ಸ್ಪರ್ಧೆ?
ಮಹಾರಾಷ್ಟ ದೊಡ್ಡ ರಾಜ್ಯವು ಹೌದು ಜೊತೆಗೆ ಮುಂಬೈ ಕಾರಣದಿಂದ ರಾಜಕೀಯ ಪಾರ್ಟಿಗಳಿಗೆ ಪುಷ್ಕಳ ದುಡ್ಡು ಹುಡುಕಿಕೊಂಡು ಬರುವ ರಾಜ್ಯವು ಹೌದು. ಮಹಾರಾಷ್ಟ್ರ ಒಂದು ಕೈಯಲ್ಲಿ ಇದ್ದರೆ ಆರಾಮಾಗಿ 3 ರಿಂದ 4 ರಾಜ್ಯಗಳ ಚುನಾವನಾ ಖರ್ಚು ವೆಚ್ಚ ನೋಡಿಕೊಳ್ಳಬಹುದು. ಅದಕ್ಕಾಗಿಯೇ ಮೋದಿ ಸಾಹೇಬರಿಗೂ ಮುಂಬೈ ಬೇಕು ರಾಹುಲ್ ಗಾಂಧೀಗೂ ಮಹಾರಾಷ್ಟ ಬೇಕು. ಯೋಚನೆ ಮಾಡಿ ಬರೀ ಮುಂಬೈ ಮಹಾನಗರ ಪಾಲಿಕೆ ಮೇಲೆ ಅಧಿಕಾರ ಇಟ್ಟುಕೊಂಡು ಶಿವಸೇನೆ 30 ವರ್ಷ ಗಳಿಂದ ದೇಶದ ಅತ್ಯಂತ ಶ್ರೀಮಂತ ಪ್ರಾದೇಶಿಕ ಪಕ್ಷ ವಾಗಿದೆ. ಮುಂಬೈ ಮೇಲೆ ಹಿಡಿತ ಇತ್ತು ಅನ್ನುವ ಕಾರಣದಿಂದ ಅಲ್ಲವೇ ಪ್ರಮೋದ ಮಹಾಜನ್ ಮಹತ್ವ ಬಿಜೆಪಿ ಯಲ್ಲಿ ಶರದ ಪವಾರ ಮುರಳಿ ದೇವರಾ ಮತ್ತು ವಿಲಾಸ ದೇಶಮುಖ ಮಹತ್ವ ಕಾಂಗ್ರೆಸ್ ನಲ್ಲಿ ಜಾಸ್ತಿ ಆಗಿದ್ದು. ಇವತ್ತು ಕೂಡ ಬಿಜೆಪಿ ಶಿವಸೇನಾ ಇಲ್ಲ ಆದರು ಪರವಾಗಿಲ್ಲ ಥಾಕ್ರೆ ಪಾರ್ಟಿ ಒಡೆಯುತ್ತೇವೆ ಪವಾರ ಕುಟುಂಬ ಒಡೆದಾದರೂ ಸರಿ ಮಹಾರಾಷ್ಟ್ರ ಕಾಂಗ್ರೆಸ್ ಕೈಯಲ್ಲಿ ಹೋಗಬಾರದು ಎನ್ನುವ ಹಠಕ್ಕೆ ಬಿದ್ದಿದ್ದು ದುಡ್ಡಿನ ಮೂಲಗಳು ಗಾಂಧೀ ಕುಟುಂಬ ಮತ್ತು ಪಾರ್ಟಿಗೆ ಸಿಗಬಾರದು ಎಂದು. ಅದೇ ಸೋನಿಯಾ ಮತ್ತು ರಾಹುಲ್ ಗಾಂಧೀ ಪೂರ್ತಿ ಸೆಕ್ಯೂಲರ್ ಸಿದ್ಧಾಂತಕ್ಕೆ ತದ್ವಿರುದ್ಧ ವಾದ ಶಿವಸೇನೆ ಯನ್ನು ಅಪ್ಪಿಕೊಂಡು ಥಾಕ್ರೆ ಯನ್ನೇ ಮುಖ್ಯಮಂತ್ರಿ ಮಾಡಲು ತಯಾರಾಗಿದ್ದು ದಿಲ್ಲಿ ಗೆಲ್ಲಬೇಕಾದರೆ ಮೊದಲು ಮುಂಬೈ ಕೈಗೆ ತೆಗೆದು ಕೊಳ್ಳಬೇಕು ಅನ್ನುವ ಕಾರಣದಿಂದ. ಹಿಂದೆಲ್ಲ ರಾಜರ ಯುದ್ಧದ ನಿರ್ಣಯ ಗಳು ಎಷ್ಟು ಹಣ ಬೊಕ್ಕಸಕ್ಕೆ ಸಿಗಬಹುದು ಎನ್ನುವುದರ ಮೇಲೆ ಅವಲಂಬಿತ ಆಗಿದ್ದವಂತೆ. ಪ್ರಜಾ ಪ್ರಭುತ್ವ ಕೊದ ಅದಕ್ಕಿಂತ ಭಿನ್ನ ವಾಗಿ ಏನು ಇಲ್ಲ
ಒಡೆಯುವ ಆಟ ಯಾಕೆ?
ಒಂದು ಕಾಲದಲ್ಲಿ ಮಹಾರಾಷ್ಟ್ರ ದ ಬಾಳಾಸಾಹೇಬ ಥಾಕ್ರೆ ವೈಯಕ್ತಿಕ ವಾಗಿ ಜನಪ್ರಿಯ ನಾಯಕ ರಾಗಿದ್ದರೆ ಶರದ್ ಪವಾರ ಅತ್ಯಂತ ಚತುರ ಮತಿ ರಾಜಕಾರಣಿ. ಭಾವನಾತ್ಮಕ ರಾಗಿದ್ದ ಬಾಳಾ ಥಾಕ್ರೆ ಅಧಿಕಾರದಲ್ಲಿದ್ದದ್ದು 5 ವರ್ಷ ಮಾತ್ರ. ಆದರೆ ಶರದ ಪವಾರ ಕಳೆದ 40 ವರ್ಷ ಗಳಲ್ಲಿ ಹೆಚ್ಚು ಕಡಿಮೆ 32 ವರ್ಷ ಅಧಿಕಾರ ದಲ್ಲಿದ್ದಾರೆ. ಯಾವಾಗ 2014 ರಲ್ಲಿ ಮೋದಿ ದಿಲ್ಲಿಯಲ್ಲಿ ಅಧಿಕಾರಕ್ಕೆ ಬಂದರೋ ಗೋಪಿನಾಥ ಮುಂದೆ ತೀರಿಕೊಂಡರೋ ಪವಾರ ಅದಾನಿ ಮೂಲಕ ಬಿಜೆಪಿಗೆ ಕಣ್ಣು ಹೊಡೆಯ ತೊಡಗಿದರು.ಆದರೆ ಆರ್ ಎಸ್ ಎಸ್ ಗೆ ಪವಾರ ಬರುವುದು ಇಷ್ಟ ಇರಲಿಲ್ಲ. 2019 ರ ಹೊತ್ತಿಗೆ ಇನ್ನೇನು ನಾವೇ ಕಾಯಂ ಅಧಿಕಾರದಲ್ಲಿ ಇರುತ್ತೇವೆ ಯಾರೇನು ಲೆಕ್ಕ ಎಂಬ ಭ್ರಮೆ ಯಲ್ಲಿದ್ದ ಬಿಜೆಪಿಗೆ ಶಿವಸೇನೆ ಉದ್ಧವ ಥಾಕ್ರೆ ಕಿರಿ ಕಿರಿ ಅನ್ನಿಸತೋಡಗಿದರು. ಉದ್ಧವ ಮಗ ಆದಿತ್ಯ ನನ್ನು ಉಪ ಮುಖ್ಯ ಮಂತ್ರಿ ಮಾಡಿ ಅಂದಾಗ ಬಿಜೆಪಿ ನಾಯಕರು ಕ್ಯಾರೇ ಅನ್ನಲಿಲ್ಲ. ಮೋದಿ ಮತ್ತು