ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ರೆಡ್ ರಿಬ್ಬನ್ ಘಟಕದ ವತಿಯಿಂದ “ಋತುಚಕ್ರ ನೈರ್ಮಲ್ಯ ದಿನಾಚರಣೆ” ಪ್ರಯುಕ್ತ ಆರೋಗ್ಯ ಅರಿವು ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.ಋತು ಚಕ್ರದ ಬಗ್ಗೆ ಯಾವುದೇ ರೀತಿಯ ಹಿಂಜರಿಕೆ ಇರಬಾರದು. ಋತು ಚಕ್ರವನ್ನು ಶಾಪವಾಗಿ ಸ್ವೀಕರಿಸದೆ ವರವಾಗಿ ಸ್ವೀಕರಿಸಬೇಕು. ಇದರ ಬಗ್ಗೆ ಸುತ್ತಲಿನ ಜನರಿಗೂ ಸಹ ಅರಿವು ಮೂಡಿಸಬೇಕು. ಪ್ರಾಕೃತಿಕವಾಗಿ ಸಹ ಋತುಚಕ್ರವು ಒಂದು ಬೆಳವಣಿಗೆ, ಜಂಕ್ ಪುಡ್ ತ್ಯಜಿಸಿ ಮನೆಯಲ್ಲಿ ಮಾಡುವ ಆಹಾರವನ್ನು ಹೆಚ್ಚು ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಡಾ.ಶೃತಿ ಅವರು ಇದೇ ವೇಳೆ ಕಾಲೇಜಿನ ಹೆಣ್ಣು ಮಕ್ಕಳಿಗೆ ಸಲಹೆ ನೀಡಿದರು.
ಆಪ್ತ ಸಮಾಲೋಚರಾದ ಮಾದೇಶ್ ಮಾತನಾಡಿ, ನಮ್ಮ ಆಹಾರ ಪದ್ಧತಿ ರಾಸಾಯನಿಕ ಆಗಿರುವುದರಿಂದ ಮನುಷ್ಯನ ಜೀವಿತಾವಧಿ ದಿನೇ ದಿನೇ ಕ್ಷೀಣಿಸುತ್ತಿದೆ. ಪೌಷ್ಟಿಕಾಂಶ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು, ದೈಹಿಕ ಚಟುವಟಿಕೆಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.ಅಧ್ಯಕ್ಷಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಎಚ್.ಎಸ್. ಕೊಂಗಳಪ್ಪ ಮಾತನಾಡಿ, ಆರೋಗ್ಯವೇ ಭಾಗ್ಯ, ಆರೋಗ್ಯ ಚೆನ್ನಾಗಿದ್ದರೆ ಏನಾದರೂ ಸಾಧಿಸಬಹುದು. ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಮಾನಸಿಕ ಸ್ಥಿರತೆ ಕಾಯ್ದುಕೊಳ್ಳಬೇಕು ಹಾಗೂ ಪ್ರತಿನಿತ್ಯ ಯೋಗ ಮಾಡುವುದರಿಂದ
ಉತ್ತಮ ಆರೋಗ್ಯ ಹೊಂದಬಹುದಾಗಿದೆ ಎಂದರು.ಐಕ್ಯೂಎಸಿ ಸಂಚಾಲಕಿ ಮಮತ, ರೆಡ್ ರಿಬ್ಬನ್ ಘಟಕದ ಸಂಚಾಲಕ ಶ್ರೀಮತಿ ಪುಟ್ಟಮ್ಮ ಇನ್ನಿತರಿದ್ದರು.--- 1ಕೆಜಿಎಲ್ 29ಕೊಳ್ಳೇಗಾಲದ ಜೆಎಸ್ ಎಸ್ ಮಹಿಳಾ ಕಾಲೇಜಿನಲ್ಲಿ ಅಯೋಜಿಸಿದ್ದ ಆರೋಗ್ಯ ಅರಿವು ಕಾರ್ಯಕ್ರಮಕ್ಕೆ ಡಾ. ಶೃತಿ ಚಾಲನೆ ನೀಡಿದರು. ಡಾ. ಕೊಂಗಳಪ್ಪ, ಮಮತ, ಪುಟ್ಟಮ್ಮ ಇನ್ನಿತರಿದ್ದರು.--