ಬ್ಯಾರಿಕೇಡ್‌ ಗೆ ಬೈಕ್‌ ಡಿಕ್ಕಿ : ವ್ಯಕ್ತಿ ಸಾವು

| Published : May 25 2025, 02:11 AM IST

ಸಾರಾಂಶ

ಹೆದ್ದಾರಿಗೆ ಅಡ್ಡಲಾಗಿ ಹಾಕಲಾಗಿದ್ದ ಬ್ಯಾರಿಕೇಡ್‌ ಗೆ ಬೈಕ್ ಡಿಕ್ಕಿ ಹೊಡೆದು ಬೈಕ್‌ ಸವಾರ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಹೆದ್ದಾರಿಗೆ ಅಡ್ಡಲಾಗಿ ಹಾಕಲಾಗಿದ್ದ ಬ್ಯಾರಿಕೇಡ್‌ ಗೆ ಬೈಕ್ ಡಿಕ್ಕಿ ಹೊಡೆದು ಬೈಕ್‌ ಸವಾರ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ರಿಪ್ಪನ್ ಪೇಟೆ ಸಮೀಪದ ಅಡ್ಡೀರಿ ಗುಬ್ಬಿಗ ಹಾರೋ ಹಿತ್ತಲು ಗ್ರಾಮದ ನಿರಂಜನ 40 ಮೃತಪಟದಟ ದುರ್ದೈವಿ. ಬಿಳಲುಕೊಪ್ಪದ ಹೆದ್ದಾರಿಗೆ ಅಡ್ಡಲಾಗಿ ಬ್ಯಾರಿಕೇಡ್‌ ಹಾಕಲಾಗಿತ್ತು. ತೀರ್ಥಹಳ್ಳಿ ಕಡೆಯಿಂದ ಆಗುಂಬೆ ಕಡೆಗೆ ಹೋಗುವ ವೇಳೆ ಮಳೆಯಾಗುತ್ತಿದ್ದ ಕಾರಣ ಬೈಕ್‌ ಸವಾರ ಗೊಂದಲಗೊಂಡಿದ್ದರಿಂದ ಬೈಕ್ ನೇರವಾಗಿ ಬ್ಯಾರಿಕೇಡಿಗೆ ಅಪ್ಪಳಿಸಿದೆ. ಮಾರಣಾಂತಿಕವಾಗಿ ಗಾಯಗೊಂಡಿದ್ದ ಅವರನ್ನು ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮೃತರಾಗಿದ್ದಾರೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುರುವಾರ ಮಧ್ಯಾಹ್ನ ಇದೇ ಜಾಗದಲ್ಲಿ ನಡೆದ ಅಪಘಾತದಲ್ಲಿ ಬೈಕ್ ಸವಾರರೊಬ್ಬ ಮೃತಪಟ್ಟಿದ್ದು, ಮಾರನೇ ದಿನವೇ ಇಲ್ಲಿ ಇನ್ನೊಂದು ದುರ್ಘಟನೆ ನಡೆದಂತಾಗಿದೆ.