ಶಾ ರಿಗೆ ಇನ್ನೊಂದು ತಲೆ ಮಾರಿನ ಥಾಕ್ರೆ ನಾಯಕತ್ವ ಬೇಡ ಆಗಿತ್ತು. ಆಗ ಒಂದೇ ಕಾಲಕ್ಕೆ ಬಿಜೆಪಿ ಮತ್ತು ಉದ್ಧವ ಇಬ್ಬರಿಗೂ ನಾವು ಬೆಂಬಲ ಕೊಡುತ್ತೇವೆ ಎಂದು ತಾ0ಬೂಲ ಕೊಟ್ಟ ಶರದ ಪವಾರ ಆಟಕ್ಕೆ ಉದ್ಧವ ಬಿದ್ದೇ ಬಿಟ್ಟರು. ಬಿಜೆಪಿ ತನ್ನನ್ನು ಆಪೋಷನ ತೆಗೆದು ಕೊಳ್ಳುತ್ತದೆ ಆಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಮತ್ತು ರಾಷ್ಟ್ರವಾದಿ ಜೊತೆಗೆ ಹೋಗಿಯಾದರು ಮುಖ್ಯಮಂತ್ರಿ ಆಗಬೇಕು ಮೋದಿ ಮತ್ತು ಬಿಜೆಪಿಗೆ ಪಾಠ ಕಲಿಸ ಬೇಕು ಎಂದು ಉದ್ಧವ ರಾತ್ರೊರಾತ್ರಿ ಸೋನಿಯಾ ಮತ್ತು ಪವಾರ ಜೊತೆ ಸೇರಿಕೊಂಡು ಸರ್ಕಾರ ರಚಿಸಿದರು.
ಅಜಿತ್ ಪವಾರ ಬಿಜೆಪಿ ಜೊತೆ ಹೋಗಿ ರಾತ್ರಿ ಪ್ರಮಾಣ ವಚನ ಸ್ವೀಕರಿಸಿದರು ಅದು ಕೂಡ ಶರದ ಪವಾರ ರಣ ತಂತ್ರದ ಭಾಗವೇ ಆಗಿತ್ತು. ಒಂದು ರೀತಿ ಬಿಜೆಪಿ ಮತ್ತು ಶಿವಸೇನೆಯ 1990 ರಿಂದ ಶುರುವಾದ ಮೈತ್ರಿ ಯನ್ನು ಪವಾರ 2019 ರಲ್ಲಿ ಒಡೆದು ಮತ್ತೊಮ್ಮೆ ಮಹಾರಾಷ್ಟ್ರದ ಪಾಲಿಟಿಕ್ಸ್ ನಲ್ಲಿ ಪ್ರಸ್ತುತತೆ ಕಂಡುಕೊಂಡರು ಅಷ್ಟೇ. ಇದನ್ನು ನೋಡುತ್ತಾ ಕುಳಿತಿದ್ದ ಮೋದಿ ಮತ್ತು ಶಾ ಸಮಯಕ್ಕಾಗಿ ಕಾಯುತ್ತಿದ್ದರು. ಯಾವಾಗ ಕರೋನಾ ಸಂಧರ್ಭದಲ್ಲಿ ಉದ್ಧವ ಮತ್ತು ಶಿಂಧೆ ನಡುವೆ ತಿಕ್ಕಾಟದ ವಾಸನೆ ಬಡಿಯಿತೋ ಬಿಜೆಪಿ 40 ಶಾಸಕರನ್ನು ಸೆಳೆದು ಉದ್ಧವ ರನ್ನು ಅಬ್ಬೆಪಾರಿ ಯನ್ನಾಗಿ ಮಾಡಿತು. ಆದರೆ ಬಿಜೆಪಿಗೆ ಲೋಕಸಭೆಯಲ್ಲಿ ಮಹಾರಾಷ್ಟ್ರದ 48 ರಲ್ಲಿ 40 ಸೀಟು ಗೆಲ್ಲುವುದು ಮುಖ್ಯ ಇತ್ತು. 