ತೆಲುಗರು 300 ವರ್ಷಗಳ ಹಿಂದೆ ಬಂದಿದ್ದು ತಮಿಳುನಾಡಿನ ರಾಣಿಯರ ಸೇವೆ ಮಾಡಲು ಹೇಳಿಕೆ : ನಟಿ ಕಸ್ತೂರಿ ಶಂಕರ್ ಬಂಧನ

| Published : Nov 17 2024, 01:15 AM IST / Updated: Nov 17 2024, 05:22 AM IST

ತೆಲುಗರು 300 ವರ್ಷಗಳ ಹಿಂದೆ ಬಂದಿದ್ದು ತಮಿಳುನಾಡಿನ ರಾಣಿಯರ ಸೇವೆ ಮಾಡಲು ಹೇಳಿಕೆ : ನಟಿ ಕಸ್ತೂರಿ ಶಂಕರ್ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ತಮಿಳುನಾಡಿಗೆ ತೆಲುಗರು 300 ವರ್ಷಗಳ ಹಿಂದೆ ಬಂದಿದ್ದು ತಮಿಳುನಾಡಿನ ರಾಣಿಯರ ಸೇವೆ ಮಾಡಲು ಎಂದು ಹೇಳಿ ತೆಲುಗರ ಆಕ್ರೋಶಕ್ಕೆ ತುತ್ತಾಗಿದ್ದ ತಮಿಳು ನಟಿ ಕಸ್ತೂರಿ ಶಂಕರ್ ಅವರನ್ನು ಶನಿವಾರ ಬಂಧಿಸಲಾಗಿದೆ.

ಚೆನ್ನೈ/ಹೈದರಾಬಾದ್‌: ತಮಿಳುನಾಡಿಗೆ ತೆಲುಗರು 300 ವರ್ಷಗಳ ಹಿಂದೆ ಬಂದಿದ್ದು ತಮಿಳುನಾಡಿನ ರಾಣಿಯರ ಸೇವೆ ಮಾಡಲು ಎಂದು ಹೇಳಿ ತೆಲುಗರ ಆಕ್ರೋಶಕ್ಕೆ ತುತ್ತಾಗಿದ್ದ ತಮಿಳು ನಟಿ ಕಸ್ತೂರಿ ಶಂಕರ್ ಅವರನ್ನು ಶನಿವಾರ ಬಂಧಿಸಲಾಗಿದೆ.

ಕಸ್ತೂರಿ ಹೇಳಿಕೆ ಖಂಡಿಸಿ ತೆಲುಗರು ಪ್ರತಿಭಟನೆ ನಡೆಸಿದ್ದರು ಹಾಗೂ ಅವರ ವಿರುದ್ಧ ದ್ವೇಷ ಭಾಷಣದ ಪ್ರಕರಣಗಳು ದಾಖಲಾಗಿದ್ದವು. ಆ ಬಳಿಕ ಅವರು ಒಮ್ಮೆ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದರೂ ಸಮರ್ಥಿಸಿಕೊಂಡಿದ್ದರು. ಆದರೆ ಆಕ್ರೋಶ ತೀವ್ರಗೊಂಡ ಬಳಿಕ ಕ್ಷಮೆಯಾಚಿಸಿದ್ದರು. ‘ನನ್ನ ಮಾತು ಈಗ ಇರುವ ತಮಿಳುನಾಡಿನಲ್ಲಿನ ತೆಲುಗರನ್ನು ಉದ್ದೇಶಿಸಿ ಅಲ್ಲ. ಈ ಹಿಂದಿನ ಇತಿಹಾಸದ ಬಗ್ಗೆ ಮಾತನಾಡಿದ್ದೆ ಅಷ್ಟೆ. ಇದಕ್ಕಾಗಿ ಕ್ಷಮೆ ಕೋರುವೆ’ ಎಂದಿದ್ದರು. ಆದರೂ ಅವರ ವಿರುದ್ಧದ ಆಕ್ರೋಶ ತಣಿದಿರಲಿಲ್ಲ.

ಈ ನಡುವೆ, ಕೇಸು ದಾಖಲಾದ ಕಾರಣ ಕೆಲ ದಿನ ನಾಪತ್ತೆ ಆಗಿದ್ದ ಕಸ್ತೂರಿ ಅವರನ್ನು ಶನಿವಾರ ಚೆನ್ನೈ ಪೊಲೀಸರು ಹೈದರಾಬಾದ್‌ನಲ್ಲಿ ಬಂಧಿಸಲಾಗಿದೆ.