ನೂರಾರು ನಾಯಕರನ್ನು ರೂಪಿಸುವವನೇ ನಿಜವಾದ ನಾಯಕ

| Published : Mar 06 2025, 12:32 AM IST

ಸಾರಾಂಶ

ಅಧಿಕಾರ ಪ್ರತಿಷ್ಠೆ, ಚಪ್ಪಾಳೆ, ಹಾರ-ತುರಾಯಿ ಸನ್ಮಾನಗಳಿಂದ ವ್ಯಕ್ತಿ ನಾಯಕವಾಗುವುದಿಲ್ಲ. ತನ್ನಂತೆ ನೂರಾರು ನಾಯಕರನ್ನು ರೂಪಿಸುವವನೇ ನಿಜವಾದ ನಾಯಕ ಎಂದು ನೈರುತ್ಯ ರೈಲ್ವೆಯ ಡಿಆರ್‌ಯುಸಿಸಿ ನಿರ್ದೇಶಕ ಎಫ್.ಎಸ್.ಸಿದ್ದನಗೌಡರ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಅಧಿಕಾರ ಪ್ರತಿಷ್ಠೆ, ಚಪ್ಪಾಳೆ, ಹಾರ-ತುರಾಯಿ ಸನ್ಮಾನಗಳಿಂದ ವ್ಯಕ್ತಿ ನಾಯಕವಾಗುವುದಿಲ್ಲ. ತನ್ನಂತೆ ನೂರಾರು ನಾಯಕರನ್ನು ರೂಪಿಸುವವನೇ ನಿಜವಾದ ನಾಯಕ ಎಂದು ನೈರುತ್ಯ ರೈಲ್ವೆಯ ಡಿಆರ್‌ಯುಸಿಸಿ ನಿರ್ದೇಶಕ ಎಫ್.ಎಸ್.ಸಿದ್ದನಗೌಡರ ಹೇಳಿದರು.

ಪತ್ರಿ ಬಸವನಗರ ಅಭಿವೃದ್ಧಿ ಸಂಘ, ತಾಲೂಕು ಶರಣ ಸಾಹಿತ್ಯ ಪರಿಷತ್‌, ಜಿಲ್ಲಾ ಕದಳಿ ಮಹಿಳಾ ವೇದಿಕೆ, ಹಿರಿಯ ನಾಗರಿಕರ ವೇದಿಕೆ, ಜಾಗತಿಕ ಲಿಂಗಾಯತ ಮಹಾಸಭಾದ ಸಂಯುಕ್ತ ಆಶ್ರಯದಲ್ಲಿ ಪತ್ರಿಬಸವ ಮಂಟಪದಲ್ಲಿ ಆಯೋಜಿಸಿದ್ದ 27ನೇ ಮಾಸಿಕ ಅನುಭಾವ ಗೋಷ್ಠಿ ಹಾಗೂ ಹರ್ಡೆಕರ್ ಮಂಜಪ್ಪನವರ ಜಯಂತಿ ಉತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಾವಿರಾರು ರಾಷ್ಟ್ರ, ನಾಡ, ಬಸವ ಭಕ್ತರನ್ನು ತಯಾರು ಮಾಡಿ ಬಸಣ್ಣನವರ ವಚನಗಳನ್ನು ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮ ಗಾಂಧೀಜಿಯವರಿಗೆ ಪರಿಚಯಿಸಿ ಪ್ರಶಂಸೆಗೆ ಪಾತ್ರರಾದ ಮಂಜಪ್ಪನವರು ನಮಗೆ ಸ್ಫೂರ್ತಿ ಎಂದರು.ಪತ್ರಿ ಬಸವ ನಗರ ಅಭಿವೃದ್ಧಿ ಸಂಘದ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ಮಾನವಿಯತೆ ನೆಲೆಗಟ್ಟಿನ ಮೇಲೆ ಜಾತಿರಹಿತ ಸಮಾನತೆಯ ಕಾಯಕ ತತ್ವದಡಿಯ ಭಕ್ತಿಭಾವದ ಲಿಂಗಾಯತ ಧರ್ಮದ ಸಂಸ್ಥಾಪಕ‌ ಅಣ್ಣ ಬಸವಣ್ಣನವರ ಹಾಕಿಕೊಟ್ಟ ಧರ್ಮದ ಮಾರ್ಗದಲ್ಲಿ ನಡೆಯೋಣ ಎಂದರು.ಮುರಗೋಡದ ಬಸವ ಮಹಾಮನೆ ಸದಸ್ಯೆ ಶೋಭಾ ಹಂಪಿಹೊಳಿ ಉಪನ್ಯಾಸ ನೀಡಿ, ವಚನ ಸಾಹಿತ್ಯ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದವ ಜೀವನ‌ ಚರಿತ್ರೆ ಮಕ್ಕಳ ಪಠ್ಯ ಪುಸ್ತಕದಲ್ಲಿ ವಿವರವಾಗಿ ಮುದ್ರಣವಾಗಬೇಕು ಎಂದು ಆಗ್ರಹಿಸಿದರು.ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷೆ ಗೌರಾದೇವಿ ತಾಳಿಕೋಟಿಮಠ, ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಕಾಡಪ್ಪ ರಾಮಗುಂಡಿ, ದುಂಡಯ್ಯ ಕುಲಕರ್ಣಿ, ಮೃತ್ಯುಂಜಯ ಗಡತನವರ, ವೀರಭದ್ರಪ್ಪ ಕಾಪಸೆ, ಗಂಗಣ್ಣ ಅಂಗಡಿ, ಅಶೋಕ ಸಾಲಿ, ಮಾರುತಿ ಮಸ್ತಮ್ಮನವರ್, ಶಿವಲೀಲಾ ಹುಲಿಕಟ್ಟಿ, ಕಲಾವತಿ ಕಡಕೋಳ, ಗೀತಾ ಅರಳಿಕಟ್ಟಿ, ವಿಜಯಾ ಹಾಲಬಾವಿ, ನಿರ್ಮಲಾ ಕಲ್ಬುರ್ಗಿ, ಸಾವಿತ್ರಿ ಹೊತ್ತಿಗಿಮಠ, ಸರ್ವ ಸಂಘಟನೆಗಳ ನೂರಾರು ಸದಸ್ಯರು ಉಪಸ್ಥಿತರಿದ್ದರು.ದಾನೇಶ್ವರಿ ಸಾಣಿಕೊಪ್ಪ ವಚನ ಚಿಂತನೆಗೈದರು. ಸುವರ್ಣ ಬಿಜುಗುಪ್ಪಿ ಅಧ್ಯಕ್ಷತೆ ವಹಿಸಿದ್ದರು. ಅಜಗಣ್ಣ ಮುಕ್ತಾಯಕ್ಕ ಬಳಗ ಪ್ರಾರ್ಥಿಸಿದರು. ಬಸವರಾಜ ಹುಬ್ಬಳ್ಳಿ ಸ್ವಾಗತಿಸಿದರು. ಸುಹಾಸಿನಿ ಶಿಳ್ಳಿ ಪ್ರಾಸ್ತಾವಿಕ ನುಡಿದರು. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಂತೋಷ್ ಕೊಳವಿ ವಂದಿಸಿದರು. ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ದಾಕ್ಷಾಯಿಣಿ ಹುಬ್ಬಳ್ಳಿ ಕಾರ್ಯಕ್ರಮ ನಿರೂಪಿಸಿದರು.ನೆಮ್ಮದಿಯ ಬದುಕಿಗೆ ಧಾರ್ಮಿಕ ವಿಚಾರಗಳು ಇಂದಿನ ಯಾಂತ್ರಿಕ ಯುಗದಲ್ಲಿ ಅತ್ಯಂತ ಅವಶ್ಯಕ. 12ನೇ ಶತಮಾನದಲ್ಲಿ ಶರಣರು ಬರೆದ ಒಂದೊದು ವಚನಗಳು ನಮ್ಮ ಸಾಮಾಜಿಕ, ವೈಯಕ್ತಿಕ ಜವಾಬ್ದಾರಿ, ನಮ್ಮ ನಡೆ ನುಡಿ, ಧಾರ್ಮಿಕ ವಿಚಾರದ ಜತೆಗೆ ನಮ್ಮ ಕಾಯಕವನ್ನು ಸಾರುವ ನುಡಿಗಳಾಗಿದ್ದು, ಸಮಾಜದ ಎಲ್ಲ ಕಾಯಕ ಮತ್ತು ಆಡಳಿತ ವರ್ಗಗಳನ್ನು ಸದಾ ಎಚ್ಚಿರಿಸುವ ಜಗತ್ತಿನ ಅತ್ಯಂತ ಬಲಿಷ್ಠವಾದ ಸಾಹಿತ್ಯ ಎಂದರೇ ಅದು ವಚನ ಸಾಹಿತ್ಯವಾಗಿದೆ.

-ಎಫ್.ಎಸ್.ಸಿದ್ದನಗೌಡರ, ನೈರುತ್ಯ ರೈಲ್ವೆಯ ಡಿಆರ್‌ಯುಸಿಸಿ ನಿರ್ದೇಶಕರು.

ಶರಣರು ಕಂಡ ಜಾತಿರಹಿತ, ಸಮಾನತೆಯ ಸಮಾಜದ ನಿರ್ಮಾಣ ಸ್ತ್ರೀ ಸಮಾನತೆಯಿಂದ ಸಮಾಜೋದ್ದಾರಕ ಕಾರ್ಯಗಳಲ್ಲಿ ಭಾಗವಹಿಸಿ ತನು, ಮನ, ದನ ಸಹಾಯ ಸಹಕಾರ ನೀಡಿ ಲಿಂಗಾಯತ ಧರ್ಮದ ಜಾಗೃತಿ ಮೂಡಿಸೋಣ.

-ಪ್ರೇಮಕ್ಕ ಅಂಗಡಿ, ಪತ್ರಿ ಬಸವ ನಗರ ಅಭಿವೃದ್ಧಿ ಸಂಘದ ಅಧ್ಯಕ್ಷೆ.