ಅಥ್ಲೆಟಿಕ್ಸ್‌ಗೂ ಪ್ರೋತ್ಸಾಹ ನೀಡುವುದು ಅಗತ್ಯ: ಆರ್‌.ಸಿ.ಬಿದರಿ

| Published : Feb 08 2024, 01:31 AM IST

ಅಥ್ಲೆಟಿಕ್ಸ್‌ಗೂ ಪ್ರೋತ್ಸಾಹ ನೀಡುವುದು ಅಗತ್ಯ: ಆರ್‌.ಸಿ.ಬಿದರಿ
Share this Article
  • FB
  • TW
  • Linkdin
  • Email

ಸಾರಾಂಶ

9ನೇ ಅಂತರಶಾಲಾ ಕಾಲೇಜುಗಳ ಅಥ್ಲೆಟಿಕ್ ಕ್ರೀಡಾಕೂಟ ಸಮಾರೋಪದಲ್ಲಿ ಪ್ರೊ.ಡಾ.ಆರ್.ಸಿ.ಬಿದರಿ ಮಾತನಾಡಿ ಅಥ್ಲೆಟಿಕ್ಸ್‌ಗೂ ಪ್ರೋತ್ಸಾಹ ನೀಡುವುದು ಅಗತ್ಯ ಎಂದು ಪ್ರತಿಪಾದಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕ್ರಿಕೆಟ್ ಮತ್ತು ಪುಟಬಾಲ್ ಜೊತೆ ಅಥ್ಲೆಟಿಕ್ಸ್‌ಗೂ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದು ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಜನರಲ್ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕ ಪ್ರೊ.ಡಾ.ಆರ್.ಸಿ.ಬಿದರಿ ಹೇಳಿದರು.

ನಗರದ ಬಿಎಲ್‌ಡಿಇ ಸಂಸ್ಥೆಯ ಶ್ರೀ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜಿನ ಕ್ರೀಡಾಂಗಣದಲ್ಲಿ ದಿ.ಡಾ.ಸಿ.ಆರ್.ಬಿದರಿ ಸ್ಮರಣಾರ್ಥ ನಡೆದ 9ನೇ ಅಂತರಶಾಲಾ ಕಾಲೇಜುಗಳ ಅಥ್ಲೆಟಿಕ್ ಕ್ರೀಡಾಕೂಟ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಡಾ.ಸಿ.ಆರ್.ಬಿದರಿ ಅವರು ವೈದ್ಯ ವೃತ್ತಿಯ ಜೊತೆಗೆ ಅಥ್ಲೈಟಿಕ್ ಕ್ರೀಡಾಪಟುವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಉತ್ತಮ ಸಾಧನೆ ಮಾಡಿದ್ದರು. ಅಥ್ಲೆಟಿಕ್ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಲು ಅವರ ಸ್ಮರಣಾರ್ಥ ಈ ಕ್ರೀಡಾಕೂಟ ಆಯೋಜಿಸಲಾಗಿದೆ. ಅಥ್ಲೆಟಿಕ್ ಕ್ರೀಡಾಪಟುಗಳಿಗೆ ಅಗತ್ಯವಾದ ಪ್ರೋತ್ಸಾಹ, ಸೌಲಭ್ಯ ಅಗತ್ಯವಿದೆ. ಕೀಡೆಯಿಂದ ಶಿಸ್ತು, ಬದ್ಧತೆ, ಉತ್ತಮ ಸ್ನೇಹ, ಕ್ರೀಡಾ ಮನೋಭಾವ, ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಸಹಾಯವಾಗುತ್ತದೆ ಎಂದರು.

ಸಮಕುಲಾಧಿಪತಿ ಡಾ.ವೈ.ಎಂ.ಜಯರಾಜ ಮಾತನಾಡಿ, ಈ ಕ್ರೀಡಾಕೂಟದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಿದ್ದಾರೆ. ಈ ಮೂಲಕ ಡಾ.ಸಿ.ಆರ್.ಬಿದರಿ ಅವರಿಗೆ ಗೌರವ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ.ಆರ್.ಬಿ.ಕೊಟ್ನಾಳ ಮಾತನಾಡಿ, ಬಿಎಲ್‌ಡಿಇ ಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ಕ್ರೀಡಾ ಸೌಲಭ್ಯಗಳನ್ನು ಮತ್ತು ತರಬೇತಿಗೆ ನೀಡಲಾಗುತ್ತಿದೆ ಎಂದರು.

