ಅಡಿಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘ ಅಸ್ತಿತ್ವಕ್ಕೆ

| Published : May 25 2025, 02:19 AM IST

ಸಾರಾಂಶ

ಮಾಗಡಿ: ಕೇಂದ್ರ ಸರ್ಕಾರ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಂಬಲ ಬೆಲೆಗೆ ಅಡಿಕೆ ಖರೀದಿಸುವ ಮೂಲಕ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘ ಅಸ್ತಿತ್ವಕ್ಕೆ ತಂದಿದೆ ಎಂದು ನೂತನ ನಿರ್ದೇಶಕ ಕುದೂರು ಪುರುಷೋತ್ತಮ್ ತಿಳಿಸಿದರು.

ಮಾಗಡಿ: ಕೇಂದ್ರ ಸರ್ಕಾರ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಂಬಲ ಬೆಲೆಗೆ ಅಡಿಕೆ ಖರೀದಿಸುವ ಮೂಲಕ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘ ಅಸ್ತಿತ್ವಕ್ಕೆ ತಂದಿದೆ ಎಂದು ನೂತನ ನಿರ್ದೇಶಕ ಕುದೂರು ಪುರುಷೋತ್ತಮ್ ತಿಳಿಸಿದರು.

ಸಹಕಾರ ಸಂಘದ ನಿರ್ದೇಶಕರಾಗಿ ಪ್ರಮಾಣ ಪತ್ರ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸುವ ರೀತಿ ಕೇಂದ್ರ ಸರ್ಕಾರ ಬೆಂಬಲ ಬೆಲೆಯಲ್ಲಿ ಅಡಿಕೆ ಖರೀದಿಸಲಿದೆ. ಮೊದಲ ಬಾರಿಗೆ ಕೇಂದ್ರ ಸರ್ಕಾರ 18 ಜಿಲ್ಲೆ ಒಳಗೊಂಡಂತೆ ಅಡಿಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘ ಜಾರಿಗೆ ತಂದಿದೆ. ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ನಮ್ಮ ತಾಲೂಕಿನಲ್ಲೂ ಒಂದು ಸಾವಿರಕ್ಕೂ ಹೆಚ್ಚು ರೈತರು ಷೇರು ಪಡೆದಿದ್ದು ಸೋಲೂರಿನಲ್ಲಿ ರೈತ ಖರೀದಿ ಕೇಂದ್ರ ಆರಂಭ ಮಾಡಿ ಅಡಿಕೆ ಬೆಳೆಗಾರರಿಗೆ ಅನುಕೂಲ ಮಾಡಿಕೊಡಲಾಗುವುದು. ಮಾಗಡಿ ತಾಲೂಕಿಗೆ ನಾಲ್ಕು ನಿರ್ದೇಶಕ ಸ್ಥಾನ ನೀಡಲಾಗಿದೆ. ಒಟ್ಟು 18 ನಿರ್ದೇಶಕ ಸ್ಥಾನ ಒಳಗೊಂಡಿದ್ದು ಮೈಸೂರು ಪ್ರಾಂತ್ಯ ಒಳಗೊಂಡಿದೆ. ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಮಂಗಳೂರು, ತುಮಕೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವು ಜಿಲ್ಲೆಗಳು ಸೇರಲಿದೆ ಎಂದು ತಿಳಿಸಿದರು.

ಅಡಿಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘಕ್ಕೆ 19 ನಿರ್ದೇಶಕರಲ್ಲಿ ಮಾಗಡಿ ತಾಲೂಕಿನಿಂದ ಕುದೂರು ಪುರುಷೋತ್ತಮ್, ಮಾದಿಗೊಂಡನಹಳ್ಳಿ ಹನುಮೇಗೌಡ್, ಕೆಂಪಸಾಗರ ಕೆ.ಟಿ.ಮಂಜುನಾಥ್, ಸೋಲೂರು ಚಂದ್ರಣ್ಣ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.

ಪದಾಧಿಕಾರಿಗಳು: ಅಧ್ಯಕ್ಷರಾಗಿ ಚೋಳನಾಯಕನಹಳ್ಳಿ ಹನುಮಂತಯ್ಯ,ಉಪಾಧ್ಯಕ್ಷರಾಗಿ ಕುಣಿಗಲ್ ಶ್ರೀನಿವಾಸಗೌಡ ಆಯ್ಕೆಯಾಗಿದ್ದು, ನಿರ್ದೇಶಕರಾಗಿ ಚನ್ನಪಟ್ಟಣ ತಾಲೂಕಿನ ಎಚ್.ವಿ.ಚಂದ್ರು, ಕುಮಾರ್, ದೊಡ್ಡಬಳ್ಳಾಪುರದ ಜಿ.ಕೆಂಪೇಗೌಡ ಟಿ.ಮಂಜುನಾಥ್, ಕುಣಿಗಲ್ ಬಿ.ಶಿವಣ್ಣ, ಎಚ್.ಎನ್, ಶ್ರೀನಿವಾಸಗೌಡ, ಚಿತ್ರದುರ್ಗ ಎಸ್‌.ಜಿ.ಹನುಮಂತರಾಯ, ಬೆಂಗಳೂರಿನ ಡಿ.ಹನುಮಂತಯ್ಯ, ಜಿ.ವಿ.ನಾರಾಯಣಸ್ವಾಮಿ, ಎಂ.ಹೇಮಾ, ಟಿ.ಎಲ್.ಲೀಲಾವತಿ, ಮಂಡ್ಯ ಮಹದೇವಯ್ಯ, ಕನಕಪುರ ಚಿನ್ನಸ್ವಾಮಿ ಆಯ್ಕೆಯಾಗಿದ್ದಾರೆ.

(ಫೋಟೋ ಕ್ಯಾಪ್ಷನ್‌)

ರೈತರ ಅಡಿಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘ ನೂತನ ಅಧ್ಯಕ್ಷರಾಗಿ ಚೋಳನಾಯಕನಹಳ್ಳಿ ಹನುಮಂತಯ್ಯ ಪ್ರಮಾಣ ಪತ್ರ ಸ್ವೀಕರಿಸಿದರು.