ತನಿಖೆಗೆ ಗೈರು ಕೇಸಲ್ಲಿ ಕೇಜ್ರಿಗೆ ಕೋರ್ಟ್‌ ರಿಲೀಫ್‌ ಇಲ್ಲ

| Published : Mar 16 2024, 01:45 AM IST / Updated: Mar 16 2024, 07:33 AM IST

ತನಿಖೆಗೆ ಗೈರು ಕೇಸಲ್ಲಿ ಕೇಜ್ರಿಗೆ ಕೋರ್ಟ್‌ ರಿಲೀಫ್‌ ಇಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಜಾರಿ ನಿರ್ದೇಶನಾಲಯದ ತನಿಖೆಗೆ ಗೈರಾದ ಕೇಸಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ದಾಖಲಾದ ಕೇಸಿನ ವಿಚಾರಣೆಗೆ ತಡೆ ನೀಡಲು ಸ್ಥಳೀಯ ಸೆಷನ್ಸ್‌ ನ್ಯಾಯಾಲಯ ನಿರಾಕರಿಸಿದೆ.

ನವದೆಹಲಿ: ಜಾರಿ ನಿರ್ದೇಶನಾಲಯದ ತನಿಖೆಗೆ ಗೈರಾದ ಕೇಸಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ದಾಖಲಾದ ಕೇಸಿನ ವಿಚಾರಣೆಗೆ ತಡೆ ನೀಡಲು ಸ್ಥಳೀಯ ಸೆಷನ್ಸ್‌ ನ್ಯಾಯಾಲಯ ನಿರಾಕರಿಸಿದೆ. 

ಅಲ್ಲದೆ ವಿಚಾರಣೆಗೆ ಖುದ್ದು ಹಾಜರಾಗಲು ವಿನಾಯಿತಿ ಕೋರಿದ್ದ ಅರ್ಜಿ ಬಗ್ಗೆ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಮೊರೆ ಹೋಗುವಂತೆ ಸೂಚಿಸಿದೆ. 

ದೆಹಲಿ ಲಿಕ್ಕರ್‌ ಹಗರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಇಡಿ ನೀಡಿದ್ದ 4-8ನೇ ಸಮನ್ಸ್‌ಗೆ ಕೇಜ್ರಿವಾಲ್‌ ಗೈರಾಗಿದ್ದರು ಎಂದು ನ್ಯಾಯಾಲಯಕ್ಕೆ ಅಧಿಕಾರಿಗಳು ದೂರು ನೀಡಿದ್ದರು. 

ಈ ಕುರಿತು ವಿಚಾರಣೆ ಆರಂಭವಾಗಿತ್ತು. ಅಲ್ಲದೆ ಪ್ರಕರಣ ಸಂಬಂಧ ಮಾ.16ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ದೆಹಲಿ ಸಿಎಂಗೆ ಸೂಚಿಸಿತ್ತು.