ರಾಮನಾಥಪುರ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ತುಳುಷಷ್ಠಿ ಮಹಾ ರಥೋತ್ಸವ ಇದೇ ಡಿಸೆಂಬರ್ 26ರಂದು ನಡೆಯುವ ಹಿನ್ನೆಲೆಯಲ್ಲಿ ರಾಮನಾಥಪುರದಲ್ಲಿ ಎಲ್ಲೆಂದರಲ್ಲಿ ಜನಸಂದಣಿಯಿದ್ದು ಜಾತ್ರೆಮೈದಾನ, ದೇವಾಲಯಗಳು ಮತ್ತು ಕಾವೇರಿ ನದಿ ಸ್ನಾನಘಟ್ಟದಲ್ಲಿ ಭಕ್ತರಿಂದ ತುಂಬಿ ತುಳುಕಿತು. ಡಿಸಂಬರ್ 26ರಂದು ಜರುಗಲಿದ್ದು, ಅಲ್ಲಿಯವರೆಗೆ ಒಂದು ತಿಂಗಳ ಕಾಲ ಪ್ರತಿನಿತ್ಯವೂ ಸಹ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಭಾನುವಾರ ಸಹ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ವಿವಿಧೆಡೆಗಳಿಂದ ರಾಮನಾಥಪುರಕ್ಕೆ ಆಗಮಿಸಿದ ಸಾವಿರಾರು ಭಕ್ತರ ಸಂಖ್ಯೆಯು ಹೆಚ್ಚಿದ್ದರಿಂದ ಎಲ್ಲೆಂದರಲ್ಲಿ ಜನಜಂಗುಳಿಯಿತ್ತು.

ಕನ್ನಡಪ್ರಭ ವಾರ್ತೆ ರಾಮನಾಥಪುರ

"ದಕ್ಷಿಣ ಕಾಶಿ " ಎಂದೇ ಪ್ರಖ್ಯಾತಿ ಹೊಂದಿರುವ ರಾಮನಾಥಪುರ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ತುಳುಷಷ್ಠಿ ಮಹಾ ರಥೋತ್ಸವ ಇದೇ ಡಿಸೆಂಬರ್ 26ರಂದು ನಡೆಯುವ ಹಿನ್ನೆಲೆಯಲ್ಲಿ ರಾಮನಾಥಪುರದಲ್ಲಿ ಎಲ್ಲೆಂದರಲ್ಲಿ ಜನಸಂದಣಿಯಿದ್ದು ಜಾತ್ರೆಮೈದಾನ, ದೇವಾಲಯಗಳು ಮತ್ತು ಕಾವೇರಿ ನದಿ ಸ್ನಾನಘಟ್ಟದಲ್ಲಿ ಭಕ್ತರಿಂದ ತುಂಬಿ ತುಳುಕಿತು. ಕಳೆದ ತಿಂಗಳು ನವಂಬರ್ 26ರಂದು ಪ್ರಸನ್ನ ಶ್ರೀ ಸುಬ್ರಮಣ್ಯಸ್ವಾಮಿ ರಥೋತ್ಸವ ಆರಂಭಗೊಂಡಿತ್ತು. ಈಗ ತುಳು ಷಷ್ಠಿಯ ಮಹಾ ರಥೋತ್ಸವ ಇದೇ ಡಿಸಂಬರ್ 26ರಂದು ಜರುಗಲಿದ್ದು, ಅಲ್ಲಿಯವರೆಗೆ ಒಂದು ತಿಂಗಳ ಕಾಲ ಪ್ರತಿನಿತ್ಯವೂ ಸಹ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಭಾನುವಾರ ಸಹ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ವಿವಿಧೆಡೆಗಳಿಂದ ರಾಮನಾಥಪುರಕ್ಕೆ ಆಗಮಿಸಿದ ಸಾವಿರಾರು ಭಕ್ತರ ಸಂಖ್ಯೆಯು ಹೆಚ್ಚಿದ್ದರಿಂದ ಎಲ್ಲೆಂದರಲ್ಲಿ ಜನಜಂಗುಳಿಯಿತ್ತು. ಭಕ್ತರು ಸುಬ್ರಮಣ್ಯಸ್ವಾಮಿ ದೇವಾಲಯಲ್ಲಿ ಹರಕೆ ತೀರಿಸಿ, ವಾಸಾಂಜನೇಯ, ಅಗಸ್ತೇಶ್ವರ, ಪಟ್ಟಾಭಿರಾಮ, ರಾಘವೇಂದ್ರಮಠ, ವರದಾನ ಬಸವೇಶ್ವರ, ಚತುರ್ಯುಗಮೂರ್ತಿ ರಾಮೇಶ್ವರ ಸೇರಿದಂತೆ ವಿವಿಧ ದೇವಲಯಗಳಿಗೆ ಸುಮಾರು 10 ಸಾವಿರಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು.