ಬಾಕಿ ಕೇಳಿದ್ದಕ್ಕೆ ಬೇಕರಿ ಮಾಲೀಕನಿಗೆ ಚಾಕು ಇರಿತ

| Published : Feb 18 2025, 12:32 AM IST

ಸಾರಾಂಶ

ಬಾಕಿ ಹಣ ಕೇಳಿದ ಎಂಬ ಕಾರಣಕ್ಕೆ ಬೇಕರಿ ಮಾಲೀಕನಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿರುವ ಘಟನೆ ನಗರದ ಬೇತೂರು ರಸ್ತೆಯಲ್ಲಿ ನಡೆದಿದೆ.

ದಾವಣಗೆರೆ: ಬಾಕಿ ಹಣ ಕೇಳಿದ ಎಂಬ ಕಾರಣಕ್ಕೆ ಬೇಕರಿ ಮಾಲೀಕನಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿರುವ ಘಟನೆ ನಗರದ ಬೇತೂರು ರಸ್ತೆಯಲ್ಲಿ ನಡೆದಿದೆ.

ಅಯ್ಯಂಗಾರ್ ಬೇಕರಿಯ ಸಿದ್ದೇಶ್ (40) ಚಾಕು ಇರಿತಕ್ಕೊಳಗಾದ ಮಾಲೀಕ. ಸಿದ್ದೇಶ್ ಅವರ ಬೇಕರಿಯಲ್ಲಿ ಮಂಜುನಾಥ ಎಂಬಾತ ₹115 ಮೊತ್ತಕ್ಕೆ ವಸ್ತುಗಳನ್ನು ಖರೀದಿಸಿದ್ದ. ಈ ವ್ಯವಹಾರದ ಬಾಕಿ ಹಣ ಕೇಳಿದ್ದರಿಂದ ಮಾತಿಗೆ ಮಾತು ಬೆಳೆದಿದೆ. ಮಂಜುನಾಥ ಈ ವೇಳೆ ಸಿದ್ದೇಶ್‌ಗೆ ಚಾಕುವಿನಿಂದ ಇರಿದಿದ್ದಾನೆ.

ಕೂಡಲೇ ಸಿದ್ದೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರೋಪಿ ಮಂಜುನಾಥನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- - - (ಸಾಂದರ್ಭಿಕ)