ಸಾರಾಂಶ
ಕಾಲುವೆಯಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಹರ್ಯಾಣ ರೂಪದರ್ಶಿ ಶೀತಲ್ ಮೃತದೇಹ ಪತ್ತೆಯಾದ ಒಂದು ದಿನದ ಬಳಿಕ ಆಕೆಯ ಜತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚಂಡೀಗಢ: ಕಾಲುವೆಯಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಹರ್ಯಾಣ ರೂಪದರ್ಶಿ ಶೀತಲ್ ಮೃತದೇಹ ಪತ್ತೆಯಾದ ಒಂದು ದಿನದ ಬಳಿಕ ಆಕೆಯ ಜತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
‘ಶೀತಲ್ಗೆ ಮದುವೆ ಆಗಿದ್ದರೂ ಸುನೀಲ್ ಎಂಬಾತನ ಜತೆ ಅನೈತಿಕ ಸಂಬಂಧ ಹೊಂದಿದ್ದಳು. ಆತನಿಗೆ ಮದುವೆಯಾಗಿ 2 ಮಕ್ಕಳಿದ್ದವು. ಶನಿವಾರ ಶೂಟಿಂಗ್ಗಾಗಿ ಅಹರ್ ಹಳ್ಳಿಗೆ ಹೋಗಿದ್ದ ಅವಳನ್ನು ಸುನೀಲ್ ಅಲ್ಲಿಯೇ ಭೇಟಿಯಾಗಿ, ತನ್ನ ಕಾರಿನಲ್ಲಿ ಕರೆದೊಯ್ದಿದ್ದ. ಬಳಿಕ ಇಬ್ಬರ ನಡುವೆ ಜಗಳ ನಡೆದಿದೆ. ಆಕೆಯ ಮೇಲೆ ಹಲ್ಲೆ ನಡೆಸಿದ ಸುನೀಲ್ ಕಾರಿನಲ್ಲಿ ಶವವನ್ನಿಟ್ಟು, ಕಾಲುವೆಗೆ ತಳ್ಳಿರುವುದಾಗಿ ಒಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.