ಕುಶಾಲನಗರದ ಪ್ರಮುಖ ಮಸೀದಿಗಳಲ್ಲಿ ಬಕ್ರೀದ್ ವಿಶೇಷ ಪ್ರಾರ್ಥನೆ

| Published : Jun 08 2025, 02:40 AM IST

ಕುಶಾಲನಗರದ ಪ್ರಮುಖ ಮಸೀದಿಗಳಲ್ಲಿ ಬಕ್ರೀದ್ ವಿಶೇಷ ಪ್ರಾರ್ಥನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಕ್ರೀದ್‌ ಹಬ್ಬವನ್ನು ಕುಶಾಲನಗರದ ಪ್ರಮುಖ ಮಸೀದಿಗಳಲ್ಲಿ ಆಚರಿಸಲಾಯಿತು.

ಕುಶಾಲನಗರ: ಬಕ್ರೀದ್ ಹಬ್ಬವನ್ನು ಕುಶಾಲನಗರದ ಪ್ರಮುಖ ಮಸೀದಿಗಳಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಕುಶಾಲನಗರದ ಶಾಫಿ ಹಾಗೂ ಹನಫಿ ಸಮುದಾಯ ಬಾಂಧವರು ಮಸೀದಿಗಳಲ್ಲಿ ಬಕ್ರೀದ್ ನ‌ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಿಸಿದರು. ನಾಡಿನ ಎಲ್ಲೆಡೆ ಸರ್ವ ಸಮುದಾಯದವರು ಶಾಂತಿ, ಸಮಾಧಾನದಿಂದಿರಲು ಹಾಗೂ ಉತ್ತಮ ಬೆಳೆ,‌ ಮಳೆಯಾಗಲು ಸಾಮೂಹಿಕವಾಗಿ ಪ್ರಾರ್ಥಿಸಲಾಯಿತು. ಪರಸ್ಪರ ಬಕ್ರೀದ್ ಹಬ್ಬದ ಶುಭಾಶಯಗಳನ್ನು ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದರುಕುಶಾಲನಗರ ಪಟ್ಟಣದ ಹಿಲಾಲ್ ಮಸೀದಿಯ ಧರ್ಮ ಗುರುಗಳು ಧಾರ್ಮಿಕ ಪ್ರವಚನ ನೀಡಿದರು. ಪಟ್ಟಣ ವ್ಯಾಪ್ತಿಯ ದಾರುಲ್ ಉಲೂಂ ಮದ್ರಸ ಪ್ರಾಂಶುಪಾಲ ತಮ್ಲೀಕ್ ದಾರಿಮಿ, ದಾರುಲ್ ಉಲೂಂ ಮದ್ರಸದ ಅಧ್ಯಕ್ಷ ಹುಸೇನ್, ಧಾರ್ಮಿಕ ಸಂದೇಶ ನೀಡಿದರು.ಬೆಳಗ್ಗೆ ಏಳರಿಂದ ಒಂಬತ್ತು ಮೂವತ್ತರ ತನಕ ಸಮುದಾಯ ಬಾಂಧವರು ಕುಶಾಲನಗರದ ಹಿಲಾಲ್ ಮಸೀದಿ, ಜಾಮಿಯಾ ಮಸೀದಿ, ನೂರೇ‌ ಮದೀನ, ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯ ಮಸೀದಿಗಳಲ್ಲಿ ಬಕ್ರೀದ್ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು.