ನವದೆಹಲಿ: ಭಾರತದ ಯುವ ಬ್ಯಾಟರ್ಗಳಾದ ಸರ್ಫರಾಜ್ ಖಾನ್ ಹಾಗೂ ಧ್ರುವ್ ಜುರೆಲ್ ಬಿಸಿಸಿಐ ಕೇಂದ್ರೀಯ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸೋಮವಾರ ನಡೆದ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಇವರಿಬ್ಬರ ಹೆಸರನ್ನು ಅನುಮೋದಿಸಲಾಗಿದೆ. ಈ ಋತುವಿನಲ್ಲಿ 3 ಟೆಸ್ಟ್ ಆಡಿದ್ದರಿಂದ ಅವರನ್ನು ‘ಸಿ’ ದರ್ಜೆಗೆ ಸೇರಿಸಲಾಗಿದ್ದು, ವಾರ್ಷಿಕ 1 ಕೋಟಿ ರು. ಸಂಭಾವನೆ ಪಡೆಯಲಿದ್ದಾರೆ. ಇನ್ನು, ಮಂಜು ಹಾಗೂ ಮಂದ ಬೆಳಕಿನ ಕಾರಣಕ್ಕೆ ರಣಜಿ ಟ್ರೋಫಿಯನ್ನು ಉತ್ತರ ಭಾರತದಲ್ಲಿ ಡಿಸೆಂಬರ್, ಜನವರಿಯಲ್ಲಿ ನಡೆಸದಿರಲು ಕೂಡಾ ಸಭೆಯಲ್ಲಿ ಬಿಸಿಸಿಐ ನಿರ್ಣಯ ಕೈಗೊಂಡಿದೆ.ಟಿ20: ಐರ್ಲೆಂಡ್ ವಿರುದ್ಧ ಆಫ್ಘನ್ಗೆ 10 ರನ್ ಜಯ
ಶಾರ್ಜಾ: ಐರ್ಲೆಂಡ್ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನ 10 ರನ್ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಆಫ್ಘನ್, ಮೊಹಮದ್ ನಬಿ(59), ಸದೀಖುಲ್ಲಾ(35), ರಶೀದ್ ಖಾನ್(25) ನೆರವಿನಿಂದ 20 ಓವರಲ್ಲಿ 9 ವಿಕೆಟ್ಗೆ 152 ರನ್ ಕಲೆಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಐರ್ಲೆಂಡ್ 8 ವಿಕೆಟ್ ನಷ್ಟದಲ್ಲಿ 142 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಆ್ಯಂಡ್ರ್ಯೂ ಬಾಲ್ಬಿರ್ನಿ 45, ಗ್ಯಾರೆಥ್ ಡೆಲನಿ 18 ಎಸೆತಗಳಲ್ಲಿ 39 ರನ್ ಸಿಡಿಸಿದರೂ ತಂಡಕ್ಕೆ ಗೆಲುವು ಸಿಗಲಿಲ್ಲ.ಇಂಗ್ಲೆಂಡ್ ವಿರುದ್ಧ ಮಿಂಚಿದ್ದ ಸರ್ಫರಾಜ್, ಜುರೆಲ್ಗೆ ಬಿಸಿಸಿಐ ಕೇಂದ್ರೀಯ ಗುತ್ತಿಗೆ
ಧ್ರುವ್ ಜುರೆಲ್ ಮತ್ತು ಸರ್ಫರಾಜ್ರನ್ನು ‘ಸಿ’ ದರ್ಜೆಗೆ ಸೇರಿಸಲಾಗಿದೆ. ಅವರು ಇನ್ನು ಬಿಸಿಸಿಐನಿಂದ ವಾರ್ಷಿಕ 1 ಕೋಟಿ ರು. ಸಂಭಾವನೆ ಪಡೆಯಲಿದ್ದಾರೆ.
Latest Videos
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.