ದ.ಕ.ದಲ್ಲಿ 340 ಬಿಪಿಎಲ್‌ ಕಾರ್ಡ್‌ ರದ್ದು: ಐವನ್ ಡಿಸೋಜ

| Published : Dec 08 2024, 01:18 AM IST

ಸಾರಾಂಶ

ಕೇವಲ 340 ಬಿಪಿಎಲ್‌ ಕಾರ್ಡ್‌ಗಳನ್ನು ಮಾತ್ರ ರದ್ದುಗೊಳಿಸಲಾಗಿದೆ. ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರಲ್ಲ ಎಂಬ ದಾಖಲೆ ನೀಡಲು ವಿಫಲರಾದವರ ಬಿಪಿಎಲ್‌ ಕಾರ್ಡ್‌ ಮಾತ್ರವೇ ಹಿಂಪಡೆಯಲಾಗಿದೆ. ಬಡವರಿಗೆ ಯಾವ ಕಾರಣಕ್ಕೂ ಅನ್ಯಾಯ ಆಗಿಲ್ಲ ಎಂದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನರ್ಹತೆ ಹೊಂದಿದ್ದ ಕೇವಲ 340 ಬಿಪಿಎಲ್‌ ಕಾರ್ಡ್‌ಗಳನ್ನು ಮಾತ್ರ ರದ್ದು ಮಾಡಲಾಗಿದೆ. ಆದರೆ ಬಿಜೆಪಿ ಶಾಸಕರು ‘ಬಿಪಿಎಲ್‌ ಕಾರ್ಡ್‌ಗಳನ್ನು ಮನಬಂದಂತೆ ರದ್ದು ಮಾಡಲಾಗಿದೆ’ ಎಂದು ರಾಜಕೀಯ ಪ್ರೇರಿತ ಸುಳ್ಳು ಹೇಳುತ್ತಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ. ಜಿಲ್ಲೆಯಲ್ಲಿ 4.59 ಲಕ್ಷ ಕುಟುಂಬಗಳು ಪಡಿತರ ಚೀಟಿ ಹೊಂದಿವೆ. ಇದರಲ್ಲಿ 2,77,744 ಬಿಪಿಎಲ್‌ ಕಾರ್ಡ್‌ಗಳಿದ್ದು, ಈ ಪೈಕಿ 5446 ಸಂಶಯಾಸ್ಪದ ಬಿಪಿಎಲ್‌ ಕಾರ್ಡ್‌ಗಳನ್ನು ಗುರುತಿಸಲಾಗಿತ್ತು. ಅದರಲ್ಲಿ 5116 ಮಂದಿಯ ಕಾರ್ಡ್‌ಗಳನ್ನು ಬಿಪಿಎಲ್‌ ಆಗಿಯೇ ಉಳಿಸಲಾಗಿದ್ದು, ಕೇವಲ 340 ಬಿಪಿಎಲ್‌ ಕಾರ್ಡ್‌ಗಳನ್ನು ಮಾತ್ರ ರದ್ದುಗೊಳಿಸಲಾಗಿದೆ. ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರಲ್ಲ ಎಂಬ ದಾಖಲೆ ನೀಡಲು ವಿಫಲರಾದವರ ಬಿಪಿಎಲ್‌ ಕಾರ್ಡ್‌ ಮಾತ್ರವೇ ಹಿಂಪಡೆಯಲಾಗಿದೆ. ಬಡವರಿಗೆ ಯಾವ ಕಾರಣಕ್ಕೂ ಅನ್ಯಾಯ ಆಗಿಲ್ಲ ಎಂದರು.

ಕಾಂಗ್ರೆಸ್ ಮುಖಂಡರಾದ ನವೀನ್‌ ಡಿಸೋಜ, ಸುರೇಂದ್ರ ಕಾಂಬ್ಳಿ, ವಿಕಾಸ್‌ ಶೆಟ್ಟಿ, ಶಾಂತಲಾ ಗಟ್ಟಿ, ಅಮೃತ್‌ ಕದ್ರಿ, ಅಲಿಸ್ಟನ್‌ ಡಿಕುನ್ನಾ, ಸುರೇಖ ಮತ್ತಿತರರಿದ್ದರು.