ದೊಡ್ಡಕುಂದೂರು ಗ್ರಾಮಕ್ಕೆ ₹1 ಕೋಟಿಗೂ ಹೆಚ್ಚಿನ ಅನುದಾನ: ಶಾಸಕ ಜಿ.ಎಚ್.ಶ್ರೀನಿವಾಸ್

| Published : May 13 2025, 01:37 AM IST

ದೊಡ್ಡಕುಂದೂರು ಗ್ರಾಮಕ್ಕೆ ₹1 ಕೋಟಿಗೂ ಹೆಚ್ಚಿನ ಅನುದಾನ: ಶಾಸಕ ಜಿ.ಎಚ್.ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ತಾಲೂಕಿನ ದೊಡ್ಡಕುಂದೂರು ಗ್ರಾಮದಲ್ಲಿ ಇದುವರೆಗೂ ಕೈಗೊಂಡಿರುವ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ₹1 ಕೋಟಿಗೂ ಹೆಚ್ಚಿನ. ಅನುದಾನ ಒದಗಿಸಲಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು.

ಕನ್ನಡಪ್ರಭ ವಾರ್ತೆ, ತರೀಕೆರೆ

ತಾಲೂಕಿನ ದೊಡ್ಡಕುಂದೂರು ಗ್ರಾಮದಲ್ಲಿ ಇದುವರೆಗೂ ಕೈಗೊಂಡಿರುವ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ₹1 ಕೋಟಿಗೂ ಹೆಚ್ಚಿನ. ಅನುದಾನ ಒದಗಿಸಲಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು.

ತಾಲೂಕಿನ ಲಕ್ಕವಳ್ಳಿ ಹೋಬಳಿ ದೊಡ್ಡಕುಂದೂರು ಗ್ರಾಮದಲ್ಲಿ ಸೋಮವಾರ ₹55 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮದ ಜನರು ದಿನನಿತ್ಯ ಸಂಚರಿಸುವ ತಡೆಗೋಡೆ ಇಲ್ಲದಿರುವ ಭದ್ರಾ ನದಿಯ ಕಾಲುವೆಗೆ ತಡೆಗೋಡೆ ನಿರ್ಮಿಸಲಾಗುವುದು. ವಿದ್ಯಾರ್ಥಿಗಳು ಮತ್ತು ವೃದ್ದರ ಓಡಾಟಕ್ಕೆ ಅನುಕೂಲವಾಗುವಂತೆ ಬಸ್ಸಿನ ಸೌಕರ್ಯ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು. ಸ್ಮಶಾನ ಮತ್ತು ಹೊಲ, ಗದ್ದೆ, ಜಮೀನುಗಳಿಗೆ ಹೋಗುವ ರಸ್ತೆ ಅಭಿವೃದ್ಧಿಗೆ ಅನುದಾನ ನೀಡಲಾಗುವುದು. ಮುಂದಿನ ದಿನಗಳಲ್ಲಿ ಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ನೀಡಬೇಕು ಎಂದು ಜನರಲ್ಲಿ ಮನವಿ ಮಾಡಿದರು.

ಕೆಂಚಿಕೊಪ್ಪ ಗ್ರಾಪಂ ಉಪಾಧ್ಯಕ್ಷ ಹರಿಕೃಷ್ಣ ಮಾತನಾಡಿ, ಹದಗೆಟ್ಟಿರುವ ಕೆಂಚಿಕೊಪ್ಪದಿಂದ ದೊಡ್ಡಕುಂದೂರಿಗೆ ಬರುವ ೨ ಕಿ.ಮೀ. ರಸ್ತೆ ದುರಸ್ಥಿಗೆ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.ಮುಖಂಡ ಅರುಣ ಮಾತನಾಡಿ, ಗ್ರಾಮದ ಸರ್ಕಾರಿ ಶಾಲೆ ಕೊಠಡಿ ಆಧುನೀಕರಣಕ್ಕೆ ₹5 ಲಕ್ಷ ಈ ಹಿಂದೆ ಗ್ರಾಮದ ಒಳಗಿನ ರಸ್ತೆ ಕಾಮಗಾರಿಗೆ ₹10 ಲಕ್ಷ ಅನುದಾನವನ್ನು ಶಾಸಕರು ನೀಡಿದ್ದರು. ಉಳಿದಿರುವ ಅಭಿವೃದ್ಧಿ ಕೆಲಸಗಳಿಗೆ ಹಂತ ಹಂತವಾಗಿ ಅನುದಾನ ಒದಗಿಸಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಕೆಂಚಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಗುಲಾಬಿ, ರಂಗೇನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷೆ ಜೀನತ್‌ಬಾನು, ಸದಸ್ಯ ಶಿವಕುಮಾರ್, ಕಾಡಾ ಸದಸ್ಯ ರಾಜಶೇಖರ್, ತಾಲೂಕು ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಮಣಿಕಂಠ, ಪಿಡಿಒ ಭದ್ರಾಚಾರಿ, ಮುಖಂಡರಾದ ಮುಸ್ತಫ, ಮಾಗುಂಡಿ, ಎಂಜಿನಿಯಂರಿಂಗ್ ಉಪ ವಿಭಾಗದ ಎಇ ರವಿ, ಹಾಗೂ ಇತರರು ಹಾಜರಿದ್ದರು.12ಕೆಟಿಆರ್.ಕೆ.10_

ತರೀಕೆರೆ ಸಮೀಪದದೊಡ್ಡಕುಂದೂರು ಗ್ರಾಮದಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ₹55 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಾಂಕ್ರಿಟ್. ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.