ನಟ ವಿಜಯ್‌ ಪಕ್ಷದ ಪದಾಧಿಕಾರಿಗಳ ಜತೆ ಪ್ರಶಾಂತ್‌ ಕಿಶೋರ್‌ ಮಾತು

| Published : Feb 12 2025, 12:35 AM IST

ನಟ ವಿಜಯ್‌ ಪಕ್ಷದ ಪದಾಧಿಕಾರಿಗಳ ಜತೆ ಪ್ರಶಾಂತ್‌ ಕಿಶೋರ್‌ ಮಾತು
Share this Article
  • FB
  • TW
  • Linkdin
  • Email

ಸಾರಾಂಶ

ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ತಂತ್ರ ರೂಪಿಸುವ ಭಾಗವಾಗಿ, ರಾಜಕೀಯ ತಂತ್ರಗಾರ ಹಾಗೂ ಜನ್‌ ಸುರಾಜ್‌ ಪಕ್ಷದ ಸ್ಥಾಪಕ ಪ್ರಶಾಂತ್‌ ಕಿಶೋರ್‌ ಅವರು ನಟ ವಿಜಯ್‌ ಅವರ ತಮಿಳಿಗ ವೆಟ್ರಿ ಕಳಗಂ(ಟಿವಿಕೆ)ಯ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.

ಚೆನ್ನೈ: ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ತಂತ್ರ ರೂಪಿಸುವ ಭಾಗವಾಗಿ, ರಾಜಕೀಯ ತಂತ್ರಗಾರ ಹಾಗೂ ಜನ್‌ ಸುರಾಜ್‌ ಪಕ್ಷದ ಸ್ಥಾಪಕ ಪ್ರಶಾಂತ್‌ ಕಿಶೋರ್‌ ಅವರು ನಟ ವಿಜಯ್‌ ಅವರ ತಮಿಳಿಗ ವೆಟ್ರಿ ಕಳಗಂ(ಟಿವಿಕೆ)ಯ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.

ಈ ವೇಳೆ, ರಾಜ್ಯದಲ್ಲಿ ರಾಜಕೀಯ ವಾತಾವರಣ, ಸಶಕ್ತ ಪಕ್ಷಗಳೊಂದಿಗಿನ ಮೈತ್ರಿ ಸಾಧ್ಯತೆ, ಸದ್ಯ ಪಕ್ಷದ ರಚನೆ ಹಾಗೂ ಶ್ರೇಣಿ ವ್ಯವಸ್ಥೆಗಳಂತಹ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.

ತಮ್ಮ ಸ್ವಂತ ಪಕ್ಷ ಸ್ಥಾಪನೆಗೂ ಮುನ್ನ ಕಿಶೋರ್‌ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹಾಗೂ ತೆಲಂಗಾಣದ ವೈಎಸ್‌ಆರ್‌ ಕಾಂಗ್ರೆಸ್‌ಗೆ ಚುನಾವಣಾ ತಂತ್ರ ರೂಪಿಸಿದ್ದರು.