- ಬನ್ನಿತಾಳಪುರ ಗ್ರಾಮದ 6 ದೇಗಲಗಳಲ್ಲಿ ಕಳ್ಳರ ಕೈಚಳಕ
- ದೇಗುಲಗಳ ಚಿನ್ನದ ಸರ, ಹುಂಡಿ ಕಾಸು, ಆಭರಣ ಕಳವು---
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆತಾಲೂಕಿನ ಬನ್ನಿತಾಳಪುರ ಗ್ರಾಮದ 6 ದೇವಸ್ಥಾನಗಳಲ್ಲಿ ಸರಣಿ ಕಳ್ಳತನ ಗುರುವಾರ ರಾತ್ರಿ ನಡೆದಿದ್ದು, ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.ತಾಲೂಕಿನ ಬನ್ನಿತಾಳಪುರ ಗ್ರಾಮದ ಕಿಕ್ಕೇರಿ ಮಹಾಲಕ್ಷ್ಮಿ ದೇವಸ್ಥಾನ, ಸಾಗಡೆ ರಾಕಸಮ್ಮ ದೇವಸ್ಥಾನ, ಉತ್ತನಹಳ್ಳಿ ಮಾರಮ್ಮ ದೇವಸ್ಥಾನ, ಮಲೆಯೂರು ಮಾರಮ್ಮ ದೇವಸ್ಥಾನ, ಗೋಣಳ್ಳಿ ದೇವಸ್ಥಾನ, ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಗಳಲ್ಲಿ ಕಳ್ಳರು ಸರಣಿ ಕಳ್ಳತನ ಎಸಗಿ ಪರಾರಿಯಾಗಿದ್ದಾರೆ.
ಆರು ದೇವಸ್ಥಾನಗಳಲ್ಲಿಯೂ ಗುರುವಾರ ರಾತ್ರಿಯೇ ಹೊಂಚು ಹಾಕಿರುವ ಕಳ್ಳರು ದೇವಸ್ಥಾನಗಳ ಬೀಗಗಳನ್ನು ಒಡೆದು ಒಳಗೆ ಪ್ರವೇಶಿಸಿ ಚಿನ್ನದ ತಾಳಿಗಳು, ಬೆಳ್ಳಿ ಕೊಳಲು, ಚಿನ್ನದ ಕಾಸುಗಳು, ಚಿನ್ನದ ಗುಂಡು, ಕಳ್ಳತನ ಮಾಡಿದ ಬಳಿಕ ಗೋಲಕಗಳನ್ನು ಹೊಡೆದು ಹಣ ದೋಚಿಕೊಂಡು ಪರಾರಿಯಾಗಿದ್ದಾರೆ.
ಗುಂಡ್ಲುಪೇಟೆ ಪ್ರಭಾರ ಪೊಲೀಸ್ ಇನ್ಸ್ಪೆಕ್ಟರ್ ಮೋಹಿತ್ ಸಹದೇವ್ ಸ್ಥಳಕ್ಕೇ ಭೇಟಿ ನೀಡಿ ಆರು ದೇವಸ್ಥಾನಗಳ ಪರಿಶೀಲನೆ ನಡೆಸಿದ್ದಾರೆ.ಈ ಸಂಬಂಧ ಪೊಲೀಸರು ಮುಂದಿನ ತನಿಖೆ ನಡೆಸಿದ್ದಾರೆ.
---ಕಿಕ್ಕೇರಿ ಮಹಾಲಕ್ಷ್ಮಿ ದೇವಸ್ಥಾನ, ಸಾಗಡೆ ರಾಕಸಮ್ಮ ದೇವಸ್ಥಾನ, ಉತ್ತನಹಳ್ಳಿ ಮಾರಮ್ಮ ದೇವಸ್ಥಾನ, ಮಲೆಯೂರು ಮಾರಮ್ಮ ದೇವಸ್ಥಾನ, ಗೋಣಳ್ಳಿ ದೇವಸ್ಥಾನ, ಹಿಮವದ್ ಗೋಪಾಲಸ್ವಾಮಿ ದೇವಸ್ಥಾನ.---ಗುಂಡ್ಲುಪೇಟೆ ತಾಲೂಕಿನ ಬನ್ನಿತಾಳಪುರದಲ್ಲಿ ಕಳ್ಳತನ ನಡೆದ ದೇವಸ್ಥಾನಕ್ಕೆ ಪ್ರಭಾರ ಪೊಲೀಸ್ ಇನ್ಸ್ಪೆಕ್ಟರ್ ಮೋಹಿತ್ ಸಹದೇವ್ ಭೇಟಿ ಪರಿಶೀಲನೆ ನಡೆಸಿದರು.