ಸಾಮೂಹಿಕ ಅತ್ಯಾಚಾರ ಕಂಡ ಸಂದೇಶ್‌ಖಾಲಿಗೆ ಬಂಗಾಳದ ಸಚಿವರ ಭೇಟಿ

| Published : Feb 19 2024, 01:32 AM IST

ಸಾರಾಂಶ

ಪ್ರಕ್ಷುಬ್ಧ ವಾತಾವರಣವಿರುವ ಸಂದೇಶ್‌ಖಾಲಿಗೆ ಮೂವರು ಸಚಿವರನ್ನೊಳಗೊಂಡ ಪಶ್ಚಿಮ ಬಂಗಾಳದ ಸರ್ಕಾರ ನಿಯೋಗ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದೆ.

ಕೊಲ್ಕತಾ: ಕಳೆದೆರಡು ವಾರಗಳಿಂದ ಪ್ರಕ್ಷುಬ್ಧ ವಾತಾವರಣದಲ್ಲಿರುವ ಸಂದೇಶ್‌ಖಾಲಿ ಪ್ರದೇಶಕ್ಕೆ ಪಶ್ಚಿಮ ಬಂಗಾಳ ಸರ್ಕಾರದ ಮೂವರು ಸಚಿವರು ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ್ದಾರೆ.

ಇದೇ ವೇಳೆ ಕಂದಾಯ ಇಲಾಖೆಯು ಜನರ ಸಮಸ್ಯೆಗಳನ್ನು ಆಲಿಸಲು ಶಿಬಿರಗಳನ್ನು ತೆರೆದಿದ್ದು, ಆ ಮೂಲಕ ಜನರ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅರಿಯುವ ಪ್ರಯತ್ನ ಮಾಡಿದೆ.

ಆದರೆ ಕೇಂದ್ರ ಸಚಿವರನ್ನೊಳಗೊಂಡ ಬಿಜೆಪಿ ನಿಯೋಗ ಸಂದೇಶ್‌ ಖಾಲಿಗೆ ಭೇಟಿ ನೀಡಲು ಪ್ರಯತ್ನ ನಡೆಸಿತ್ತಾದರೂ ಅವರಿಗೆ ಜಿಲ್ಲಾಡಳಿತ ಗಡಿಯಲ್ಲೇ ತಡೆ ನೀಡಿದೆ.

ಸಂದೇಶ್‌ಖಾಲಿಯಲ್ಲಿ ಹಲವು ದಿನಗಳಿಂದ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಅಕ್ರಮ ಭೂ ಕಬಳಿಕೆಯ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ.