ಸಾರಾಂಶ
ಮಹೇಂದ್ರ ದೇವನೂರುಕನ್ನಡಪ್ರಭ ವಾರ್ತೆ ಮೈಸೂರುಮಕ್ಕಳ ಶಿಕ್ಷಣ, ಆರೋಗ್ಯ, ಕ್ರೀಡೆ, ಕಲೆ, ಚಿತ್ರಕಲೆ ಎಲ್ಲವೂ ವಾಣಿಜ್ಯೀಕರಣವಾದ ಈ ಕಾಲಘಟ್ಟದಲ್ಲಿ ಲಾಭ, ನಷ್ಟವಿಲ್ಲದ ಶಿಬಿರವೊಂದು ಮಕ್ಕಳ ಭಾವನೆಗೆ ಬಣ್ಣ ಹಚ್ಚುವ ಕೆಲಸ ಮಾಡುತ್ತಿದೆ.ನಗರದ ಗನ್ ಹೌಸ್ ವೃತ್ತ ಸಮೀಪದ ಜೆಎಸ್ಎಸ್ ಬಾಲಜಗತ್ನಲ್ಲಿ ಆಯೋಜಿಸಿರುವ ಚಿತ್ರಕಲಾ ಶಿಬಿರವು ಮಕ್ಕಳಲ್ಲಿನ ಪ್ರತಿಭೆಗೆ ಸೂಕ್ತ ವೇದಿಕೆ ಒದಗಿಸುತ್ತಿದೆ. ಸುಮಾರು 22 ದಿನಗಳ ಈ ಬೇಸಿಗೆ ಶಿಬಿರವು ಹೊಸ ಬಗೆಯ ಕಲಾವಿದರನ್ನು ಹುಟ್ಟುಹಾಕುವುದರಲ್ಲಿ ಸಂಶಯವಿಲ್ಲ.ಕಲಾವಿದರಾಗಬೇಕು ಎಂಬ ಬಯಕೆಯನ್ನೊತ್ತ ಅನೇಕ ಮಕ್ಕಳ ಜೀವನಕ್ಕೆ ಹೊಸ ರೂಪ ಕೊಡುವ ಈ ಶಿಬಿರಕ್ಕೆ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಸಾಮಾನ್ಯವಾಗಿ ಬೇಸಿಗೆ ಶಿಬಿರಗಳೆಂದರೆ ಯೋಗ, ಸಮರ ಕಲೆ, ಚಿತ್ರಕಲೆ, ಜಾನಪದ, ರಂಗಕಲೆ ಹೀಗೆ ಎಲ್ಲವನ್ನೂ ಮಕ್ಕಳಿಗೆ ಹೇಳಿ ಕೊಡುವ ಶಿಬಿರಗಳಿವೆ. ಆದರೆ ಚಿತ್ರಕಲೆಗಾಗಿಯೇ ಮೀಸಲಿರುವ ಶಿಬಿರ ಇದೊಂದೆ.ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆವರೆಗೆ ಈ ಶಿಬಿರ ನಡೆಯುತ್ತಿದೆ. ಮಕ್ಕಳಿಗೆ 11 ಗಂಟೆ ಸುಮಾರಿಗೆ ಸ್ನ್ಯಾಕ್ಸ್ನೀಡಲಾಗುತ್ತದೆ. ಮಧ್ಯಾಹ್ನ 1 ಗಂಟೆಗೆ ಹಿಂದಿರುಗುತ್ತಾರೆ. ವಯೋಮಾನದ ಆಧಾರದ ಮೇಲೆ ನಾಲ್ಕೈದು ಗುಂಪುಗಳಲ್ಲಿ ಚಿತ್ರ ಬಿಡಿಸುವುದನ್ನು ಕಲಿಸಲಾಗುತ್ತದೆ.ಪ್ರಮುಖವಾಗಿ ಸ್ಮರಣ ಚಿತ್ರಕಲೆ, ನಿಸರ್ಗ ಚಿತ್ರಕಲೆ, ವಸ್ತು ಚಿತ್ರಕಲೆ, ಡಿಜಾಯಿನ್ ಕಲೆ, ಎಂಬೋಜಿಂಗ್ಪೇಟಿಂಗ್, ಕ್ಯಾನ್ವಾಸ್ಪೇಟಿಂಗ್, ಪ್ರೀ ಹ್ಯಾಂಡ್ಡ್ರಾಯಿಂಗ್, ಗ್ಲಾಸ್ ಪೇಟಿಂಗ್ ಮತ್ತು ಪೇಪರ್ಕ್ರಾಫ್ಟ್ ಹೇಳಿ ಕೊಡಲಾಗುತ್ತದೆ.ಶಿಬಿರದಲ್ಲಿ ಒಂದು ದಿನ ಹೊರಗೆ ಕರೆದೊಯ್ದು ಪ್ರಕೃತಿ ಚಿತ್ರಗಳನ್ನು ಬಿಡಿಸುವುದು ಕಲಿಸಲಾಗುತ್ತದೆ. ಬಳಿಕ ಸುತ್ತೂರಿಗೆ ಭೇಟಿ ನೀಡಿ ವಾಪಸ್ಮೈಸೂರಿಗೆ ಕರೆ ತರಲಾಗುತ್ತದೆ. ಸಮಾರೋಪದ ವೇಳೆಗೆ ಮಕ್ಕಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿಜೇತರಿಗೆ ನಗದು ಬಹುಮಾನ ಹಾಗೂ ಉತ್ತಮ ಚಿತ್ರಗಳ ಪ್ರದರ್ಶನವನ್ನೂ ಆಯೋಜಿಸಲಾಗುತ್ತದೆ.-- ಬಾಕ್ಸ್--
-- ಆರಂಭವಾಗಿದ್ದು ಹೇಗೆ?--ಹಿರಿಯ ಛಾಯಾಗ್ರಾಹಕ ಎಸ್.ಎಂ. ಜಂಬುಕೇಶ್ವರ್ಸೇರಿದಂತೆ ನಗರದ ಹಿರಿಯ ಚಿತ್ರಕಲಾವಿದರು ಸೇರಿ ಚಿತ್ರಕಲಾ ಸಂಘವನ್ನು ಆರಂಭಿಸಿದರು. ಆಗ ಅದರ ಕಚೇರಿಯು ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಯ ಆವರಣದಲ್ಲಿತ್ತು. ಈ ಕಲಾವಿದರ ಸಂಸ್ಥೆಯ ಬಗ್ಗೆ ತಿಳಿದ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯು ಜಂಬುಕೇಶ್ವರ್ ಅವರ ನೇತೃತ್ವದಲ್ಲಿ ಪ್ರತಿವರ್ಷ ಮಕ್ಕಳಿಗೆ ಬೇಸಿಗೆ ಶಿಬಿರ ಆಯೋಜಿಸಲು ಸಲಹೆ ನೀಡಿದರು. ಅದರಂತೆ ಪ್ರತಿ ವರ್ಷ ಈ ಚಿತ್ರಕಲಾ ಶಿಬಿರ ನಡೆಸಲಾಗುತ್ತಿದೆ.ಇದು 16ನೇ ಶಿಬಿರ. ಕೋವಿಡ್ ಸಂದರ್ಭವನ್ನು ಹೊರತುಪಡಿಸಿ ಉಳಿದಂತೆ ಪ್ರತಿ ವರ್ಷವೂ ಶಿಬಿರ ಆಯೋಜಿಸಿಕೊಂಡು ಬರಲಾಗುತ್ತಿದೆ. ಮಕ್ಕಳು ಒಂದೇ ವರ್ಷಕ್ಕೆ ಸೀಮಿತರಾಗದೆ ಸತತವಾಗಿ ಮೂರ್ನಾಲ್ಕು ವರ್ಷದಿಂದ ಶಿಬಿರಕ್ಕೆ ಬರುತ್ತಿದ್ದಾರೆ.ಮನೆ ಕಟ್ಟಿದ್ದೀನಿ. ಅದರಲ್ಲಿ ನಾನು, ಅಪ್ಪ, ಅಮ್ಮ ಇರುತ್ತೀವಿ ಎನ್ನುವ ಎಲ್.ಕೆ.ಜಿ ಓದುವ ಕೃಪಾ ಮುಗ್ದೆ ಹಾಗು ಬುದ್ಧಿವಂತೆ. ಮನೆಯ ಚಿತ್ರದ ಜತೆಗೆ ಶಿಕ್ಷಣಕ್ಕೆ ಅನುಕೂಲವಾಗುವ ವಿವಿಧ ಆಕೃತಿಗಳನ್ನು ಬಿಟ್ಟು ಅವುಗಳ ಹೆಸರು ಹೇಳುತ್ತಾಳೆ.---ಕೋಟ್ಎಸ್ಸೆಸ್ಸೆಲ್ಸಿ ಮುಗಿಸಿ, ಈಗ ಎಸ್.ಡಿ.ಎಂ ಕಾಲೇಜಿಗೆ ಪಿಯು ಓದಲು ಸೇರುತ್ತಿದ್ದೇನೆ. ಮೂರು ವರ್ಷದಿಂದ ಶಿಬಿರಕ್ಕೆ ಬರುತ್ತಿದ್ದೇನೆ. ಮನೆಯಲ್ಲಿ ಕಾಲೇಜಿಗೆ ಹೋಗುತ್ತಿದ್ದೀಯ ಶಿಬಿರಕ್ಕೆ ಯಾಕೆ ಎನ್ನುತ್ತಿದ್ದರು. ಆದರೆ ಮನೆಯಲ್ಲಿ ಕುಳಿತು ಸಮಯ ಕಳೆಯುವ ಬದಲು ಇಲ್ಲಿ ಏನಾದರೂ ಹೊಸದಾಗಿ ಕಲಿಯಬಹುದು. ಅದಕ್ಕಾಗಿ ಕಾಲೇಜಿಗೆ ಹೋದರು ಬರುತ್ತೇನೆ. ಚಿತ್ರಕಲೆಯ ಮೇಲಿನ ಆಸಕ್ತಿ ಹೆಚ್ಚಾಗಿದೆ.- ಬಿ. ಲಿಖಿತಾ.---ನಾನು ನಾಲ್ಕು ವರ್ಷದಿಂದ ಶಿಬಿರಕ್ಕೆ ಬರುತ್ತಿದ್ದೇನೆ. ಚಿತ್ರ ಬರೆಯುವವರಿಗೆ ಉತ್ತಮ ಪ್ರೋತ್ಸಾಹ ಕೊಡುತ್ತಾರೆ. ಚೆನ್ನಾಗಿ ಹೇಳಿ ಕೊಡುತ್ತಾರೆ. ಆದ್ದರಿಂದ ಪ್ರತಿ ವರ್ಷ ಶಿಬಿರಕ್ಕೆ ಬರುತ್ತೇನೆ.
- ಪಿ.ಕೆ. ಮೋನಿಷಾ.