ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಮಂಗಳೂರಿನಲ್ಲಿ ನಡೆದ ಹಿಂದೂ ಕಾರ್ಯಕರ್ತನ ಹತ್ಯೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಮೆರವಣಿಗೆಯು ವಿಜಯಪುರ ಗಾಂಧಿ ವೃತ್ತದಲ್ಲಿ ಸಭೆ ಸೇರಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಓಲೈಕೆ ರಾಜಕಾರಣಕ್ಕೆ ಮತ್ತೊಬ್ಬ ಹಿಂದೂ ಸಹೋದರನನ್ನು ಕಳೆದುಕೊಂಡಿದ್ದೇವೆ. ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಇದೆಯೋ ಇಲ್ಲವೋ ಎಂಬುವುದು ಯಕ್ಷಪ್ರಶ್ನೆಯಾಗಿದೆ. ಕರ್ನಾಟಕವು ತಾಲಿಬಾನಿ ರಾಜ್ಯವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಿಗಡಾಯಿಸಿದೆ. ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಸ್ಡಿಪಿಐ, ಪಿಎಫ್ಐ ಮೇಲಿನ ಪ್ರೀತಿಯ ಸುಹಾಸ್ ಹತ್ಯೆಯಂಥ ದುಷ್ಕೃತ್ಯ ಹಿಂದೂಗಳ ಬೆದರಿಕೆ ಹಿಂದುಗಳ ಹತ್ಯೆಗೆ ಶಕ್ತಿ ಕೊಟ್ಟಂತಿದೆ. ದುಷ್ಟರಿಗೆ ಆನೆ ಬಲ ಬಂದಂತಾಗಿದೆ ಎಂದು ಕಿಡಿಕಾರಿದರು.ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಇದು ಪೂರ್ವ ನಿಯೋಜಿತ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಹಿಂದೂ ಸಂಘಟನೆಗಳನ್ನು ಬೆದರಿಸುವ ಕೆಲಸ ನಡೆದಿದೆ. ಗುಪ್ತಚರ ಇಲಾಖೆ ಸತ್ತು ಹೋಗಿದೆಯೇ? ರಾಜ್ಯದ ಕಾನೂನು ಸುವ್ಯವಸ್ಥೆ ಏನಾಗಿದೆ? ಎಂದು ಪ್ರಶ್ನಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ವಿಜಯಕುಮಾರ ಪಾಟೀಲ, ಸುರೇಶ ಬಿರಾದಾರ, ಉಮೇಶ ಕೋಳಕೂರ, ಈರಣ್ಣ ರಾವೂರ, ಮಲ್ಲನಗೌಡ ಪಾಟೀಲ, ಭೀಮಾಶಂಕರ ಹದನೂರ, ಬಸವರಾಜ ಬೈಚಬಾಳ, ಗೋಪಾಲ ಘಟಕಾಂಬಳೆ, ವಿಜಯ ಜೋಶಿ, ರವಿಕಾಂತ ಬಗಲಿ, ಪಾಪುಸಿಂಗ ರಜಪೂತ, ಶ್ರೀಹರ್ಷಗೌಡ ಪಾಟೀಲ, ರಾಜು ಬಿರಾದಾರ, ಸಂತೋಷ ಪಾಟೀಲ ಡಂಬಳ, ಬಾಲರಾಜ ರೆಡ್ಡಿ, ಮಂಜುನಾಥ ಮಿಸೆ, ರಾಜೇಶ ತವಸೆ, ಮಹೇಶ ಒಡೆಯರ, ವಿಕಾಶ ಪದಕಿ, ರಾಜಕುಮಾರ ಸಗಾಯಿ, ವಿಷ್ಣು ಜಾಧವ, ಜಗದೀಶ ಮುಚ್ಚಂಡಿ, ಚನ್ನು ಚಿನಗುಂಡಿ, ವಿಜಯ ಹಿರೇಮಠ, ಸಂತೋಷ ನಿಂಬರಗಿ, ಆನಂದ ಮುಚ್ಚಂಡಿ, ಕಲ್ಮೇಶ ಹಿರೇಮಠ, ಸಿದ್ದು ಮಲ್ಲಿಕಾರ್ಜುನ ಮಠ, ಶಾಂತಾ ಉತ್ಲಾಸ್ಕರ, ಬಸವರಾಜ ತೊನಶ್ಯಾಳ, ಸಂತೋಷ ಮಮದಾಪುರ, ವಾರೀಶ ಕುಲಕರ್ಣಿ, ರಾಮಚಂದ್ರ ಚವ್ಹಾಣ ಸೇರಿ ಹಲವರಿದ್ದರು.