27 ಪ್ರತೀಶತ ವೋಟ್ ಬ್ಯಾಂಕ್ ಇರುವ ಬಿಜೆಪಿ ಜೊತೆ 10 ಪ್ರತೀಶತ ವೋಟ್ ಬ್ಯಾಂಕ್ ನ ಶಿಂಧೆ ಬಂದರೆ ಸಾಕಾಗುವುದಿಲ್ಲ. ಕಾಂಗ್ರೆಸ್ ಶರದ್ ಪವಾರ ಮತ್ತು ಉದ್ಧವ ಥಾಕ್ರೆ ಸೇರಿ 46 ಪ್ರತೀಶತ ವೋಟು ತೆಗೆದುಕೊಳ್ಳುತ್ತಾರೆ ಆ 4 ಪ್ರತಿಶತ ವೋಟು ತೆಗೆದುಕೊಂಡರೆ ಮಾತ್ರ ವೋಟು ಸೀಟು ಆಗಿ ಪರಿವರ್ತಿಸಬಹುದು ಎನ್ನುವ ಲೆಕ್ಕಾಚಾರ ದಲ್ಲಿ ಬಿಜೆಪಿ ಅಜಿತ್ ದಾದಾ ಪವಾರ ರನ್ನು ಚಿಕ್ಕಪ್ಪ ನಿಂದ ದೂರ ತಂದು ರಾಷ್ಟ್ರವಾದಿ ಪಾರ್ಟಿಯನ್ನು ಕೂಡ ಒಡೆಯಿತು. ಆದರೆ ಯಾವಾಗ ಬಿಜೆಪಿ ಅತಿರೇಕ ತನಕ್ಕೆ ಇಳಿದು ಉದ್ಧವ ರಿಂದ ಶಿವಸೇನೆಯ ಚಿನ್ಹೆ ಕಸಿದು ಕೊಂಡು ಶಿಂಧೆಗೆ ನೀಡಿ ಶರದ್ ಪವಾರ ರಿಂದ ಗಡಿಯಾರದ ಚಿನ್ಹೆ ಕಸಿದು ಅಜಿತ್ ದಾದಾ ಪವಾರ ಗೆ ನೀಡಿತೋ ಬೇಕೋ ಬೇಡವೋ ಜನ ಮಾನಸದ ಅನುಕಂಪ ಉದ್ಧವ ಥಾಕ್ರೆ ಮತ್ತು ಶರದ್ ಪವಾರ ಕಡೆ ತಿರುಗಿತು. ಅದೇ ಕಾರಣದಿಂದ ಮಹಾರಾಷ್ಟ್ರದಲ್ಲಿ ಬಿಜೆಪಿ 2019 ಕ್ಕೆ ಹೋಲಿಸಿದರೆ 25 ಸೀಟು ಕಳೆದು ಕೊಂಡಿತು. ಅಷ್ಟೇ ಅಲ್ಲ ಬಿಜೆಪಿ ಕಾರ್ಯಕರ್ತರೇ ಅಜಿತ್ ದಾದಾ ಜೊತೆ ಹೋಗಿದ್ದಕ್ಕೆ ಮೋದಿ ವಿರುದ್ಧವೆ ಬೇಸರಿಸಿ ಕೊಂಡರು. ಹಾಗೆಯೇ ನೋಡಿ ಮೋದಿ ಇರಲಿ ಇಂದಿರಾ ಇರಲಿ too much is too bad ಅದು ಪ್ರಕೃತಿಯ ನಿಯಮ
ಲೋಕಸಭೆಯಲ್ಲಿದ್ದ ಫ್ಯಾಕ್ಟರ್ ಗಳೇನು?
