ರಾಷ್ಟ್ರೀಯ ಮಹಾಮಂಡಳಕ್ಕೆ ನಿರ್ದೇಶಕರಾಗಿ ಅಮಿತ ಕೋರೆ ಆಯ್ಕೆ

| Published : Feb 18 2024, 01:36 AM IST

ರಾಷ್ಟ್ರೀಯ ಮಹಾಮಂಡಳಕ್ಕೆ ನಿರ್ದೇಶಕರಾಗಿ ಅಮಿತ ಕೋರೆ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಫೆ.15 ರಂದು ದೆಹಲಿಯಲ್ಲಿ ಜರುಗಿದ ಚುನಾವಣೆಯಲ್ಲಿ ಕರ್ನಾಟಕದಿಂದ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷರು, ಹಾಲಿ ನಿರ್ದೇಶಕರಾದ ಅಮಿತ ಪ್ರಭಾಕರ ಕೋರೆ ಆಯ್ಕೆಯಾದರು. ಈ ಕುರಿತು ಮಹಾಮಂಡಳಿಯ ಚುನಾವಣಾ ಅಧಿಕಾರಿ ಮೇಕಲಾ ಚೈತನ್ಯ ಪ್ರಸಾದ ಇವರು ಫೆ. 15 ರಂದು ಜರುಗಿದ ಮಹಾಮಂಡಳಿಯ ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳ ನಿಯಮಿತ, ಹೊಸದೆಹಲಿ ಇದರ ಆಡಳಿತ ಮಂಡಳಿಯ ನಿರ್ದೇಶಕರಾಗಿ ಅಮಿತ ಪ್ರಭಾಕರ ಕೋರೆ ಅವರು 3 ನೇ ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಹಾಮಂಡಳಿಯ 2024 - 29ರ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಫೆ.15 ರಂದು ದೆಹಲಿಯಲ್ಲಿ ಜರುಗಿದ ಚುನಾವಣೆಯಲ್ಲಿ ಕರ್ನಾಟಕದಿಂದ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷರು, ಹಾಲಿ ನಿರ್ದೇಶಕರಾದ ಅಮಿತ ಪ್ರಭಾಕರ ಕೋರೆ ಆಯ್ಕೆಯಾದರು. ಈ ಕುರಿತು ಮಹಾಮಂಡಳಿಯ ಚುನಾವಣಾ ಅಧಿಕಾರಿ ಮೇಕಲಾ ಚೈತನ್ಯ ಪ್ರಸಾದ ಇವರು ಫೆ. 15 ರಂದು ಜರುಗಿದ ಮಹಾಮಂಡಳಿಯ ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದರು.ಅಮಿತ ಕೋರೆ 2014ರಲ್ಲಿ ಪ್ರಥಮ ಬಾರಿಗೆ ಮಹಾಮಂಡಳಿಯ ನಿರ್ದೇಶಕರಾಗಿ ಹಾಗೂ ಉಪಾಧ್ಯಕ್ಷರಾಗಿಯೂ, 2019 ರಲ್ಲಿ 2 ನೇ ಬಾರಿ ನಿರ್ದೇಶಕರಾಗಿ ಆಗಿದ್ದರು. ಸಕ್ಕರೆ ಕಾರ್ಖಾನೆಯ ತಾಂತ್ರಿಕತೆ ಹಾಗೂ ಆಡಳಿತದ ಬಗ್ಗೆ ಉತ್ತಮ ಜ್ಞಾನ ಮತ್ತು ಅನುಭವ ಹೊಂದಿರುವ ಅವರ ಹಿಂದಿನ ಅವಧಿಯಲ್ಲಿನ ಕಾರ್ಯವೈಖರಿಯನ್ನು ಮೆಚ್ಚಿದ ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಕರ್ನಾಟಕ ವಿಭಾಗದಿಂದ ಈಗ 3 ನೇ ಬಾರಿ ಅವರನ್ನು ಅವಿರೋಧವಾಗಿ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ ಎಂದು ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ತಿಳಿಸಿದರು.