ವಿದ್ಯಾರ್ಥಿಗಳಿಂದ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನ

| Published : Nov 25 2025, 01:30 AM IST

ವಿದ್ಯಾರ್ಥಿಗಳಿಂದ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಪೌರಾಣಿಕ ನಾಟಕಗಳೆಂದರೆ ಸಂಸ್ಕೃತ ಭಾಷೆಯ ಮೇಲೆ ಹಿಡಿತ, ಗಾಂಭೀರ್ಯತೆ, ವಿಷಯ ಸೂಕ್ಷ್ಮತೆ ಎಲ್ಲವನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ ಪಾತ್ರದ ಗಾಂಭೀರ್ಯತೆಯನ್ನು ಪ್ರದರ್ಶಿಸಬೇಕಾಗುತ್ತದೆ. ಆ ಎಲ್ಲಾ ಸವಾಲುಗಳನ್ನು ಮೆಟ್ಟಿ ಶಾಲಾ ವಿದ್ಯಾರ್ಥಿಗಳು ಸಹಜ ಅಭಿನಯದ ಮೂಲಕ ಸೈ ಎನಿಸಿಕೊಂಡಿರುವುದು ಸಾಧನೆಯೇ ಸರಿ. ದಿನದ ೨೪ ಗಂಟೆ ಮೊಬೈಲ್‌ನಲ್ಲೇ ಮುಳುಗುವ ವಿದ್ಯಾರ್ಥಿಗಳು ಅದೆಲ್ಲವನ್ನೂ ಬಿಟ್ಟು ಬಣ್ಣ ಹಚ್ಚಿ ಕಲಾವಿದ ರಾಗಿದ್ದು ಆಶಾದಾಯಕ ಬೆಳವಣಿಗೆ ಎನ್ನಬಹುದು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳೇ ಅಭಿನಯಿಸಿದ ಕುರುಕ್ಷೇತ್ರ ನಾಟಕ ಪ್ರದರ್ಶನ ಕಂಡಿದ್ದು, ವೀಕ್ಷರ ಮೆಚ್ಚುಗೆಗೆ ಪಾತ್ರವಾಯಿತು.

ಪೌರಾಣಿಕ ನಾಟಕಗಳೆಂದರೆ ಸಂಸ್ಕೃತ ಭಾಷೆಯ ಮೇಲೆ ಹಿಡಿತ, ಗಾಂಭೀರ್ಯತೆ, ವಿಷಯ ಸೂಕ್ಷ್ಮತೆ ಎಲ್ಲವನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ ಪಾತ್ರದ ಗಾಂಭೀರ್ಯತೆಯನ್ನು ಪ್ರದರ್ಶಿಸಬೇಕಾಗುತ್ತದೆ. ಆ ಎಲ್ಲಾ ಸವಾಲುಗಳನ್ನು ಮೆಟ್ಟಿ ಶಾಲಾ ವಿದ್ಯಾರ್ಥಿಗಳು ಸಹಜ ಅಭಿನಯದ ಮೂಲಕ ಸೈ ಎನಿಸಿಕೊಂಡಿರುವುದು ಸಾಧನೆಯೇ ಸರಿ. ದಿನದ ೨೪ ಗಂಟೆ ಮೊಬೈಲ್‌ನಲ್ಲೇ ಮುಳುಗುವ ವಿದ್ಯಾರ್ಥಿಗಳು ಅದೆಲ್ಲವನ್ನೂ ಬಿಟ್ಟು ಬಣ್ಣ ಹಚ್ಚಿ ಕಲಾವಿದ ರಾಗಿದ್ದು ಆಶಾದಾಯಕ ಬೆಳವಣಿಗೆ ಎನ್ನಬಹುದು.

ಚನ್ನರಾಯಪಟ್ಟಣ ತಾಲೂಕು ಕಲೆಗಳ ನಾಡು. ಗುಬ್ಬಿ ವೀರಣ್ಣ ಕಂಪನಿ, ರಾಮಚಂದ್ರ ರಾಯರು, ಮಾಸ್ಟರ್‌ ಹಿರಿಯಣ್ಣಯ್ಯ, ಹಂಸಲೇಖ, ಲಕ್ಷ್ಮೀ ಚಂದ್ರಶೇಖರ್, ವಾಸುದೇವರಾವ್, ಚಿಂದೋಡಿ ಲೀಲಾ ಸೇರಿ ಹೆಸರಾಂತ ನಾಟಕಕಾರರ ನೆಲೆ ಬೀಡಾಗಿದೆ. ಸಾಮಾಜಿಕ ಹಾಗೂ ಪೌರಾಣಿಕ ನಾಟಕ ಪ್ರಯೋಗ ಇಲ್ಲಿ ನಡೆದಿವೆ.ಮೈಸೂರಿನ ಚಾಮುಂಡೇಶ್ವರಿ ಡ್ರಾಮಾ ಸೀನ್ಸ್ ವೇದಿಕೆ ವ್ಯವಸ್ಥಾಪಕ ಹಿತೈಶ್ ರಾಜೇಶ್, ರಂಗಪ್ಪ ಬೆಳೆ ಚೌಡೇನಹಳ್ಳಿ, ರಾಜೇಶ್ ಕೆಂಚನಹಳ್ಳಿ, ಹನುಮೇಗೌಡ, ವಾದ್ಯ ನುಡಿಸಿದ ಲೋಕರಾಮ್, ಸಚಿನ್, ರಂಗರಾಜು, ಕುಮಾರ್‌ ನಾಟಕ ಯಶಸ್ಸಿಗೆ ಕಾರಣೀಭೂತರಾಗಿದ್ದಾರೆ.

ರಂಗದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಪಟ್ಟಣದ ಸರ್ಕಾರಿ ಮಾಧ್ಯಮಿಕ ಶಾಲಾ ಆವರಣದಲ್ಲಿ ಮಹಾಬುಜ ಮಾರುತಿ ಇಂಡಿಯನ್ ಸೇವಾ ಟ್ರಸ್ಟ್ ಹಾಗು ಕೇಸರಿ ನಂದನ ಕಲಾ ಸಂಘ ದಿಂದ ಆಯೋಜಿಸಿದ್ದ ನಾಟಕ ಪ್ರದರ್ಶನ ವೀಕ್ಷಕರ ಗಮನ ಸೆಳೆಯಿತು. ಸೊಗಸಾದ ಅಭಿನಯದ ಮೂಲಕ ಎಲ್ಲಾ ಪಾತ್ರಧಾರಿ ಗಳು ಚಪ್ಪಾಳೆ ಗಿಟ್ಟಿಸಿದರು. ನಾಟಕ ಯಶಸ್ಸಿಗೆ ವಿದ್ವಾನ್ ರಾಮಚಂದ್ರ, ನಿರ್ದೇಶಕ ಪ್ರಜ್ವಲ್ ಜಗದೀಶ್, ಕಾರ್ಯಕ್ರಮದ ರೂವಾರಿ ರಾಜೇಶ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್, ಸುರೇಶ್ ರಾಜಕುಮಾರ್, ಮುಂತಾದ ವರು ಬಿ.ಬಿ.ಗೌಡ ಸಹಕರಿಸಿದ್ದಾರೆ.

ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡಿ, ನಾಟಕ, ಕಲೆ, ಸಂಸ್ಕೃತಿಯನ್ನು ಬೆಳೆಸುವ, ನಶಿಸುತ್ತಿರುವ ರಂಗಕಲೆಯನ್ನ ಪುನರುಜ್ಜೀವನಗೊಳಿಸುವ ಹಾಗೂ ಮೊಬೈಲ್‌ನಿಂದ ಮಕ್ಕಳನ್ನು ದೂರ ಇರಿಸುವ ಪ್ರಯತ್ನ ಇದಾಗಿದೆ.

೧೮ ಮಕ್ಕಳ ತಂಡ ರಚಿಸಿ ಏಳು ತಿಂಗಳ ನಾಟಕದ ಕಾಲ ಸತತ ಕುರುಕ್ಷೇತ್ರ ತಾಲಿಮು ನೀಡಿದ್ದು ವಿಶೇಷ, ಹಿರಿಯ ಕಲಾವಿದರನ್ನು ಮೀರಿಸುವಂತೆ ಮಕ್ಕಳು ನಾಟಕದಲ್ಲಿ ತಲ್ಲೀನರಾಗಿದ್ದು ಮೆಚ್ಚುಗೆಗೆ ಪಾತ್ರವಾಯಿತು. ಕೃಷ್ಣನ ಪಾತ್ರಧಾರಿಯಾಗಿ ಕೆ.ಆರ್‌. ಧಣಿ, ದುರ್ಯೋಧನ-ಧನುಷ್‌, ರುಕ್ಮಿಣಿ-ಹನಿ, ಅರ್ಜುನ-ಧ್ಯಾನ್, ಭೀಮ-ರಿಶಾಂತ್ ವಿಶಿಷ್ಟ ಅಭಿನಯದ ಮೂಲಕ ಪ್ರೌಢಿಮೆ ಮೆರೆದರು. ನಿರಂತರವಾಗಿ ಸುಮಾರು ೭ ಗಂಟೆಗಳ ಕಾಲ ನಾಟಕ ನಡೆದು ಪಾತ್ರದಲ್ಲಿ ಬರುವ ಸಂಗೀತ ಹಾಡು ಸಂಭಾಷಣೆಗಳನ್ನು ನಿರರ್ಗಳವಾಗಿ ತಪ್ಪಿಲ್ಲದಂತೆ ಭಾವಪೂರ್ಣವಾಗಿ ಅಭಿನಯಿಸಿದ್ದು ವಿಶೇಷ ತಂದಿತ್ತು.

ವಿದುರ-ಕುಶಾಲ್, ಅಭಿಮನ್ಯು-ಮಧುವನ, ಕುಂತಿ, ದೌಪದಿ ಪಾತ್ರದಲ್ಲಿ ಧನ್ಯರಾಜ್, ಉತ್ತರೆ ಪಾತ್ರದಲ್ಲಿ ಲಹರಿ, ದುಶ್ಯಾಸನಾಗಿ ಧನ್ಯರಾಜ್ ಕರ್ಣನಾಗಿ ಉತ್ಕರ್ಷ, ಶಕುನಿಯಾಗಿ ರಮ್ಯ, ಸಾತ್ಯಕೀ ಶೀತಲಾಂಬ, ಭೀಮ ಶೌರ್ಯ, ದ್ರೋಣಾಚಾರ್ಯ ಪ್ರಥಮ್, ನರ್ತಕಿಯರಾಗಿ ಕೀರ್ತನ, ತ್ರಿಶಾ ಅಭಿನಯ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ. ಎ. ಗೋಪಾಲಸ್ವಾಮಿ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಣತಿಆನಂದ್, ಬಿಜೆಪಿ ಮುಖಂಡ ಸಿ. ಆರ್‌. ಚಿದಾನಂದ್, ಎಂ.ಎ.ರಂಗಸ್ವಾಮಿ ಮತ್ತಿತರಿದ್ದರು.