ಚೆನ್ನೈ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ತನ್ನ ಪಾಲಿಗೆ ಒದಗಿಬಂದಿದ್ದ ಏಕೈಕ ರಾಜ್ಯಸಭಾ ಸ್ಥಾನವನ್ನು ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಟಿವಿಕೆ ಪಕ್ಷವು ಮಿತ್ರಪಕ್ಷ ಕಾಂಗ್ರೆಸ್‌ಗೆ ನೀಡಿದೆ. ಈ ಸೀಟನ್ನು ಕಾಂಗ್ರೆಸ್‌, ಚುನಾವಣಾ ತಂತ್ರಗಾರ ಪ್ರವೀಣ್ ಚಕ್ರವರ್ತಿಗೆ ನೀಡುವ ಸಾಧ್ಯತೆ ಇದೆ. ತಮಿಳ್ನಾಡಲ್ಲಿ ವಿಜಯ್‌ ಸರ್ಕಾರ ರಚನೆಗೆ ಕಾಂಗ್ರೆಸ್‌ ಬೆಂಬಲ ನೀಡಿತ್ತು, ಜೊತೆಗೆ ಟಿವಿಕೆ-ಕಾಂಗ್ರೆಸ್‌ ಮೈತ್ರಿಕೂಟ ರಚನೆಯಲ್ಲಿ ಪ್ರವೀಣ್‌ ಚಕ್ರವರ್ತಿ ಮಹತ್ವದ ಪಾತ್ರವಹಿಸಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ವಿಜಯ್‌ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ನಡೆದಿದ್ದ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವ ಎಐಎಡಿಎಂಕೆಯ ಷಣ್ಮುಗಂರಿಂದ ತೆರವಾಗಿದ್ದ 1ರಾಜ್ಯಸಭಾ ಸ್ಥಾನಕ್ಕೆ ಜೂ.18ರಂದು ಚುನಾವಣೆ ನಡೆಯಲಿದೆ.