ಮಧ್ಯ ಗ್ರಾಮ ಸೇವಾ ಸಂಘದ 53ನೇ ವಾರ್ಷಿಕೋತ್ಸವ

| Published : May 14 2025, 12:14 AM IST

ಸಾರಾಂಶ

ಮಧ್ಯ ಶ್ರೀ ಖಡ್ಗೇಶ್ವರ ಖಡ್ಗೇಶ್ವರಿ ದೇವಸ್ಥಾನದ ವಠಾರದಲ್ಲಿ ಗ್ರಾಮ ಸೇವಾ ಸಂಘ ಮಧ್ಯದ 53ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಜೀವನದಲ್ಲಿ ಹಲವು ಸವಾಲುಗಳಿದ್ದು, ಅದನ್ನು ಮೆಟ್ಟಿ ನಿಲ್ಲುವ ತಾಕತ್ತನ್ನು ಹೊಂದಬೇಕೆಂದು ಉದ್ಯಮಿ ಮೋಹನ್ ಚೌಟ ಮಧ್ಯ ಹೇಳಿದರು.

ಮಧ್ಯ ಶ್ರೀ ಖಡ್ಗೇಶ್ವರ ಖಡ್ಗೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆದ ಗ್ರಾಮ ಸೇವಾ ಸಂಘ ಮಧ್ಯದ 53ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಸೇವಾ ಸಂಘ ಅಧ್ಯಕ್ಷ ಪ್ರಭಾಕರ ಶೆಟ್ಟಿ ವಹಿಸಿದ್ದರು. ಈ ಸಂದರ್ಭ ಮುಂಬೈಯಲ್ಲಿ ವಕೀಲರಾಗಿದ್ದು, ನೋಟರಿಯಾಗಿ ಆಯ್ಕೆಯಾದ ದಿನಕರ ಕೆ. ಶೆಟ್ಟಿ ಮಧ್ಯ ಕುಂಜರಬಾಳಿಕೆ ಅವರನ್ನು ಸನ್ಮಾನಿಸಲಾಯಿತು.

ಮುಂಬೈ ಉದ್ಯಮಿ ಅನಿಲ್ ಶೆಟ್ಟಿ ತೇವು ಸೂರಿಂಜೆ, ಚೇಳೈರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಾನಂದ, ಮುಂಬೈ ಉದ್ಯಮಿ ರಮೇಶ್ ಶೆಟ್ಟಿ ಸಾಣೂರು ಮಧ್ಯ, ಮುಂಬೈ ಉದ್ಯಮಿ ಕುಟ್ಟಿ ಶೆಟ್ಟಿ ಬಗ್ಗಣ್ಣಮನೆ ಮಧ್ಯ, ಮುಂಬೈ ಉದ್ಯಮಿ ಅಶೋಕ್ ಶೆಟ್ಟಿ ಕಾಳದೂಮಣ್ಣ ಮನೆ ಮಧ್ಯ, ಉದ್ಯಮಿ ಅಶೋಕ್ ದೇವಾಡಿಗ ಕಾಟಿಪಳ್ಳ, ಜಯಂತ್ ದೇವಾಡಿಗ ಮಧ್ಯ, ಮಧ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯೆ ಪ್ರಭಾಲಾಕ್ಷಿ ಶೆಟ್ಟಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ವಜ್ರಾಕ್ಷಿ ಪಿ. ಶೆಟ್ಟಿ, ಮಧ್ಯ ಫ್ರೆಂಡ್ಸ್ ಅಧ್ಯಕ್ಷ ಡಿಶಾಂತ್ ಶೆಟ್ಟಿ, ಮಹಿಳಾ ಮಂಡಲ ಅಧ್ಯಕ್ಷೆ ಯಶೋದಾ ಪೂಜಾರಿ, ಪ್ರಮೀತ್ ಬಿ. ಶೆಟ್ಟಿ, ಗ್ರಾಮ ಸೇವಾ ಸಂಘದ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ, ಕಾರ್ಯದರ್ಶಿ ರಾಜೇಶ್ ಶೆಟ್ಟಿ, ದೀಪಕ್ ಶೆಟ್ಟಿ, ಚರಣ್ ಶೆಟ್ಟಿ, ಅಶೋಕ್, ಸಂತೋಷ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು. ಸಂಘ ಜತೆ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಘ ಉಪಾಧ್ಯಕ್ಷ ದಿನೇಶ್ ದೇವಾಡಿಗ ವಂದಿಸಿದರು.