ಸಾರಾಂಶ
ಅಂಬೇಡ್ಕರ್ ಜಯಂತಿ, ಭಾವಚಿತ್ರಕ್ಕೆ ಪೂಜೆ, ಜೆಡಿಎಸ್ ನಿಂದ ಆಚರಣೆ, ಸಂವಿಧಾನ ಶಿಲ್ಪಿ ಜನ್ಮದಿನ
ವಿಜಯಪುರ:
ವಿಜಯಪುರ ಜಿಲ್ಲಾ ಜನತಾ ದಳ(ಜಾತ್ಯತೀತ)ಪಕ್ಷದ ಕಾರ್ಯಲಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಆಚರಣೆ ಮಾಡಲಾಯಿತು. ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ನಿಂಗನಗೌಡ ಸೋಲಾಪೂರ ಗೌರವ ಸಮರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಎಸ್ಸಿ ಘಟಕದ ಅಧ್ಯಕ್ಷ ಸುಭಾಸ ನಾಯಕ ಮುಖಂಡರಾದ ರಾಜು ಹಿಪ್ಪರಗಿ, ಮಲ್ಲು ತೊರವಿ, ರವಿ ಚವ್ಹಾಣ, ಬಾಬು ಕಾಸಗೇರಿ, ದಿಲೀಪ, ಪ್ರಭಾಕರ, ವಿಶಾಲ ದೇವರಮನಿ ಮತಿತ್ತರರು ಉಪಸ್ಥಿತರಿದ್ದರು.