ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪ್ರಾಣವನ್ನು ಬಲಿ ತೆಗೆದುಕೊಂಡ ಬಾರಾಮತಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಐವರಲ್ಲಿ ಪೈಲಟ್ ಶಾಂಭವಿ ಪಾಠಕ್ ಹಾಗೂ ಫ್ಲೈಟ್ ಅಟೆಂಡೆಂಟ್‌ ಪಿಂಕಿ ಮಾಲಿ ಕೂಡ ಇದ್ದಾರೆರು. ಅವರು ಈ ನರದೃಷ್ಟ ವಿಮಾನ ಓಡಿಸುತ್ತಿದ್ದರು.

ಶಾಂಭವಿ ಪಾಠಕ್‌, ಪಿಂಕಿ ಮಾಲಿ, ಕ್ಯಾ। ಸುಮಿತ್‌ ಸಾವು

ಅಜಿತ್‌ ಅಂಗರಕ್ಷಕ ವಿಂದೀಪ್ ಜಾಧವ್‌ ಕೂಡ ಬಲಿಪುಣೆ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪ್ರಾಣವನ್ನು ಬಲಿ ತೆಗೆದುಕೊಂಡ ಬಾರಾಮತಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಐವರಲ್ಲಿ ಪೈಲಟ್ ಶಾಂಭವಿ ಪಾಠಕ್ ಹಾಗೂ ಫ್ಲೈಟ್ ಅಟೆಂಡೆಂಟ್‌ ಪಿಂಕಿ ಮಾಲಿ ಕೂಡ ಇದ್ದಾರೆರು. ಅವರು ಈ ನರದೃಷ್ಟ ವಿಮಾನ ಓಡಿಸುತ್ತಿದ್ದರು.

ಫ್ಲೈಟ್ ಅಟೆಂಡೆಂಟ್‌ ಪಿಂಕಿ ಮಾಲಿ ತಂದೆ ಚಂದ್ರಶೇಖರ ಮಾಲಿಗೆ ನಿನ್ನೆ ಕೊನೆಯ ಕರೆ ಮಾಡಿ, ‘ನಾನು ಅಜಿತ್‌ ಪವಾರ್ ಅವರ ವಿಮಾನ ಓಡಿಸಲು ಹೋಗುತ್ತಿದ್ದೇನೆ. ಬಾರಾಮತಿಗೆ ತೆರಳುತ್ತಿದ್ದು, ನಾಳೆ ನಾಂದೇಡ್‌ಗೆ (ಸ್ವಂತ ಊರು) ವಾಪಸಾಗಲಿದ್ದೇನೆ’ ಎಂದಿದ್ದರು.

ಮೃತ ಇತರರೆಂದರೆ ಕ್ಯಾಪ್ಟನ್‌ ಸುಮಿತ್‌ ಕಪೂರ್‌ ಹಾಗೂ ಭದ್ರತಾ ಸಿಬ್ಬಂದಿ ವಿಂದೀಪ್ ಜಾಧವ್‌.