ಆಪ್‌ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ನಾಯಕತ್ವದ ಮೇಲೆ ವಿಶ್ವಾಸವಿಲ್ಲ, ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಹೇಳಿ ಶುಕ್ರವಾರವಷ್ಟೇ ವಿಧಾನಸಭಾ ಸದಸ್ಯತ್ವ ಮತ್ತು ಆಪ್‌ಗೆ ರಾಜೀನಾಮೆ ನೀಡಿದ್ದ ದೆಹಲಿಯ 8 ಶಾಸಕರು ಶನಿವಾರ ಭಾರತೀಯ ಜನತಾ ಪಕ್ಷ ಸೇರಿದ್ದಾರೆ.

ನವದೆಹಲಿ: ಆಪ್‌ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ನಾಯಕತ್ವದ ಮೇಲೆ ವಿಶ್ವಾಸವಿಲ್ಲ, ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಹೇಳಿ ಶುಕ್ರವಾರವಷ್ಟೇ ವಿಧಾನಸಭಾ ಸದಸ್ಯತ್ವ ಮತ್ತು ಆಪ್‌ಗೆ ರಾಜೀನಾಮೆ ನೀಡಿದ್ದ ದೆಹಲಿಯ 8 ಶಾಸಕರು ಶನಿವಾರ ಭಾರತೀಯ ಜನತಾ ಪಕ್ಷ ಸೇರಿದ್ದಾರೆ. 

ಫೆ.5ರಂದು ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು ಅದರ ಮುನ್ನಾ ಈ ದಿಢೀರ್ ಬೆಳವಣಿಗೆ ನಡೆದಿದೆ. ಬಿಜೆಪಿ ಸೇರಿದ ಶಾಸಕರಿಗೆ ಗೆಲ್ಲುವ ಸಾಧ್ಯತೆ ಇಲ್ಲ ಎನ್ನುವ ಕಾರಣ ನೀಡಿ ಆಪ್ ಟಿಕೆಟ್‌ ನಿರಾಕರಿಸಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಬೈಜಯಂತ್‌ ಪಾಂಡಾ ಸಮ್ಮುಖದಲ್ಲಿ ಆಪ್‌ನಿಂದ ಹೊರಬಿದ್ದ ಶಾಸಕರು ಬಿಜೆಪಿ ಸೇರಿದರು.