ಸಾರಾಂಶ
- ರಾವೂರು ಗ್ರಾಮದ ಭದ್ರಾ ಹಿನ್ನೀರಿಗೆ 62 ಲಕ್ಷ ಮೀನು ಮರಿಗಳು ಬಿಡುವ ಕಾರ್ಯಕ್ರಮಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಮೀನುಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಸ್ತುತ ಭದ್ರಾ ಹಿನ್ನೀರಿಗೆ 62 ಲಕ್ಷ ಮೀನು ಮರಿಗಳನ್ನು ಬಿಡಲಾಗುತ್ತಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.ಶನಿವಾರ ತಾಲೂಕಿನ ಮೆಣಸೂರು ಗ್ರಾಪಂ ವ್ಯಾಪ್ತಿಯ ರಾವೂರು ಗ್ರಾಮದ ಭದ್ರಾಹಿನ್ನೀರಿನಲ್ಲಿ ಸರ್ಕಾರ ಮತ್ತು ಮೀನು ಗಾರಿಕೆ ಇಲಾಖೆಯಿಂದ ಮೀನುಮರಿಗಳನ್ನು ಬಿಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಭದ್ರಾಹಿನ್ನೀರಿಗೆ ಪ್ರಸ್ತುತ 1 ಕೋಟಿ ಮೀನುಮರಿಗಳನ್ನು ಬಿಡುವ ಬಗ್ಗೆ ನಿರ್ಧಾರ ಮಾಡಲಾಗಿದೆ. ಪ್ರಸ್ತುತ 62 ಲಕ್ಷ ಮೀನುಮರಿಗಳನ್ನು ಬಿಡಲಾಗುತ್ತಿದೆ. ಭದ್ರಾಹಿನ್ನೀರಿನ ಇತಿಹಾಸದಲ್ಲಿ ಏಕಕಾಲದಲ್ಲಿ ಸರ್ಕಾರದ ಫಾರಂ ಮತ್ತು ಖಾಸಗಿ ಫಾರಂಗಳಲ್ಲಿ ಬೆಳೆಸಿದ ಹಾಗೂ 62 ಲಕ್ಷ ಮೀನು ಮರಿ ಬಿಡುತ್ತಿರುವುದು ಇದೇ ಪ್ರಥಮ. ಕಳೆದ 5 ವರ್ಷಗಳ ನನ್ನ ಶಾಸಕರ ಅವಧಿಯಲ್ಲಿ 1.10 ಕೋಟಿ ಮೀನುಮರಿಗಳನ್ನು ಬಿಡಲಾಗಿತ್ತು. ಮೀನುಗಾರರು ಮೀನುಗಳ ಸಂತಾನೋತ್ಪತ್ತಿ ಸಮಯದಲ್ಲಿ ಮೀನುಗಾರಿಕೆ ಮಾಡಬಾರದು. ಚಿಕ್ಕ ಬಲೆಯಲ್ಲಿ ಮೀನುಗಾರಿಕೆ ಮಾಡಬಾರದು. ಕನಿಷ್ಠ 2 ಕೆಜಿ ಮೇಲ್ಪಟ್ಟ ಮೀನುಗಳು ಶಿಕಾರಿ ಯಾಗುವಂತಹ ಬಲೆಗಳನ್ನು ಬಿಡಬೇಕು. ಮೀನುಗಾರರ ಬೇಡಿಕೆಯಂತೆ 12 ಅಡಿ ದೋಣಿ ಕೊಡಲಾಗುತ್ತಿದೆ. ಹಿಂದೆ 10 ಅಡಿ ದೋಣಿ ಕೊಡುತ್ತಿದ್ದರು. ಮೀನುಗಾರಿಕೆ ಸಚಿವ ಮಕಾಳ್ ವೈದ್ಯರಿಗೆ ಪತ್ರ ಬರೆದ ಒಂದು ವಾರದಲ್ಲಿಯೇ ಮೀನು ಮರಿಗಳನ್ನು ಬಿಡುಗಡೆ ಮಾಡಿದ್ದಾರೆ. ಮೀನು ಮರಿಗಳನ್ನು ವಾರಕ್ಕೆ 10 ಲಕ್ಷದಂತೆ ಬಿಡಲಾಗುವುದು. ಇಂದು ರಾವೂರು, ಲಿಂಗಾಪುರ, ಹೊನ್ನೆಕೂಡಿಗೆ ಭಾಗದ ಭದ್ರಾಹಿನ್ನೀರಿಗೆ ಮೀನುಮರಿ ಬಿಡಲಾಗುವುದು. ಮೀನುಗಾರಿಕೆ ಇಲಾಖೆಯ ಸೌಲಭ್ಯಗಳನ್ನುಸದುಪಯೋಗಪಡಿಸಿಕೊಳ್ಳಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಪ್ರಶಾಂತ್ ಶೆಟ್ಟಿ, ಜುಬೇದ, ನಿಶಾಂತ, ಸದಾಶಿವ, ಯಾಸ್ಮಿನ್,ಉಮಾ, ಚಂದ್ರು, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಸಹನಾ ಇದ್ದರು;Resize=(128,128))
;Resize=(128,128))
;Resize=(128,128))