ಪ್ರತಿಭಟನಾರ್ಥವಾಗಿ ಯಮುನೆಯಲ್ಲಿ ಸ್ನಾನ ಮಾಡಿದ ಬಿಜೆಪಿಗನಿಗೆ ಉಸಿರಾಟ ಸಮಸ್ಯೆ, ತುರಿಕೆ!

| Published : Oct 27 2024, 02:31 AM IST / Updated: Oct 27 2024, 04:57 AM IST

ಸಾರಾಂಶ

ದಿಲ್ಲಿ ಆಪ್‌ ಸರ್ಕಾರದ ವಿರುದ್ಧ ಪ್ರತಿಭಟನಾರ್ಥವಾಗಿ ಕಲುಷಿತ ಯಮುನಾ ನದಿಯಲ್ಲಿ ಸ್ನಾನ ಮಾಡಿದ್ದ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ವರ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿ, ಆಸ್ಪತ್ರೆಗೆ ದಾಖಲಾಗಿದ್ದಾರೆ.

ನವದೆಹಲಿ: ದಿಲ್ಲಿ ಆಪ್‌ ಸರ್ಕಾರದ ವಿರುದ್ಧ ಪ್ರತಿಭಟನಾರ್ಥವಾಗಿ ಕಲುಷಿತ ಯಮುನಾ ನದಿಯಲ್ಲಿ ಸ್ನಾನ ಮಾಡಿದ್ದ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ವರ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿ, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮುಖದಲ್ಲಿ ತುರಿಕೆ, ಉಸಿರಾಟದಲ್ಲಿ ತೊಂದರೆ ಮತ್ತು ಚರ್ಮ ವ್ಯಾಧಿಯಿಂದ ದೆಹಲಿಯ ಆರ್‌ಎಂಎಲ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

ದೆಹಲಿಯಲ್ಲಿ ಮಾಲಿನ್ಯ ಏರಿಕೆಯಾಗುತ್ತಿರುವುದನ್ನು ಖಂಡಿಸಿ ಗುರುವಾರ ಸಚ್‌ದೇವ ಯಮುನೆಯಲ್ಲಿ ಮುಳುಗಿ ಎದ್ದು ಪ್ರತಿಭಟಿಸಿದ್ದರು. ಇವರ ನಡೆಯನ್ನು ಆಪ್‌ ತೀಕ್ಷವಾಗಿ ಖಂಡಿಸಿ, ಬಿಜೆಪಿ ಮಾಲಿನ್ಯದ ಬಗ್ಗೆ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿತ್ತು.