ಮಹಾರಾಜ ಟ್ರೋಫಿ ಟಿ20 ಟೂರ್ನಿ : ಶಿವಮೊಗ್ಗಕ್ಕೆ ಲಯನ್ಸ್‌ ಸತತ 6 ಸೋಲಿನ ಆಘಾತ! ಬ್ಯಾಟಿಂಗ್‌ ವೈಫಲ್ಯ

| Published : Aug 23 2024, 01:01 AM IST / Updated: Aug 23 2024, 04:09 AM IST

ಸಾರಾಂಶ

ಮತ್ತೊಂದು ಪಂದ್ಯದಲ್ಲಿ ಮಂಗಳೂರು ಡ್ರ್ಯಾಗನ್ಸ್‌ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್‌ ತಂಡ 6 ರನ್‌ ರೋಚಕ ಗೆಲುವು ಸಾಧಿಸಿತು. ಬೆಂಗಳೂರು 144 ರನ್‌ ಬಾರಿಸಿದರೆ, ಸುಲಭ ಗುರಿ ಬೆನ್ನತ್ತಿದರೂ ಬ್ಯಾಟಿಂಗ್‌ ವೈಫಲ್ಯಕ್ಕೊಳಗಾದ 7 ವಿಕೆಟ್‌ಗೆ 138 ರನ್‌ ಗಳಿಸಿತು.

ಬೆಂಗಳೂರು: ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಶಿವಮೊಗ್ಗ ಲಯನ್ಸ್‌ ಸತತ 6ನೇ ಸೋಲನುಭವಿಸಿದೆ. ಗುರುವಾರ ಮೈಸೂರು ವಾರಿಯರ್ಸ್‌ ವಿರುದ್ಧ 28 ರನ್‌ ಸೋಲು ಎದುರಾಯಿತು. 

ಮೈಸೂರಿಗೆ ಇದು 4ನೇ ಜಯ.ಮೊದಲು ಬ್ಯಾಟ್‌ ಮಾಡಿದ ಮೈಸೂರು 7 ವಿಕೆಟ್‌ಗೆ 179 ರನ್ ಕಲೆಹಾಕಿತು. ಕರುಣ್‌ ನಾಯರ್‌ 23 ಎಸೆತಗಳಲ್ಲಿ 45, ಕಾರ್ತಿಕ್‌ ಸಿ.ಎ. 30, ಸುಮಿತ್‌ ಕುಮಾರ್‌ 28, ಮನೋಜ್‌ ಭಾಂಡಗೆ 7 ಎಸೆತಗಳಲ್ಲಿ 23 ರನ್‌ ಸಿಡಿಸಿದರು. ಎಚ್‌.ಎಸ್‌.ಶರತ್‌ 29 ರನ್‌ಗೆ 4 ವಿಕೆಟ್‌ ಕಿತ್ತರು.ದೊಡ್ಡ ಗುರಿ ಬೆನ್ನತ್ತಿದ ಶಿವಮೊಗ್ಗ 9 ವಿಕೆಟ್‌ಗೆ 151 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. 

ಅಭಿನವ್‌ ಮನೋಹರ್‌ 29 ಎಸೆತಗಳಲ್ಲಿ 46, ನಿಹಾಲ್‌ ಉಳ್ಳಾಲ್‌ 38 ಎಸೆತಗಳಲ್ಲಿ 46 ರನ್‌ ಗಳಿಸಿದರೂ ತಂಡಕ್ಕೆ ಗೆಲುವು ಸಿಗಲಿಲ್ಲ. ಅಜಿತ್‌ ಕಾರ್ತಿಕ್‌, ವಿದ್ಯಾಧರ್‌ ಪಾಟೀಲ್‌ ತಲಾ 3 ವಿಕೆಟ್‌ ಕಿತ್ತರು.ಗುರುವಾರದ ಮತ್ತೊಂದು ಪಂದ್ಯದಲ್ಲಿ ಮಂಗಳೂರು ಡ್ರ್ಯಾಗನ್ಸ್‌ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್‌ ತಂಡ 6 ರನ್‌ ರೋಚಕ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಬೆಂಗಳೂರು 20 ಓವರಲ್ಲಿ 144 ರನ್‌ಗೆ ಆಲೌಟಾಯಿತು. ಸುಲಭ ಗುರಿ ಬೆನ್ನತ್ತಿದರೂ ಬ್ಯಾಟಿಂಗ್‌ ವೈಫಲ್ಯಕ್ಕೊಳಗಾದ 7 ವಿಕೆಟ್‌ಗೆ 138 ರನ್‌ ಗಳಿಸಿತು.

ಇಂದಿನ ಪಂದ್ಯಗಳು

ಬೆಂಗಳೂರು-ಹುಬ್ಭಳ್ಳಿ, ಮಧ್ಯಾಹ್ನ 3ಕ್ಕೆ, ಮಂಗಳೂರು-ಗುಲ್ಬರ್ಗಾ, ಸಂಜೆ 7ಕ್ಕೆ