ಲೋಕಸಭಾ ಚುನಾವಣೆಯಲ್ಲಿ ಮಹಾ ವಿಕಾಸ ಅಘಾಡಿಗೆ ಅತೀ ಹೆಚ್ಚು ಲಾಭ ಆಗಿದ್ದು 33 ಪ್ರತಿಶತ ಇರುವ ಮರಾಥಾ ಸಮುದಾಯ ಮೀಸಲಾತಿ ಕಾರಣದಿಂದ ಬಿಜೆಪಿ ಮತ್ತು ಫಡನವೀಸ ವಿರುದ್ಧ ಮುನಿಸಿ ಕೊಂಡಿದ್ದು. ಮರಾಥವಾಡಾ ದಲ್ಲಿ ಬಿಜೆಪಿ ಕುಸಿಯೋದಕ್ಕೆ ಇದು ಮುಖ್ಯ ಕಾರಣ.ಅದರ ಜೊತೆಗೆ ಬಿಜೆಪಿ 400 ಪಾರ ಸಂವಿಧಾನ ಬದಲಾವಣೆಗೆ ಅನ್ನೋದು ದಲಿತ ವೋಟು ಗಳನ್ನು ವಿಧರ್ಭದಲ್ಲಿ ಕಾಂಗ್ರೆಸ್ ಪರವಾಗಿ ಹೋಗುವಂತೆ ಮಾಡಿತು.ಮುಂಬೈಯಲ್ಲಿ ಮುಸ್ಲಿಂ ರು ಸಾರಾಸಾಗಟಾಗಿ ಶಿವಸೇನೆ ಜೊತೆಗೆ ನಿಂತ ಕಾರಣ ಉದ್ಧವ ಮುಂಬೈ ನಲ್ಲೇ 6 ರಲ್ಲಿ 4 ಗೆದ್ದರು. ಶರದ ಪವಾರ ಮೇಲಿನ ಅನುಕಂಪ ಪಶ್ಚಿಮ ಮಹಾ ರಾಷ್ಟ್ರ ದಲ್ಲಿ ಸೋಲಿಗೆ ಕಾರಣ ವಾಯಿತು. ಇದರ ಜೊತೆಗೆ ಬಿಜೆಪಿ ಮತಗಳು ಶಿಂಧೆ ಗೆ ವರ್ಗಾವಣೆ ಆದವು ಆದರೆ ಅಜಿತ್ ದಾದಾ ಪವಾರ ಗೆ ಸುತಾರಾಮ್ ವರ್ಗಾವಣೆ ಆಗಲಿಲ್ಲ.
ವಿಧಾನ ಸಭೆಯ ಫ್ಯಾಕ್ಟರ್ ಗಳೇನು?
