ಗರ್ಭಿಣಿ ಸ್ತ್ರೀಯರಿಗೆ ಉಡಿ ತುಂಬಿ ಸಿಮಂತ ಕಾರ್ಯಕ್ರಮ

| Published : Jan 11 2024, 01:31 AM IST

ಗರ್ಭಿಣಿ ಸ್ತ್ರೀಯರಿಗೆ ಉಡಿ ತುಂಬಿ ಸಿಮಂತ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದ ಅಂಗವಾಗಿ ಗರ್ಭಿಣಿ ಸ್ತ್ರೀಯರಿಗೆ ತಾಯಿಯಿಂದ ಮಗುವಿಗೆ ಎಚ್ಐವಿ, ಶಿಫಿಲಿಸ್ ಮತ್ತು ಹೆಪ್ಟೈಟಿಸ್ ಹರಡುವಿಕೆ ನಿರ್ಮೂಲನೆಗಾಗಿ ಆಂದೋಲನ ಕಾರ್ಯಕ್ರಮ ನಡೆಯಿತು.

ಔರಾದ್: ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದ ಅಂಗವಾಗಿ ಗರ್ಭಿಣಿ ಸ್ತ್ರೀಯರಿಗೆ ತಾಯಿಯಿಂದ ಮಗುವಿಗೆ ಎಚ್ಐವಿ, ಶಿಫಿಲಿಸ್ ಮತ್ತು ಹೆಪ್ಟೈಟಿಸ್ ಹರಡುವಿಕೆ ನಿರ್ಮೂಲನೆಗಾಗಿ ಆಂದೋಲನ ಕಾರ್ಯಕ್ರಮ ನಡೆಯಿತು.

ಎನ್‌ಸಿಡಿ ವೈದ್ಯೆ ಡಾ. ಅಕ್ಷತಾ ಉದ್ಘಾಟಿಸಿ ಮಾತನಾಡಿ ಗರ್ಭಿಣಿಯರು ಕಾಲ ಕಾಲಕ್ಕೆ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ. ತಪಾಸಣೆ ಮಾಡಿಸಿಕೊಳ್ಳದೆ ಹೆರಿಗೆ ಬಂದ ಸಂದರ್ಭ ರಕ್ತ ಹೀನತೆ ಇರುವವರಿಗೆ ರಕ್ತ ಸ್ತ್ರಾವವಾದರೇ, ಬಿಪಿ ಕಡಿಮೆಯಾಗಿ ಹಾರ್ಟ, ಲೀವರ್‌ ನಿಲುಗಡೆಯಾಗಿ, ಕಿಡ್ನಿ ವೈಫಲ್ಯ ಇನ್ನಿತರ ತೊಂದರೆಗಳಿಂದ ತಾಯಿ ಮತ್ತು ಮಗುವಿನ ಜೀವಕ್ಕೆ ಅಪಾಯ ಹೆಚ್ಚು. ಅದಕ್ಕಾಗಿ ಕಾಲ-ಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಐಸಿಟಿಸಿಯ ಆಪ್ತ ಸಮಾಲೋಚಕಿ ಪುಷ್ಪಾಜಂಲಿ ಎಮ್ ಪಾಟೀಲ ಮಾತನಾಡಿ, ಎಚ್ಐವಿ ಸ್ಥಿತಿಗತಿ ಮೂದಲ ಮೂರು ತಿಂಗಳ ಅವಧಿಯಲ್ಲಿ ಒಳಗಡೆ ಎಚ್ಐವಿ, ಶಿಫಿಲಿಸ್ ಮತ್ತು ಹೆಪ್ಟೈಟಿಸ್ ಬಿ ಪರಿಕ್ಷೆಯನ್ನು ಮಾಡಿಕೊಳ್ಳಬೇಕು ಏಕೆಂದರೆ ನಿಮ್ಮಿಂದ ಹುಟ್ಟುವ ಮಗುವಿಗೆ ಈ ರೋಗಗಳು ತಡೆಯಲು ಸಹಕಾರಿಯಾಗುತ್ತದೆ ಇದಕ್ಕಾಗಿ ಪ್ರತಿ ಗರ್ಭಿಣಿ ಮಹಿಳೆಯರು ತಪಾಸಣೆಗೆ ಒಳಪಡಿಸುವ ಮೂಲಕ ಜಾಗೃತಿ ವಹಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ 40 ಗರ್ಭಿಣಿ ಮಹಿಳೆಯರಿಗೆ ಬ್ಲೌಸ್ ಫಿಸ್, ಬಳೆ, ಬಾಳೆಹಣ್ಣು, ಅರಿಶಿಣ, ಅಕ್ಕಿ, ಕುಂಕುಮ, ಅಡಿಕೆ, ವಿಳ್ಯದೆಲೇ ನಿಡುವ ಮೊಲಕ ಉಡಿ ತುಂಬಿ ಸಿಮಂತ ಕಾರ್ಯಕ್ರಮ ಮಾಡಿದರು.

ರಾಷ್ಟ್ರೀಯ ಕಿಶೋರ್ ಸ್ವಾಸ್ಥ್ಯ ಕಾರ್ಯಕ್ರಮ ಆಪ್ತ ಅಂಬಿಕಾ ದುನಗೆ, ಎಎನ್ಎಮ್ ಶೋಭಾ, ರಾಧಾ, ಹಿರಿಯ ಪ್ರಯೋಗಾಲ ತಂತ್ರಜ್ಞೆ ಆಶಾಲತಾ, ಶುಶುಶ್ರಕಿ ಕಾಂತಮ್ಮ, ಶಾಂತ, ಸಂಗೀತ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಇದ್ದರು.