ಸಾರಾಂಶ
ಕಾರವಾರ: ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ಅಪಘಾತಗಳು ಹೆಚ್ಚಾಗುತ್ತಿದ್ದು, ಎನ್.ಪಿ.ಸಿ.ಐ.ಎಲ್ ಕೈಗಾದವರು ಆ್ಯಂಬುಲೆನ್ಸ್ ನೀಡಿರುವುದು ಸ್ಥಳೀಯರಿಗೆ ಸಹಾಯವಾಗಲಿದೆ. ಈ ಆ್ಯಂಬುಲೆನ್ಸ್ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಸತೀಶ ಸೈಲ್ ಹೇಳಿದರು.ಇಲ್ಲಿನ ನಗರಸಭೆ ಆವರಣದಲ್ಲಿ ಎನ್.ಪಿ.ಸಿ.ಐ.ಎಲ್ ಕೈಗಾದಿಂದ ಆ್ಯಂಬುಲೆನ್ಸ್ ವಾಹನ ಹಸ್ತಾಂತರ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಅನುದಾನದಿಂದ ವಿದ್ಯಾರ್ಥಿನಿಲಯಗಳಿಗೆ ಸಾಮಗ್ರಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ
ಮಾತನಾಡಿ, ಕೈಗಾದವರು ಕಾರವಾರ ಅಭಿವೃದ್ಧಿಗೆ ಕೈ ಜೋಡಿಸುತ್ತಿದ್ದು, ಗುಡ್ಡಗಾಡು ಪ್ರದೇಶಗಳಿಂದ ಹೊಂದಿರುವುದರಿಂದ ಜನರು ಶವ ಸಂಸ್ಕಾರ ಮಾಡಲು ಹರಸಾಹಸ ಪಡುತ್ತಿದ್ದಾರೆ. ಅವರ ಅನುಕೂಲಕ್ಕಾಗಿ 4 ಗ್ರಾಪಂಗೆ ಒಂದರಂತೆ 4 ಮುಕ್ತಿ ವಾಹನ ಸಮೇತ ಚಾಲಕರನ್ನು ಒದಗಿಸುವಂತೆ ಎನ್.ಪಿ.ಸಿ.ಎಲ್ ಅಧಿಕಾರಿಗೆ ಮನವಿ ಮಾಡಿದ ಅವರು, ನಗರ ವ್ಯಾಪ್ತಿಯಲ್ಲಿ ಇರುವ ಗುಡ್ಡಳ್ಳಿಯು ಅಭಿವೃದ್ಧಿಯಲ್ಲಿ ಹಿಂದೂಳಿದ ಕಾರಣ ನಗರಸಭೆ ವತಿಯಿಂದ ಬಾವಿ ವ್ಯವಸ್ಥೆ, ಶಾಲೆಗೆ ಸುಣ್ಣಬಣ್ಣ ಮಾಡಿಸಲಾಗಿದೆ. ಅಂಗನವಾಡಿ ನಿರ್ಮಿಸಲಾಗಿದೆ. ಸಮರ್ಪಕ ರಸ್ತೆ ಇಲ್ಲದೇ ಅಲ್ಲಿನ ಜನರು, ವಿದ್ಯಾರ್ಥಿಗಳು ಓಡಾಡಲು ತೊಂದರೆ ಅನುಭವಿಸುತ್ತಿದ್ದಾರೆ. ಗುಡ್ಡಳ್ಳಿಗೆ ಒಮ್ಮೆ ಭೇಟಿ ನೀಡಿ ಪರಿಶೀಲಿಸಿ ಸಮರ್ಪಕ ರಸ್ತೆಯನ್ನು ಕೈಗಾದ ಎನ್.ಪಿ.ಸಿ.ಎಲ್ ವತಿಯಿಂದ ನಿರ್ಮಿಸುವಂತೆ ಎನ್ಪಿಸಿಎಲ್ ಅಧಿಕಾರಿಗಳಿಗೆ ತಿಳಿಸಿದರು.ಕೈಗಾ ಸೈಟ್ ಡೈರೆಕ್ಟರ್ ವಿನೋದಕುಮಾರ ಮಾತನಾಡಿ, ಕೈಗಾದ ಸಿಎಸ್ಆರ್ ಅನುದಾನದಡಿ ಕೈಗಾ ವ್ಯಾಪ್ತಿಯ ಪ್ರದೇಶಗಳನ್ನು ಅಭಿವೃದ್ಧಿ ಪಡಿಸುತ್ತಿದ್ದು, ಶಿಕ್ಷಣ ಆರೋಗ್ಯ, ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದೆ. ಕಳೆದ ಬಾರಿ ಒಂದು ಆ್ಯಂಬುಲೆನ್ಸ್ ನೀಡಲಾಗಿದ್ದು, ಈ ಬಾರಿಯು ಒಂದು ಆ್ಯಂಬುಲೆನ್ಸ್ ನೀಡಲಾಗಿದೆ. ಪ್ರತಿ
ವರ್ಷದಲ್ಲಿ ₹10-15 ಕೋಟಿಯನ್ನು ಕೈಗಾ ವ್ಯಾಪ್ತಿ ಬರುವ ಹಳ್ಳಿಗಳ ಜನ ಸಾಮ್ಯಾನರಿಗೆ ಸಹಾಯಮಾಡುವ ದೃಷ್ಟಿಯಿಂದ ಹಾಗೂ ಅಭಿವೃದ್ಧಿಗೆ ಖರ್ಚು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.ವಿಧಾನ ಪರಿಷತ್ ಸದಸ್ಯ ಗಣಪತಿ ಡಿ. ಉಳ್ವೇಕರ, ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ, ಕೈಗಾದ ಅಧಿಕಾರಿಗಳಾದ ಎಸ್.ಜಿ. ತಿಪ್ಪೇಸ್ವಾಮಿ, ಗಣೇಶ ಗಾವಂಕರ, ಜಗದೀಶ ಗುನಗಾ, ನಗರಸಭೆ ಉಪಾಧ್ಯಕ್ಷೆ ಪ್ರೀತಿ ಜೋಶಿ, ಪೌರಯುಕ್ತ ಜಗದೀಶ ಹುಲಗಜ್ಜಿ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))