ಕ್ಷಮೆ ಕೇಳುವವರೆಗೂ ರಾಜ್ಯದಲ್ಲಿ ನಟಕಮಲ್‌ಹಾಸನ್‌ ಚಿತ್ರ ಬಿಡುಗಡೆ ಇಲ್ಲ

| N/A | Published : May 30 2025, 12:21 AM IST / Updated: May 30 2025, 04:09 AM IST

kamal hassan, vikram, indian2
ಕ್ಷಮೆ ಕೇಳುವವರೆಗೂ ರಾಜ್ಯದಲ್ಲಿ ನಟಕಮಲ್‌ಹಾಸನ್‌ ಚಿತ್ರ ಬಿಡುಗಡೆ ಇಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

: ‘ನಟ ಕಮಲ್ ಹಾಸನ್ ಹಿರಿಯರು. ಯಾವುದು ಸರಿ- ತಪ್ಪು ಎಂಬುದು ಅವರಿಗೆ ಗೊತ್ತಿರುತ್ತೆ. ಅವರಿಗೂ ಕನ್ನಡ ಭಾಷೆ ಬಗ್ಗೆ ಪ್ರೀತಿ ಇದೆ. ಅದನ್ಯಾಕೆ ದೊಡ್ಡದು ಮಾಡ್ತೀರಾ’ ಎಂದು ಶಿವರಾಜ್‌ ಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ.

 ಬೆಂಗಳೂರು : ಕನ್ನಡ ಭಾಷೆ ಹುಟ್ಟಿದ್ದೇ ತಮಿಳಿನಿಂದ ಎಂಬ ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿರುವ ನಟ ಕಮಲ್‌ಹಾಸನ್‌ ಅವರು ಶುಕ್ರವಾರದೊಳಗೆ ಕ್ಷಮೆ ಕೇಳಬೇಕು. ಇಲ್ಲದೇ ಹೋದರೆ ಅವರ ಸಿನಿಮಾ ‘ಥಗ್‌ ಲೈಫ್‌’ ರಾಜ್ಯದಲ್ಲಿ ಬಿಡುಗಡೆಯಾಗಲು ಬಿಡುವುದಿಲ್ಲ ಎಂದು ಕನ್ನಡ ಚಿತ್ರೋದ್ಯಮ ಎಚ್ಚರಿಕೆ ನೀಡಿದೆ.

ಕಮಲ್‌ಹಾಸನ್‌ ಉದ್ಧಟತನದ ಹಿನ್ನೆಲೆಯಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಗುರುವಾರ ಸಭೆ ನಡೆಯಿತು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಅಧ್ಯಕ್ಷ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು, ‘ಕಮಲ್‌ ಉದ್ಧಟತನ ನೋಡಿದ್ದೇನೆ. ಅವರು ಕ್ಷಮೆ ಕೇಳದೇ ಇಲ್ಲಿ ಹೇಗೆ ಸಿನಿಮಾ ಬಿಡುಗಡೆ ಮಾಡುತ್ತಾರೋ ನಾವೂ ನೋಡ್ತೀವಿ. ಹಂಚಿಕೆದಾರರೂ ನಮ್ಮ ಜೊತೆ ಕೈಜೋಡಿಸುವ ವಿಶ್ವಾಸವಿದೆ. ಕಮಲ್‌ ಬಗ್ಗೆ ಯಾವುದೇ ಕನಿಕರ ಇಲ್ಲ’ ಎಂದು ಹೇಳಿದರು.

‘ಯಾರೇ ಆದರೂ ಕನ್ನಡದ ಬಗ್ಗೆ ತಪ್ಪು ಮಾತಾಡಿದರೆ ನಾವು ಸಹಿಸೋದಿಲ್ಲ. ಅವರು ನಾಳೆಯೊಳಗೆ (ಶುಕ್ರವಾರ) ಕ್ಷಮೆ ಕೇಳದಿದ್ದರೆ ಸಿನಿಮಾ ಬಿಡುಗಡೆ ಮಾಡಲು ಬಿಡುವುದಿಲ್ಲ. ಈಗಾಗಲೇ ಕನ್ನಡಪರ ಸಂಘಟನೆಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರದವರು ಕಮಲ್‌ ನಿಲುವು ಖಂಡಿಸಿದ್ದಾರೆ. ಈಗ ನಾವೆಲ್ಲ ಒಗ್ಗಟ್ಟಾಗಿ ಜವಾಬ್ದಾರಿಯುತವಾಗಿ ನಾಡು-ನುಡಿ ಬಗ್ಗೆ ಕಳಕಳಿ ಮೆರೆಯಬೇಕಿದೆ. ಹೀಗಾಗಿ ಅವರು ಕ್ಷಮೆ ಕೇಳದಿದ್ದರೆ ಅವರ ಸಿನಿಮಾ ಬಿಡುಗಡೆ ಆಗಲ್ಲ. ಮುಂದಿನ ದಿನದಲ್ಲಿ ಏನು ತೊಂದರೆ ಅನುಭವಿಸ್ತಾರೋ ಅನುಭವಿಸಲಿ’ ಎಂದಿದ್ದಾರೆ. ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ‘ಕಮಲ್‌ ಕ್ಷಮೆ ಕೇಳಲೇಬೇಕು’ ಎಂದು ಆಗ್ರಹಿಸಿದ್ದಾರೆ.