ದಿ.ಡಾ.ಸಿ.ಆರ್.ಬಿದರಿ ಕುಟುಂಬ ವತಿಯಿಂದ 100 ಮೀಟರ ಓಟದ ನಾಲ್ಕು ನಾನಾ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪೆಡೆದ ಎಂಟು ಕ್ರೀಡಾಪಟುಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಈ ಕ್ರೀಡಾಕೂಟದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ 58 ಶಾಲಾ ಕಾಲೇಜುಗಳಿಂದ ಸುಮಾರು 1000 ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಬಿಎಲ್‌ಡಿಇ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ವಿ.ಜಿ.ಸಂಗಮ, ಆಡಳಿತಾಧಿಕಾರಿ ಪ್ರೊ.ಎಸ್.ಎಚ್. ಲಗಳಿ, ಪ್ರೊ.ಐ.ಎಸ್.ಕಾಳಪ್ಪನವರ, ಪ್ರೊ.ಬಿ.ಆರ್.ಪಾಟೀಲ, ಪ್ರೊ.ಎಸ್.ಎಸ್.ಕೋರಿ, ಕಾಲೇಜಿನ ದೈಹಿಕ ನಿರ್ದೇಶಕ ಐ.ಎಸ್.ಇಕ್ಕಳಕಿ, ಭಾರತಿ ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಉಪಪ್ರಾಂಶುಪಾಲ ಡಾ.ಪ್ರದೀಪ ಮಾಳಜಿ ಸ್ವಾಗತಿಸಿದರು.

----------

100 ಮೀಟರ ಓಟದ ಚಿನ್ನದ ಪದಕ ವಿಜೇತರ ಪಟ್ಟಿ

ಪ್ರಾಥಮಿಕ ಶಾಲಾ ಬಾಲಕರ ವಿಭಾಗ:

ಅರವಿಂದ ಡಾಕು ರಾಠೊಡ-ಎಸ್.ಎಸ್.ಪ್ರಾಥಮಿಕ ಶಾಲೆ ಬ ವಿಜಯಪುರ

ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗ:

ವೈಷ್ಣವಿ ಎಸ್.ಲಮಾಣಿ- ಆಂಗ್ಲ ಮಾಧ್ಯಮ ಮಾದ್ಯಮಿಕ ಪ್ರಾಥಮಿಕ ಶಾಲೆ ತಿಕೋಟಾ.

ಪ್ರೌಢಶಾಲೆ ಬಾಲಕರ ವಿಭಾಗ:

ಮನೋಜ ಚನ್ನಾ- ಎಸ್.ಆರ್.ಮರಿಮಠ ಪ್ರೌಢಶಾಲೆ ಶಿವಣಗಿ

ಪ್ರೌಢಶಾಲೆ ಬಾಲಕಿಯರ ವಿಭಾಗ:

ಬಸೀರಾ ಮುಜಾವರ-ಎ.ಬಿ.ಜತ್ತಿ. ಪ್ರೌಢಶಾಲೆ ತಿಕೋಟಾ

ಪದವಿ ಪೂರ್ವ ಬಾಲಕರ ವಿಭಾಗ:

ಸುನಿಲ ಜಮಾದಾರ- ಎ.ಬಿ. ಸಾಲಾಕ್ಕಿ ಪದವಿ ಪೂರ್ವ ಮಹಾವಿದ್ಯಾಯ ದೇವರಹಿಪ್ಪರಗಿ

ಪದವಿ ಪೂರ್ವ ಬಾಲಕಿಯರ ವಿಭಾಗ:

ಚೈತ್ರಾ ಮಿಸಾಳ- ಶ್ರಿ.ಎ.ಬಿ.ಜತ್ತಿ. ಪದವಿ ಪೂರ್ವ ಮಹಾವಿದ್ಯಾಯ ತಿಕೋಟಾ

ಪದವಿ ಪುರುಷರ ವಿಭಾಗ:

ಸಚಿನ ರಾಠೊಡ-ಎಸ್.ಬಿ.ಆಟ್ಸ್ ಮತ್ತು ಕೆಸಿಪಿ ಸೈನ್ಸ್‌ ಪದವಿ ಮಹಾವಿದ್ಯಾಲಯ ವಿಜಯಪುರ

ಪದವಿ ಮಹಿಳೆಯರ ವಿಭಾಗ:

ಶ್ರೇಯಾ ಜಿ.ನಾಯಕೊಡಿ- ಬಿ.ಎಚ್.ಎಸ್ ಆಟ್ಸ್, ಕಾಮರ್ಸ್ ಮತ್ತು ಟಿಜಿಪಿ ಸೈನ್ಸ್‌ ಪದವಿ ಮಹಾವಿದ್ಯಾಲಯ ಜಮಖಂಡಿ