ತುಂಗಭದ್ರೆ, ವರದೆಯ ಒಡಲಲ್ಲಿನ ಮರಳು ಬರಿದು!ಜಿಲ್ಲೆಯ ಜೀವನದಿಗಳು ಎನಿಸಿರುವ ತುಂಗಭದ್ರಾ ಹಾಗೂ ವರದಾ ನದಿಗಳ ಒಡಲಲ್ಲಿನ ಮರಳು ಮಂಗಮಾಯವಾಗಿದೆ. ಹಗಲು ರಾತ್ರಿ ಎನ್ನದೇ ಲಾರಿ, ಟಿಪ್ಪರ್, ಟ್ರ್ಯಾಕ್ಟರ್ಗಳಲ್ಲಿ ಮರಳು ಸಾಗಾಟವಾಗುತ್ತಿದ್ದು, ಈ ಅಕ್ರಮ ಮರಳು ದಂಧೆ ತಡೆಯುವಲ್ಲಿ ಜಿಲ್ಲಾಡಳಿತ ಅಕ್ಷರಶಃ ಕೈಕಟ್ಟಿ ಕುಳಿತಿದೆ.