ರಾಸಾಯನಿಕ ಮಿಶ್ರಿತ ನೀರು ಕುಡಿದು 12 ಕುರಿಗಳು ಸಾವು..!

| Published : May 25 2025, 01:07 AM IST / Updated: May 25 2025, 01:08 AM IST

ರಾಸಾಯನಿಕ ಮಿಶ್ರಿತ ನೀರು ಕುಡಿದು 12 ಕುರಿಗಳು ಸಾವು..!
Share this Article
  • FB
  • TW
  • Linkdin
  • Email

ಸಾರಾಂಶ

ಕೈಗಾರಿಕಾ ಪ್ರದೇಶದ ರೇಚನ ಆರ್ಗ್ಯಾನಿಕ್ ಕಾರ್ಖಾನೆಯಿಂದ ಸಿಮೆಂಟ್ ಮೋರಿಯ ಮೂಲಕ ಹೊರ ಬಂದಿದ್ದ ರಾಸಾಯನಿಕ ಮಿಶ್ರಿತ ನೀರು ಸೇವನೆಯಿಂದ 12 ಕುರಿಗಳು ಸ್ಥಳದಲ್ಲೇ ಮೃತಪಟ್ಟು, ಇನ್ನು ಹಲವು ಕುರಿಗಳು ಅಸ್ವಸ್ಥಗೊಂಡಿವೆ.

ಕನ್ನಡಪ್ರಭ ವಾರ್ತೆ ಮದ್ದೂರು

ರಾಸಾಯನಿಕ ಮಿಶ್ರಿತ ನೀರು ಕುಡಿದು 12 ಕುರಿಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಸೋಮನಹಳ್ಳಿ ಕೈಗಾರಿಕಾ ಪ್ರದೇಶದ ಬಳಿ ಶುಕ್ರವಾರ ಸಂಜೆ ಜರುಗಿದೆ.

ಮಂಡ್ಯ ತಾಲೂಕು ಬಸರಾಳು ಹೋಬಳಿ ಹೊಣಕೆರೆಯ ಕಳ್ಳಿಕೊಪ್ಪಲು ಗ್ರಾಮದ ರಾಜು ಅವರಿಗೆ ಸೇರಿದ 12 ಕುರಿಗಳು ಅಸು ನೀಗಿದ್ದು, ಹಲವು ಕುರಿಗಳು ಅಸ್ವಸ್ಥಗೊಂಡಿವೆ ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಕುರಿಗಳ ಮಾಲೀಕ ರಾಜು ಸುಮಾರು 200 ಕುರಿಗಳೊಂದಿಗೆ ಬಂದು ಸೋಮನಹಳ್ಳಿ ಕೈಗಾರಿಕಾ ಪ್ರದೇಶದ ಸಮೀಪದ ಜಮೀನು ವೊಂದರರಲ್ಲಿ ಮೇಯಿಸಲು ವಾಸ್ತವ್ಯ ಹೂಡಿದ್ದರು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಕೈಗಾರಿಕಾ ಪ್ರದೇಶದ ರೇಚನ ಆರ್ಗ್ಯಾನಿಕ್ ಕಾರ್ಖಾನೆಯಿಂದ ಸಿಮೆಂಟ್ ಮೋರಿಯ ಮೂಲಕ ಹೊರ ಬಂದಿದ್ದ ರಾಸಾಯನಿಕ ಮಿಶ್ರಿತ ನೀರು ಸೇವನೆಯಿಂದ 12 ಕುರಿಗಳು ಸ್ಥಳದಲ್ಲೇ ಮೃತಪಟ್ಟು, ಇನ್ನು ಹಲವು ಕುರಿಗಳು ಅಸ್ವಸ್ಥಗೊಂಡಿವೆ.

ಘಟನೆ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪಶು ಸಂಗೋಪನ ಇಲಾಖೆ ಸಹಾಯಕ ನಿರ್ದೇಶಕ ಡಾ.ಗೋವಿಂದ ಹಾಗೂ ಸಿಬ್ಬಂದಿಗಳು ಮೃತಪಟ್ಟ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದರು. ಈ ಸಂಬಂಧ ಕುರಿಗಳ ಮಾಲೀಕ ರಾಜು ನೀಡಿದ ದೂರಿನ ಅನ್ವಯ ಮದ್ದೂರು ಪೊಲೀಸರು ಬಿಎಸ್ಎನ್ ಕಾಯ್ದೆ 325 ಅನ್ವಯ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.