ಮತದಾರನ ಸಿಟ್ಟು ಅನೇಕ ಬಾರಿ ಒಂದು ಚುನಾವಣೆಯಲ್ಲಿ ವಿರುದ್ಧ ವೋಟು ಕೊಟ್ಟ ನಂತರ ಕಡಿಮೆ ಆಗುತ್ತದೆ ಅಂತೆ. ಕುಕ್ಕರ ನ ಸೀಟಿ ಹೊಡೆದು ಆವಿ ಹೊರಟು ಹೋದ ಹಾಗೇ. 6 ತಿಂಗಳ ನಂತರ ನಡೆಯುತ್ತಿರುವ ಚುನಾವಣೆಯಲ್ಲಿ ಲೋಕಸಭೆಯ ಟೈಮ್ ಅಲ್ಲಿ ಮಹಾಯುತಿ ವಿರುದ್ಧ ಇದ್ದ ಸಿಟ್ಟು ಕಾಣುತ್ತಿಲ್ಲ ಅದಕ್ಕೆ ಕಾರಣ ಮಹಾಯುತಿ ಸರ್ಕಾರ ಸುಮಾರು 50 ಲಕ್ಷ್ಯ ಮಹಿಳೆಯರಿಗೆ ಜೂನ್ ನಿಂದ ಪ್ರತಿ ತಿಂಗಳು 1500 ರೂಪಾಯಿ ಲಾಡಕಿ ಬಹಿಣ್ ಯೋಜನೆ ಮೂಲಕ ಹಾಕಿದ್ದು. ಜೊತೆಗೆ ಈ ಬಾರಿ ಮರಾಥಾ ಕ್ರೋಢಿಕರಣಕ್ಕೆ ಪ್ರತಿಯಾಗಿ 27 ಪ್ರತಿಶತ ಇರುವ ಹಿಂದುಳಿದ ವರ್ಗಗಳು ಮಹಾಯುತಿ ಹಿಂದೆ ಗಟ್ಟಿಯಾಗಿ ನಿಂತು ಕೊಂಡಿದ್ದು. ಅದರಲ್ಲೂ ಮಾಳಿ ಕುರುಬರು ಮತ್ತು ವಂಜಾರಿ ಸಮುದಾಯ ಗಳು ಪಕ್ಕಾ ಮಹಾಯುತಿ ಜೊತೆ ನಿಂತು ಕೊಂಡಿವೆ. ಆದರೆ ಸಿಟ್ಟು ಕಡಿಮೆ ಆಗಿರುವುದು ಕಾಣುತ್ತಿದೆಯೇ ಹೊರತು ವಾತಾವರಣ ಪೂರ್ತಿ ಮಹಾಯುತಿ ಪರವಾಗಿದೆ ಅಂತಲೂ ಸ್ಪಷ್ಟ ಅಭಿಪ್ರಾಯಕ್ಕೆ ಬರಲು ಸಾಧ್ಯ ಆಗುತ್ತಿಲ್ಲ. ಹೀಗಾಗಿ ಪರವಾದ ಮತ್ತು ವಿರುದ್ಧ ವಾದ ಅಲೆ ಇಲ್ಲದೇ ಇದ್ದಾಗ ಜಾತಿ ಮತ್ತು ದುಡ್ಡಿನ ಪಾತ್ರ ಪ್ರಧಾನ ವಾಗಿರುವ ಕಾರಣ ಪ್ರತಿಯೊಂದು ವಿಭಾಗದಲ್ಲೂ ವೋಟಿಂಗ್ ವಿಧಾನ ಭಿನ್ನವಿದೆ. ಮರಾಥ ವಾಡಾ ವೋಟಿನ ವಿಧಾನಕ್ಕೂ ಉತ್ತರ ಮಹಾರಾಷ್ಟ್ರ ಕೊಂಕಣಕ್ಕೂ ತುಂಬಾ ವ್ಯತ್ಯಾಸ ಕಾಣುತ್ತಿದೆ. ಸರಳ ವಾಗಿ ಹೇಳೋದು ಆದರೆ ಲಾಡಕಿ ಬಹಿಣ್ ಮತ್ತು ಹಿಂದುಳಿದ ವರ್ಗಗಳು ಗಟ್ಟಿಯಾಗಿ ನಿಂತುಕೊಂಡು ಬಿಜೆಪಿ ವೋಟುಗಳು ಅಜಿತ್ ಪವಾರ ಗೂ ವರ್ಗಾವಣೆ ಗೊಂಡರೆ ಮಹಾಯುತಿ ಗೊಂದು ಅವಕಾಶ ಸಿಗಬಹುದು. ಇಲ್ಲವಾದಲ್ಲಿ ಇವು ಕಾಗದದಲ್ಲೇ ಉಳಿದರೆ ಮಹಾ ವಿಕಾಸ ಅಘಾಡಿ ಮೇ ನ ಫಲಿತಾಂಶ ಪುನರಾವರ್ತಿಸ ಬಹುದು
ಅಂತಿಮ ವಾಗಿ ಏನಾಗಬಹುದು?
