ಸಾರಾಂಶ
ಡಿ.13ರಂದು ಸಂಸತ್ ಭವನದ ಒಳಗೆ ‘ಹೊಗೆ ಬಾಂಬ್’ ಸಿಡಿಸಿ ಭದ್ರತಾ ಲೋಪ ಎಸಗಿದ ಆರೋಪದ ಮೇಲೆ ಐವರು ಆರೋಪಿಗಳನ್ನು ಶುಕ್ರವಾರ ಮಂಪರು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪರೀಕ್ಷೆಯಲ್ಲಿ, ಇಡೀ ಕೃತ್ಯದ ಮಾಸ್ಟರ್ಮೈಂಡ್ ಮೈಸೂರು ಮೂಲದ ಮನೋರಂಜನ್ ಎಂಬುದು ದೃಢಪಟ್ಟಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನವದೆಹಲಿ: ಡಿ.13ರಂದು ಸಂಸತ್ ಭವನದ ಒಳಗೆ ‘ಹೊಗೆ ಬಾಂಬ್’ ಸಿಡಿಸಿ ಭದ್ರತಾ ಲೋಪ ಎಸಗಿದ ಆರೋಪದ ಮೇಲೆ ಐವರು ಆರೋಪಿಗಳನ್ನು ಶುಕ್ರವಾರ ಮಂಪರು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪರೀಕ್ಷೆಯಲ್ಲಿ, ಇಡೀ ಕೃತ್ಯದ ಮಾಸ್ಟರ್ಮೈಂಡ್ ಮೈಸೂರು ಮೂಲದ ಮನೋರಂಜನ್ ಎಂಬುದು ದೃಢಪಟ್ಟಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶುಕ್ರವಾರ ಗುಜರಾತ್ನ ಗಾಂಧಿನಗರದಲ್ಲಿ ನಡೆದ ಮಂಪರು ಪರೀಕ್ಷೆಯಲ್ಲಿ ಮನೋರಂಜನ್ ಹಾಗೂ ಸಾಗರ್ ಶರ್ಮಗೆ ವಿಶೇಷ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆ ವೇಳೆ ಸತ್ಯ ಹೊರಬಂದಿದೆ.
ಈ ಹಿಂದೆ ಸಂಸತ್ ಸ್ಫೋಟದ ರೂವಾರಿ ಬಂಗಾಳ ಮೂಲದ ಲಲಿತ್ ಝಾ ಎಂದು ಹೇಳಲಾಗಿತ್ತು. ಆದರೆ ಬ್ರೇನ್ ಮ್ಯಾಪಿಂಗ್ ಪರೀಕ್ಷೆ, ನಾರ್ಕೋ ಟೆಸ್ಟ್ ಹಾಗೂ ಪಾಲಿಗ್ರಾಫಿ ಪರೀಕ್ಷೆಗಳಲ್ಲಿ ಮನೋರಂಜನ್ ಮಾಸ್ಟರ್ಮೈಂಡ್ ಎಂಬುದು ಗೊತ್ತಾಗಿದೆ.