ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಜೆಸಿಐ ಅಲುಮ್ನಿ ಕ್ಲಬ್ ವತಿಯಿಂದ ವಲಯ ೧೪ರ ಮೈಸೂರಿನ ಲೀ ರುಚಿ ಹೋಟೆಲ್‌ನಲ್ಲಿ ಈಚೆಗೆ ನಡೆದ ವಲಯ ಸಮ್ಮೇಳನದಲ್ಲಿ ಸೋಮವಾರಪೇಟೆ ಹಿರಿಯ ಜೇಸಿ ಸದಸ್ಯರಿಗೆ ಅತ್ಯುತ್ತಮ ತಂಡ ಅವಾರ್ಡ್ ಪಡೆಯಿತು.

ವಲಯ ೧೪ರ ಝೋನ್ ಚೇರ್ಮನ್ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯನ್ನು ವೈಸ್ ಚೇರ್ಮನ್ ಎ.ಆರ್. ಮಮತಾ, ಝೋನ್ ಡೈರೆಕ್ಟರ್ ತೇಜಸ್ವಿ, ಪೂರ್ವ ವಲಯ ಅಧಿಕಾರಿ ಬಿ.ಈ. ಅರುಣ್ ಕುಮಾರ್ ಪಡೆದರು. ಸಂಸ್ಥೆಯ ರಮೇಶ್, ಪುರುಷೋತ್ತಮ್, ಮಹೇಶ್, ಕಾಂತರಾಜ್, ಕೆ.ಎ. ಪ್ರಕಾಶ್, ಗುರುಪ್ರಸಾದ್, ಗಿರೀಶ್, ಮಾಯಾ, ಉಷಾ, ರುಬೀನಾ, ವಸಂತ್ ಇದ್ದರು.