ಸಾರಾಂಶ
ನೂತನ ಸಿನಿಮಾ ಉತ್ತರಕಾಂಡದ ಚಿತ್ರೀಕರಣದ ಆರಂಭಕ್ಕೆ ಮುನ್ನ ಕಟೀಲು ದೇವರಲ್ಲಿ ಪ್ರಾರ್ಥಿಸಿ ಪ್ರಸಾದ ಸ್ವೀಕರಿಸಿದರು.
ಮೂಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಬುಧವಾರ ಚಿತ್ರನಟ ಡಾಲಿ ಧನಂಜಯ್ ಭೇಟಿ ನೀಡಿ ದೇವರ ದರ್ಶನ ಪಡೆದರು. ನಿರ್ಮಾಪಕ ಕಾರ್ತಿಕ್ ಗೌಡ, ಯೋಗಿ ಜಿ. ರಾಜ್. ನಿರ್ದೇಶಕ ರೋಹಿತ್ ಪದಕಿ ಮತ್ತಿತರರು ತಮ್ಮ ನೂತನ ಸಿನಿಮಾ ಉತ್ತರಕಾಂಡದ ಚಿತ್ರೀಕರಣದ ಆರಂಭಕ್ಕೆ ಮುನ್ನ ಕಟೀಲು ದೇವರಲ್ಲಿ ಪ್ರಾರ್ಥಿಸಿ ಪ್ರಸಾದ ಸ್ವೀಕರಿಸಿದರು.