ಮಹಾರಾಷ್ಟ್ರದಲ್ಲಿ ಬಿಜೆಪಿ ಏಕಾಂಗಿ ಯಾಗಿ ದೊಡ್ಡ ಪಕ್ಷವಾಗಿ 25 ರಿಂದ 26 ಪ್ರತಿಶತ ಮತ ಗಳೋ0ದಿಗೆ 80 ರಿಂದ 90 ಸೀಟು ಹಾಗೂ ಕಾಂಗ್ರೆಸ್ 50 ರಿಂದ 60 ಸೀಟು ಪಡೆಯುವ ಬಗ್ಗೆ ಬಹುತೇಕ ಎಲ್ಲಾ ಸರ್ವೇ ಮಾಡುವವರ ಸರ್ವ ಸಮ್ಮತಿಯಿದೆ. ಮರಾಥವಾಡಾ ಮತ್ತು ವಿಧರ್ಭದ ಒಟ್ಟು 72 ಕ್ಷೇತ್ರ ಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ನೇರ ಹಣಾಹಣಿ ಯಿದೆ.ಅದರಲ್ಲಿ ಯಾರು ಹೆಚ್ಚು ಗೆಲ್ಲುತ್ತಾರೆ ಅನ್ನೋದು ಫೈನಲ್ ನಂಬರ್ ಮೇಲೆ ಪರಿಣಾಮ ಬೀರಲಿದೆ.ಆದರೆ ನಿಜವಾದ ಫೈಟ್ ಇರುವುದು ಉದ್ಧವ ಮತ್ತು ಶಿಂಧೆ ನಡುವೆ ಮುಂಬೈ ಮತ್ತು ಕೊಂಕಣದ 40 ಕ್ಷೇತ್ರ ಗಳಲ್ಲಿ ನೇರ ಪೈಪೋಟಿ ಇದ್ದು ಯಾರು ಹೆಚ್ಚು ಸೀಟು ತರುತ್ತಾರೋ ಆ ಒಕ್ಕೂಟ ಅಧಿಕಾರ ಸಿಗುವ ಸಾಧ್ಯತೆ ಜಾಸ್ತಿ. ಅದೇ ರೀತಿ ಪಶ್ಚಿಮ ಮಹಾರಾಷ್ಟ್ರ ದ 40 ಸೀಟು ಗಳಲ್ಲಿ ಪವಾರ ವೆರ್ಸಸ್ ಪವಾರ ಫೈಟ್ ಇದೆ. ಇನ್ನೊಂದು ಕಡೆ 90 ಬಂಡು ಕೋರರು ಇದ್ದಾರೆ. ಮಗದೊಂದು ಕಡೆ ರಾಜ್ ಥಾಕ್ರೆ ಮುಂಬೈ ನಲ್ಲಿ ಯಾರ ವೋಟು ಕಡಿಯುತ್ತಾರೆ ಓವೈಸಿ ಮರಾಥ ವಾಡಾ ಮತ್ತು ಮುಂಬೈ ನ ಲ್ಲಿ ಎಷ್ಟು ಮುಸ್ಲಿಂ ವೋಟು ತೆಗೆದು ಕೊಳ್ಳುತ್ತಾರೆ ಮತ್ತು ಬಹುಜನ ವಂಚಿತ ಅಘಾಡಿ ಯ ಪ್ರಕಾಶ ಅಂಬೇಡ್ಕರ ಎಷ್ಟು ವೋಟು ಯಾರದು ಕಡಿಯುತ್ತಾರೆ ಅನ್ನೋದು ಕೂಡ ಫೈನಲ್ ಸಂಖ್ಯೆ ಗೆ ನಿರ್ಣಾಯಕ ಅಂಶ ಗಳು