ನಟಿ ಜಯಮಾಲಾ ಮಾತನಾಡಿ, ‘ಕನ್ನಡತನಕ್ಕೆ ಧಕ್ಕೆ ಬಂದಾಗ ಕಮಲ್‌ ಅವರಿಗೆ ಮನದಟ್ಟು ಮಾಡಬೇಕಾಗುತ್ತೆ. ವಾಣಿಜ್ಯ ಮಂಡಳಿ ಕಮಲ್‌ ಅವರನ್ನು ಸಂಪರ್ಕಿಸಿ ಅವರ ತಪ್ಪು ಅವರಿಗೆ ತಿಳಿಸಿಕೊಡುವ ಪ್ರಯತ್ನದಲ್ಲಿದೆ. ಇದರಿಂದ ಕನ್ನಡಿಗರಿಗೆ ನೋವಾಗಿದೆ. ಅಲ್ಲದೆ ಫಿಲಂ ಚೇಂಬರ್‌ ಭಾಷಾತಜ್ಞರಿಂದ ವಿವರ ಪಡೆಯಲಿದೆ. ಭಾಷೆ ವಿಷಯದಲ್ಲಿ ಉದ್ಧಟತನ ಮಾಡಿದರೆ ಕನ್ನಡದ ಮನಸ್ಸುಗಳು ಸುಮ್ಮನೆ ಕೂರಲ್ಲ. ಕನ್ನಡಿಗರ ಮನಸ್ಸು ವಿಶಾಲ. ಆದರೆ ಆ ಭಾಷೆಯ ಘನತೆಗೆ ಧಕ್ಕೆ ಬಂದರೆ ಕನ್ನಡಿಗರು ಸುಮ್ಮನಿರುವುದಿಲ್ಲ. ನಾವೆಷ್ಟೇ ದೊಡ್ಡ ಕಲಾವಿದರಾದರೂ ಒಂದು ಭಾಷೆ, ಪ್ರಾಂತ್ಯ, ಸಂಸ್ಕೃತಿಗಿಂತ ದೊಡ್ಡವರಲ್ಲ ಎಂಬುದನ್ನು ಅರಿಯಬೇಕು. ಶಿವಣ್ಣ ಅವರಿಗೆ ಆ ಕಾರ್ಯಕ್ರಮದಲ್ಲಿ ಕಮಲ್‌ ಅವರು ಮಾತನಾಡಿರುವುದು ಸ್ಪಷ್ಟವಾಗಿಲ್ಲ. ಹೀಗಾಗಿ ಅವರು ದನಿ ಎತ್ತಲಿಲ್ಲ’ ಎಂದು ಹೇಳಿದರು.

ನಿರ್ಮಾಪಕ ಚಿನ್ನೇಗೌಡ, ‘ಕಮಲ್‌ ಅವರು ಎಷ್ಟೋ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಆದಷ್ಟು ಬೇಗ ಅವರು ಕ್ಷಮೆ ಕೇಳಬೇಕು. ಸಮರ್ಥನೆಗಿಂತ ಕ್ಷಮೆ ಕೇಳಿದರೆ ಅವರಿಗೇ ಉತ್ತಮ’ ಎಂದರು.

ಅದನ್ಯಾಕೆ ದೊಡ್ಡದು ಮಾಡ್ತೀರಾ

ಬೆಂಗಳೂರು: ‘ನಟ ಕಮಲ್ ಹಾಸನ್ ಹಿರಿಯರು. ಯಾವುದು ಸರಿ- ತಪ್ಪು ಎಂಬುದು ಅವರಿಗೆ ಗೊತ್ತಿರುತ್ತೆ. ಅವರಿಗೂ ಕನ್ನಡ ಭಾಷೆ ಬಗ್ಗೆ ಪ್ರೀತಿ ಇದೆ. ಅದನ್ಯಾಕೆ ದೊಡ್ಡದು ಮಾಡ್ತೀರಾ’ ಎಂದು ಶಿವರಾಜ್‌ ಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಶಿವಣ್ಣ, ‘ಕಮಲ್‌ ಅವರು ಸಾಕಷ್ಟು ಕನ್ನಡ ಸಿನಿಮಾಗಳಲ್ಲಿಯೂ ಅವರು ನಟಿಸಿದ್ದಾರೆ. ಈ ಸಮಯದಲ್ಲಿ ಏನು ಮಾಡಬೇಕೊ ಅದನ್ನು ಅವರು ಮಾಡುತ್ತಾರೆ ಎಂಬ ಭರವಸೆ ನನಗೆ ಇದೆ’ ಎಂದಿದ್ದಾರೆ.--ನಿಷೇಧ ಅತಿರೇಕ:ಕಮಲ್‌ಹಾಸನ್‌ಗೆರಮ್ಯಾ ಬೆಂಬಲಬೆಂಗಳೂರು: ‘ಕಮಲ್ ಹಾಸನ್ ಅವರು ಅನುಚಿತವಾಗಿ ಮಾತನಾಡಿರೋದು ನಿಜವೇ? ಹಾಗಂದ ಮಾತ್ರಕ್ಕೆ ಅವರ ಸಿನಿಮಾ ನಿಷೇಧಿಸುವುದು ಸ್ವಲ್ಪ ಅತಿರೇಕ ಅನಿಸುವುದಿಲ್ಲವೇ?’ ಎನ್ನುವ ಮೂಲಕ ನಟಿ ರಮ್ಯಾ ಅವರು ಕಮಲ್‌ಹಾಸನ್‌ ಬೆಂಬಲಕ್ಕೆ ನಿಂತಿದ್ದಾರೆ.

Read more Articles on