ಪರಕೀಯ ಸಂಸ್ಕೃತಿಯಿಂದ ರಾಷ್ಟ್ರದ ಭದ್ರತೆಗೆ ಕುತ್ತು: ಡಾ. ಸಪ್ನಾ ಅನಿಗೋಳ

| Published : Sep 12 2025, 01:00 AM IST

ಪರಕೀಯ ಸಂಸ್ಕೃತಿಯಿಂದ ರಾಷ್ಟ್ರದ ಭದ್ರತೆಗೆ ಕುತ್ತು: ಡಾ. ಸಪ್ನಾ ಅನಿಗೋಳ
Share this Article
  • FB
  • TW
  • Linkdin
  • Email

ಸಾರಾಂಶ

ವಿದೇಶಿ ಉಡುಗೆ, ತೊಡುಗೆ, ಆಹಾರ ಪದ್ಧತಿಗೆ ಒಳಗಾಗಿ ಸ್ವದೇಶಿಯತೆ ಮರೆಯದಿರಿ. ಪರಕೀಯ ಸಂಸ್ಕೃತಿ ದಾಳಿಯಿಂದ ರಾಷ್ಟ್ರದ ಭದ್ರತೆಗೆ ಕುತ್ತು ಬರುತ್ತಿದೆ ಎಂದು ಮಹಾಲಿಂಗಪುರ ಕೆ.ಎಲ್.ಇ ಸೊಸೈಟಿಯ ಮಾಧ್ಯಮಿಕ ಶಾಲೆಯ ಸಹ ಶಿಕ್ಷಕಿ ಹಾಗೂ ರಾಷ್ಟ್ರಮಟ್ಟದ ಅತ್ಯುನ್ನತ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಡಾ. ಸಪ್ನಾ ಅನಿಗೋಳ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ವಿದೇಶಿ ಉಡುಗೆ, ತೊಡುಗೆ, ಆಹಾರ ಪದ್ಧತಿಗೆ ಒಳಗಾಗಿ ಸ್ವದೇಶಿಯತೆ ಮರೆಯದಿರಿ. ಪರಕೀಯ ಸಂಸ್ಕೃತಿ ದಾಳಿಯಿಂದ ರಾಷ್ಟ್ರದ ಭದ್ರತೆಗೆ ಕುತ್ತು ಬರುತ್ತಿದೆ. ಹಾಗಾಗಿ ಹೆಣ್ಣು ಮಕ್ಕಳು ಜಾಗೃತರಾಗಿ ಸಾಮಾಜಿಕ ಜಾಲತಾಣಗಳ ಸುಳಿಗೆ ಸಿಲುಕಿ ದೇಸಿ ಸಂಸ್ಕೃತಿ ಮರೆತು ಜೀವನ ನಡೆಸಬೇಡಿ. ಮುಂದಿನ ಪೀಳಿಗೆಗೆ ವೈಜ್ಞಾನಿಕ ತಳಹದಿಯ ಮೇಲೆ ನಮ್ಮ ಹಿರಿಯರು ಕಟ್ಟಿಕೊಟ್ಟಿರುವ ಸನಾತನ ಸಂಸ್ಕೃತಿ ಉಳಿಯುವಂತೆ ಮಾಡಿ ಭವ್ಯ ಭವಿಷ್ಯತ್ತಿನ ಭಾರತ ಕಟ್ಟುವಲ್ಲಿ ಕೈಜೋಡಿಸಿ ಎಂದು ಮಹಾಲಿಂಗಪುರ ಕೆ.ಎಲ್.ಇ ಸೊಸೈಟಿಯ ಮಾಧ್ಯಮಿಕ ಶಾಲೆಯ ಸಹ ಶಿಕ್ಷಕಿ ಹಾಗೂ ರಾಷ್ಟ್ರಮಟ್ಟದ ಅತ್ಯುನ್ನತ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಡಾ. ಸಪ್ನಾ ಅನಿಗೋಳ ಹೇಳಿದರು.

ನಗರದ ದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯದ ಪ್ರಸಕ್ತ ಶೈಕ್ಷಣಿಕ ವರ್ಷದ ಮಹಿಳಾ ಸಬಲೀಕರಣ ಘಟಕ ಉದ್ಘಾಟಿಸಿ ಮಾತನಾಡಿದರು.

ಕಾಲೇಜಿನ ಪ್ರಾಚಾರ್ಯ ಪ್ರೊ.ಎಂ.ಎಂ. ಹಿರೇಮಠ ಅಧ್ಯಕ್ಷತೆವಹಿಸಿ ಮಾತನಾಡಿ, ಹೆಣ್ಣು ಸಂಸ್ಕೃತಿಯ ಕಣ್ಣು, ಹೆಣ್ಣು ಭಾರತೀಯ ಪರಂಪರೆಯಲ್ಲಿ ಪೂಜ್ಯನೀಯ ಸ್ವರೂಪಳು ಹಾಗೂ ಭಾವನಾತ್ಮಕ ಜೀವಿಯಾಗಿದ್ದು, ಆಧುನಿಕ ಜಗತ್ತಿನ ಜೀವನ ಶೈಲಿಗೆ ಮಾರು ಹೋಗಿ ನಿಮ್ಮತನ ಕಳೆದುಕೊಳ್ಳದಿರಿ. ಪಾಶ್ಚಾತ್ಯ ಮಾದರಿಯ ಕುರುಕಲು ತಿಂಡಿಯ ವ್ಯಾಮೋಹಕ್ಕೆ ನಿಮ್ಮ ಆರೋಗ್ಯ ಹಾಳು ಮಾಡಿಕೋಳ್ಳಬೇಡಿ ಎಂದು ವಿದ್ಯಾರ್ಥಿನಿಯರಿಗೆ ಬುದ್ದಿಮಾತು ಹೇಳಿದರು.ರಾಷ್ಟ್ರೊತ್ಥಾನ ಪರಿಷತ್ತಿನ ಪೂರ್ಣಾವಧಿ ಕಾರ್ಯಕರ್ತರಾದ ತಾಲೂಕಿನ ನಾಗರಾಳ ಗ್ರಾಮದ ಶ್ರೀನಿವಾಸ ಕೃಷ್ಣಗೌಡ ಪಾಟೀಲ, ರಾಷ್ಟ್ರೋತ್ಥಾನ ಪರಿಷತ್ತಿನ ಬಾಗಲಕೋಟೆ ಜಿಲ್ಲಾ ಸಂಯೋಜಕ ಹನುಮಂತ ನಾಗರಾಳ ಉಪಸ್ಥಿತರಿದ್ದರು.

ಮಹಿಳಾ ಸಬಲೀಕರಣ ಘಟಕದ ಕಾರ್ಯಧ್ಯಕ್ಷೆ ಪ್ರೊ.ಸರೋಜಿನಿ ಡಿ. ಅಂಬಿಗೇರ ಸ್ವಾಗತಿಸಿದರು. ಐಕ್ಯೂಎಸಿ ಸಹ-ಸಂಯೋಜಕ ಪ್ರೊ.ಎಂ.ಎಸ್. ಲಂಗೋಟಿ ಪರಿಚಯಿಸಿದರು, ಪ್ರೊ.ಎ.ಸಿ. ಕೆರೂರ ನಿರೂಪಿಸಿದರು. ಪ್ರೊ.ಗೀತಾ ಮೇತ್ರಿ ವಂದಿಸಿದರು. ಮಹಾವಿದ್ಯಾಲಯದ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.