ಬಡಾವಣೆಯ ಸ್ವಚ್ಚತೆ, ಜನರಲ್ಲಿ ಐಕ್ಯತೆ, ಸಹಬಾಳ್ವೆ, ಸಹಕಾರದೊಂದಿಗೆ ಕ್ರೀಡಾ ಚಟುವಟಿಕೆ

ಕನ್ನಡಪ್ರಭ ವಾರ್ತೆ ಮೈಸೂರುತ್ಯಾಗ, ಬಲಿದಾನಗಳಿಂದ ನಮಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ಜತನದಿಂದ ಕಾಪಾಡಿಕೊಳ್ಳಬೇಕು. ನಮ್ಮ ಹಕ್ಕುಗಳನ್ನು ಕೇಳುವುದರ ಜೊತೆಗೆ ನಮ್ಮ ಕರ್ತವ್ಯಗಳನ್ನು ಮರೆಯಬಾರದು ಎಂದು ರಾಮಕೃಷ್ಣ ಸಾಂಸ್ಕೃತಿಕ ಕ್ರೀಡಾ ಸಂಸ್ಥೆಯ ಅಧ್ಯಕ್ಷ ಬಸವಲಿಂಗಪ್ಪ ಹೇಳಿದರು.ರಾಮಕೃಷ್ಣನಗರದ ನಂದನವನ ಉದ್ಯಾನ ವನದಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ರಾಮಕೃಷ್ಣ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಸ್ಥೆ ಕಳೆದ ಮೂವತ್ತು ವರ್ಷಗಳಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ. ಬಡಾವಣೆಯ ಸ್ವಚ್ಚತೆ, ಜನರಲ್ಲಿ ಐಕ್ಯತೆ, ಸಹಬಾಳ್ವೆ, ಸಹಕಾರದೊಂದಿಗೆ ಕ್ರೀಡಾ ಚಟುವಟಿಕೆ ನಡೆಸಿಕೊಂಡು ಬರಲಾಗುತ್ತಿದೆ. ನಮ್ಮ ಬಡಾವಣೆಯಲ್ಲಿ ಮೂಲಭೂತ ವ್ಯವಸ್ಥೆಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕು.ಸ್ವಾತಂತ್ರ್ಯದ ಮಹತ್ವವನ್ನು ಮುಂದಿನ ತಲೆಮಾರಿಗೆ ತಿಳಿಸಬೇಕು ಎಂದರು.ಹಿರಿಯ ಸದಸ್ಯ ಶ್ರೀರಂಗ ಮಾತನಾಡಿ,ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ನೆನಪಿಸಿದರು. ಸುಬ್ರಹ್ಮಣ್ಯ ಸ್ವಾಮಿ, ಚೌಡಪ್ಪ ಮಾತನಾಡಿದರು. ಚಿನ್ನಸ್ವಾಮಿ ವಡ್ಡಗೆರೆ, ವಕೀಲರಾದ ಕೆ.ಎ. ಮಹೇಶ್, ವಿಷಕಂಠ, ಪ್ರಭಾಕರ್, ಶಿವಣ್ಣ, ಅರುಣ್, ಬಸವರಾಜು ಇದ್ದರು.